Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಪ್ಪನಿಲ್ಲದ ಮನೆ
Share:
Poems January 10, 2021 ಕೆ.ಆರ್ ಮಂಗಳಾ

ಅಪ್ಪನಿಲ್ಲದ ಮನೆ

ಅಪ್ಪನಿಲ್ಲದ ಮನೆ
ಎಲ್ಲ ಇದ್ದೂ ಭಣಗುಡುತ್ತಿದೆ.
ಎದೆಯ ಬೆಳಕೇ ಆರಿ ಹೋದಂತೆ
ಮನದಲ್ಲಿ ಗಾಢ ಕಾರ್ಗತ್ತಲೆ

ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು
ಅಪ್ಪ ಮೌನ ಹೊದ್ದು ನಿರ್ಲಿಪ್ತನಾಗುತ್ತಿದ್ದ
ಅವ್ವನ ಮಾತಿಗೆ ಕಿವಿಯಾದೆವು
ಅಪ್ಪನ ಮೌನಕ್ಕೆ ಕಣ್ಣಾದೆವು…

ಕೊನೆಗೆ ಮಾತು ಮರೆತ ಅಪ್ಪ
ನೆನಪುಗಳನ್ನೂ ತೂರಿಬಿಟ್ಟ
ಬಿಸಿ ರೊಟ್ಟಿಗೆ, ರಾಗಿ ಗಂಜಿಗೆ,
ಹಸಿವು- ಬಾಯಾರಿಕೆಗೆ,
ರಾತ್ರಿ- ಬೆಳಗುಗಳಿಗೆ ಸ್ಪಂದಿಸದೇ
ತನ್ನೊಳಗೆ ಇಳಿಯುತ್ತಾ
ಮೌನವಾಗಿ
ಕಣ್ಣು ತೆರೆಯುವುದನ್ನೇ ನಿಲ್ಲಿಸಿದ…
ಜೋಪಾನ ಮಾಡಿದ ಹೆಂಡತಿ,
ಒಡಲ ಮಕ್ಕಳು, ಮೊಮ್ಮಕ್ಕಳು,
ಜೀವದಂತಿದ್ದ ಗೆಳೆಯರು,
ಹತ್ತಿರದ ಬಸವ ಬಂಧುಗಳು,
ದೂರದ ಬಳಗಕ್ಕೆ ಕರೆ ಮಾಡಲು
ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದ ಮೊಬೈಲ್,
ಬಸವ ಟಿವಿ ನೋಡಲು
ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ ರಿಮೋಟ್,
ಕೊನೆಗೆ ಎದೆಯ ಮೇಲಿನ
ಲಿಂಗವನ್ನೂ ಮರೆತು ಬಿಟ್ಟ…

ಮುಂಜಾನೆಯ ಅಂಗಳ,
ನಡುಮನೆಯ ಕುರ್ಚಿ,
ಕೋಣೆಯ ಮಂಚ,
ಮೂಲೆಯಲ್ಲಿನ ಕೋಲು,
ಟೀಪಾಯಿ ಮೇಲಿನ ಕನ್ನಡಕ,
ಸಿಂಕ್ ಪಕ್ಕದಲ್ಲಿನ ಹಲ್ಲಿನ ಸೆಟ್,
ಕಾಯುತ್ತಿರುವಂತಿವೆ ಅಪ್ಪನಿಗಾಗಿ…

ಇದ್ದಾಗ ಅಪ್ಪನ ಜಗತ್ತಿನಲ್ಲಿ
ತೂರಿಕೊಳ್ಳದ ಸಂಕಟ,
ಮಸಣದ ಮಣ್ಣಲ್ಲಿ
ವಿಭೂತಿ ಬೂದಿಯ ಹಚ್ಚಿಸಿಕೊಳ್ಳುತ್ತಿದ್ದ
ಅಪ್ಪನ ಶಾಂತ ಮುಖ
ಮಿಸುಕಾಡುತ್ತಿದೆ ಮನದಲ್ಲಿ ಒಂದೆ ಸಮ
ಬಯಲಲ್ಲಿ ಬಯಲಾದ ಅಪ್ಪ
ಪದಾರ್ಥದಿಂದ ಪ್ರಸಾದಕ್ಕೆ
ಎಲ್ಲೆ ದಾಟಿದ ಜೀವ
ಮಾತನಾಡದೆಯೇ
ಕಲಕುತಿದೆ ಎದೆಯ ಭಾವ
ಅಪ್ಪನಿಲ್ಲದ ಮನೆ
ಹೇಗೆ ಮರೆಯುವುದು ನೋವ?

Previous post ಇದ್ದಷ್ಟೇ…
ಇದ್ದಷ್ಟೇ…
Next post ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...

Comments 1

  1. ಪಂಕಜಾ
    Jan 14, 2021 Reply

    ಎರಡು ವರ್ಷಗಳ ಹಿಂದೆ ನಾನೂ ತಂದೆಯನ್ನು ಕಳೆದುಕೊಂಡೆ, ಇದೇ ನೋವನ್ನು ಅನುಭವಿಸಿದೆ, ಓದುತ್ತಾ ಕಣ್ಣು ಹನಿಯಾದವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಶರಣ- ಎಂದರೆ…
ಶರಣ- ಎಂದರೆ…
March 6, 2020
Copyright © 2025 Bayalu