Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಂಟಿನ ನಂಟು
Share:
Poems November 7, 2020 ಕೆ.ಆರ್ ಮಂಗಳಾ

ಗಂಟಿನ ನಂಟು

ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ
ನೂಲುವಾಗ ಗೊತ್ತಾಗಲೇ ಇಲ್ಲ
ಎಂಥ ಸಿಕ್ಕುಗಳು ಅಂತೀರಿ!
ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು

ಅಹಮಿಕೆಗೆ ಆಕ್ರೋಶದ ಗಂಟು
ಆಕ್ರೋಶಕೆ ಮದದ ಗಂಟು
ಮದಕೆ ಸೊಕ್ಕಿನ ಗಂಟು
ಸೊಕ್ಕಿಗೆ ತಿರಸ್ಕಾರದ ಗಂಟು
ತಿರಸ್ಕಾರಕ್ಕೆ ಸೇಡಿನ ಗಂಟು
ಸೇಡಿಗೆ ಭಾವದ ಗಂಟು
ಭಾವಕೆ ನಿರೀಕ್ಷೆಯಾ ಗಂಟು
ನಿರೀಕ್ಷೆಗೆ ಪ್ರೇಮದ ಗಂಟು
ಪ್ರೇಮಕೆ ಕಾಮದ ಗಂಟು
ಕಾಮಕ್ಕೆ ಬಯಕೆಯ ಗಂಟು
ಬಯಕೆಗೆ ಆಸೆಯ ಗಂಟು…
ಎಡಕ್ಕೆ ಬಲದ ಗಂಟು
ದ್ವೈತಕ್ಕೆ ಅದ್ವೈತದ ಗಂಟು
ಅಸ್ತಿತ್ವಕೆ ನಾಸ್ತಿತ್ವದ ಗಂಟು
ಮಾತಿಗೆ ಪ್ರತಿಮಾತಿನ ಗಂಟು
ಭಾವಗಳಿಗೆ ನಂಬಿಕೆಯ ಗಂಟು
ನಂಬಿಕೆಗಳಿಗೆ ಅಹಮಿಕೆಯ ಗಂಟು
ನಾನೆಂಬುದಕೆ ನನ್ನದೆಂಬ ಗಂಟು
ಕಾರಣಕ್ಕೆ- ಪ್ರತಿಕಾರಣದ ಗಂಟು…
ಹೀಗೆ ಹಾಕುತ್ತಲೇ ಹೋಗಿದ್ದೇನೆ ಗಂಟಿಗೆ ಗಂಟು

ಈ ಗಂಟುಗಳೇ
ನಡೆವ ದಾರಿಯಲಿ ಮುಳ್ಳಾದವು
ಹೃದಯಗಳ ನಡುವೆ ಬೆಟ್ಟಗಳಾದವು
ಸಂಬಂಧಗಳಲ್ಲಿ ಕಣಿವೆ ಕೊರೆದವು
ಮಾತುಗಳಲ್ಲಿ ವಿಷ ಬಿತ್ತಿದವು
ಗೊಂದಲದಲ್ಲಿ ಮುಳುಗಿಸಿದವು
ಮನದ ತಿಳಿ ಕದಡಿ ಕೊಚ್ಚೆ ಎಬ್ಬಿಸಿದವು…
ಹುಬ್ಬುಗಳ ನಡುವೆ ತೂರಿಕೊಂಡು
ನಗುವ ನುಂಗಿ ಎದೆಯ ಒತ್ತುತ್ತಲೇ ಇದ್ದವು…

ಗುರು ತೋರಿದ ಉಪಾಯದಲಿ
ನೂಲು ಹರಿಯದಂತೆ
ಗಂಟು ಬಿಚ್ಚುವ ಕಲೆ
ಸಿಕ್ಕಾಗದಂತೆ ಎಳೆಯ ನೇಯುವ ಕಲೆ
ಒಂದೊಂದಾಗಿ ತಿಳಿಯತೊಡಗಿತ್ತು
ಕಾರ್ಯ-ಕಾರಣ-ಪರಿಣಾಮಗಳ
ಭವಯಾನದ ಕರ್ಮ ಅರಿವಿಗೆ ನಿಲುಕಿತ್ತು.

Previous post ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
Next post ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 1

  1. Harsha m patil
    Nov 11, 2020 Reply

    ಗಂಟಿಗೆ ಗಂಟು ಹಾಕುತ್ತಿರುವ ನಮಗೆ ಬದುಕೇ ಗಂಟಾಗಿ ಹೋಗಿದೆ. ರಿಪೇರಿ ಮಾಡಲು ಸಾಧ್ಯವಿಲ್ಲದಂತೆ ಸಂಬಂಧಗಳನ್ನು ಹಾಳುಮಾಡಿಕೊಂಡಿದ್ದೇವೆ….. ಕಣ್ಣಿಗೆ ಕಟ್ಟುವ ಚಿತ್ರಣ ನೀಡುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹುಡುಕಾಟ…
ಹುಡುಕಾಟ…
August 8, 2021
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಬಯಲಾಟ
ಬಯಲಾಟ
March 17, 2021
ನನ್ನ ಶರಣರು…
ನನ್ನ ಶರಣರು…
April 9, 2021
ದಾಸೋಹ ತತ್ವ
ದಾಸೋಹ ತತ್ವ
January 10, 2021
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
Copyright © 2025 Bayalu