Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಪ್ಪನಿಲ್ಲದ ಮನೆ
Share:
Poems January 10, 2021 ಕೆ.ಆರ್ ಮಂಗಳಾ

ಅಪ್ಪನಿಲ್ಲದ ಮನೆ

ಅಪ್ಪನಿಲ್ಲದ ಮನೆ
ಎಲ್ಲ ಇದ್ದೂ ಭಣಗುಡುತ್ತಿದೆ.
ಎದೆಯ ಬೆಳಕೇ ಆರಿ ಹೋದಂತೆ
ಮನದಲ್ಲಿ ಗಾಢ ಕಾರ್ಗತ್ತಲೆ

ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು
ಅಪ್ಪ ಮೌನ ಹೊದ್ದು ನಿರ್ಲಿಪ್ತನಾಗುತ್ತಿದ್ದ
ಅವ್ವನ ಮಾತಿಗೆ ಕಿವಿಯಾದೆವು
ಅಪ್ಪನ ಮೌನಕ್ಕೆ ಕಣ್ಣಾದೆವು…

ಕೊನೆಗೆ ಮಾತು ಮರೆತ ಅಪ್ಪ
ನೆನಪುಗಳನ್ನೂ ತೂರಿಬಿಟ್ಟ
ಬಿಸಿ ರೊಟ್ಟಿಗೆ, ರಾಗಿ ಗಂಜಿಗೆ,
ಹಸಿವು- ಬಾಯಾರಿಕೆಗೆ,
ರಾತ್ರಿ- ಬೆಳಗುಗಳಿಗೆ ಸ್ಪಂದಿಸದೇ
ತನ್ನೊಳಗೆ ಇಳಿಯುತ್ತಾ
ಮೌನವಾಗಿ
ಕಣ್ಣು ತೆರೆಯುವುದನ್ನೇ ನಿಲ್ಲಿಸಿದ…
ಜೋಪಾನ ಮಾಡಿದ ಹೆಂಡತಿ,
ಒಡಲ ಮಕ್ಕಳು, ಮೊಮ್ಮಕ್ಕಳು,
ಜೀವದಂತಿದ್ದ ಗೆಳೆಯರು,
ಹತ್ತಿರದ ಬಸವ ಬಂಧುಗಳು,
ದೂರದ ಬಳಗಕ್ಕೆ ಕರೆ ಮಾಡಲು
ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದ ಮೊಬೈಲ್,
ಬಸವ ಟಿವಿ ನೋಡಲು
ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ ರಿಮೋಟ್,
ಕೊನೆಗೆ ಎದೆಯ ಮೇಲಿನ
ಲಿಂಗವನ್ನೂ ಮರೆತು ಬಿಟ್ಟ…

ಮುಂಜಾನೆಯ ಅಂಗಳ,
ನಡುಮನೆಯ ಕುರ್ಚಿ,
ಕೋಣೆಯ ಮಂಚ,
ಮೂಲೆಯಲ್ಲಿನ ಕೋಲು,
ಟೀಪಾಯಿ ಮೇಲಿನ ಕನ್ನಡಕ,
ಸಿಂಕ್ ಪಕ್ಕದಲ್ಲಿನ ಹಲ್ಲಿನ ಸೆಟ್,
ಕಾಯುತ್ತಿರುವಂತಿವೆ ಅಪ್ಪನಿಗಾಗಿ…

ಇದ್ದಾಗ ಅಪ್ಪನ ಜಗತ್ತಿನಲ್ಲಿ
ತೂರಿಕೊಳ್ಳದ ಸಂಕಟ,
ಮಸಣದ ಮಣ್ಣಲ್ಲಿ
ವಿಭೂತಿ ಬೂದಿಯ ಹಚ್ಚಿಸಿಕೊಳ್ಳುತ್ತಿದ್ದ
ಅಪ್ಪನ ಶಾಂತ ಮುಖ
ಮಿಸುಕಾಡುತ್ತಿದೆ ಮನದಲ್ಲಿ ಒಂದೆ ಸಮ
ಬಯಲಲ್ಲಿ ಬಯಲಾದ ಅಪ್ಪ
ಪದಾರ್ಥದಿಂದ ಪ್ರಸಾದಕ್ಕೆ
ಎಲ್ಲೆ ದಾಟಿದ ಜೀವ
ಮಾತನಾಡದೆಯೇ
ಕಲಕುತಿದೆ ಎದೆಯ ಭಾವ
ಅಪ್ಪನಿಲ್ಲದ ಮನೆ
ಹೇಗೆ ಮರೆಯುವುದು ನೋವ?

Previous post ಇದ್ದಷ್ಟೇ…
ಇದ್ದಷ್ಟೇ…
Next post ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

Related Posts

ಕುರುಹೇ ಬಯಲು
Share:
Poems

ಕುರುಹೇ ಬಯಲು

February 16, 2026 ಜ್ಯೋತಿಲಿಂಗಪ್ಪ
ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ...
ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...

Comments 1

  1. ಪಂಕಜಾ
    Jan 14, 2021 Reply

    ಎರಡು ವರ್ಷಗಳ ಹಿಂದೆ ನಾನೂ ತಂದೆಯನ್ನು ಕಳೆದುಕೊಂಡೆ, ಇದೇ ನೋವನ್ನು ಅನುಭವಿಸಿದೆ, ಓದುತ್ತಾ ಕಣ್ಣು ಹನಿಯಾದವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಗುರುವಂದನೆ
ಗುರುವಂದನೆ
October 13, 2022
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
Copyright © 2026 Bayalu