Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಂಟಿನ ನಂಟು
Share:
Poems November 7, 2020 ಕೆ.ಆರ್ ಮಂಗಳಾ

ಗಂಟಿನ ನಂಟು

ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ
ನೂಲುವಾಗ ಗೊತ್ತಾಗಲೇ ಇಲ್ಲ
ಎಂಥ ಸಿಕ್ಕುಗಳು ಅಂತೀರಿ!
ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು

ಅಹಮಿಕೆಗೆ ಆಕ್ರೋಶದ ಗಂಟು
ಆಕ್ರೋಶಕೆ ಮದದ ಗಂಟು
ಮದಕೆ ಸೊಕ್ಕಿನ ಗಂಟು
ಸೊಕ್ಕಿಗೆ ತಿರಸ್ಕಾರದ ಗಂಟು
ತಿರಸ್ಕಾರಕ್ಕೆ ಸೇಡಿನ ಗಂಟು
ಸೇಡಿಗೆ ಭಾವದ ಗಂಟು
ಭಾವಕೆ ನಿರೀಕ್ಷೆಯಾ ಗಂಟು
ನಿರೀಕ್ಷೆಗೆ ಪ್ರೇಮದ ಗಂಟು
ಪ್ರೇಮಕೆ ಕಾಮದ ಗಂಟು
ಕಾಮಕ್ಕೆ ಬಯಕೆಯ ಗಂಟು
ಬಯಕೆಗೆ ಆಸೆಯ ಗಂಟು…
ಎಡಕ್ಕೆ ಬಲದ ಗಂಟು
ದ್ವೈತಕ್ಕೆ ಅದ್ವೈತದ ಗಂಟು
ಅಸ್ತಿತ್ವಕೆ ನಾಸ್ತಿತ್ವದ ಗಂಟು
ಮಾತಿಗೆ ಪ್ರತಿಮಾತಿನ ಗಂಟು
ಭಾವಗಳಿಗೆ ನಂಬಿಕೆಯ ಗಂಟು
ನಂಬಿಕೆಗಳಿಗೆ ಅಹಮಿಕೆಯ ಗಂಟು
ನಾನೆಂಬುದಕೆ ನನ್ನದೆಂಬ ಗಂಟು
ಕಾರಣಕ್ಕೆ- ಪ್ರತಿಕಾರಣದ ಗಂಟು…
ಹೀಗೆ ಹಾಕುತ್ತಲೇ ಹೋಗಿದ್ದೇನೆ ಗಂಟಿಗೆ ಗಂಟು

ಈ ಗಂಟುಗಳೇ
ನಡೆವ ದಾರಿಯಲಿ ಮುಳ್ಳಾದವು
ಹೃದಯಗಳ ನಡುವೆ ಬೆಟ್ಟಗಳಾದವು
ಸಂಬಂಧಗಳಲ್ಲಿ ಕಣಿವೆ ಕೊರೆದವು
ಮಾತುಗಳಲ್ಲಿ ವಿಷ ಬಿತ್ತಿದವು
ಗೊಂದಲದಲ್ಲಿ ಮುಳುಗಿಸಿದವು
ಮನದ ತಿಳಿ ಕದಡಿ ಕೊಚ್ಚೆ ಎಬ್ಬಿಸಿದವು…
ಹುಬ್ಬುಗಳ ನಡುವೆ ತೂರಿಕೊಂಡು
ನಗುವ ನುಂಗಿ ಎದೆಯ ಒತ್ತುತ್ತಲೇ ಇದ್ದವು…

ಗುರು ತೋರಿದ ಉಪಾಯದಲಿ
ನೂಲು ಹರಿಯದಂತೆ
ಗಂಟು ಬಿಚ್ಚುವ ಕಲೆ
ಸಿಕ್ಕಾಗದಂತೆ ಎಳೆಯ ನೇಯುವ ಕಲೆ
ಒಂದೊಂದಾಗಿ ತಿಳಿಯತೊಡಗಿತ್ತು
ಕಾರ್ಯ-ಕಾರಣ-ಪರಿಣಾಮಗಳ
ಭವಯಾನದ ಕರ್ಮ ಅರಿವಿಗೆ ನಿಲುಕಿತ್ತು.

Previous post ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
Next post ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ

Related Posts

ಮನವೇ ಮನವೇ…
Share:
Poems

ಮನವೇ ಮನವೇ…

May 6, 2020 Bayalu
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ// ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ ವಿಲವಿಲ ಎನ್ನುತ ನಲುಗಿದೆ ನೀನು...
ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...

Comments 1

  1. Harsha m patil
    Nov 11, 2020 Reply

    ಗಂಟಿಗೆ ಗಂಟು ಹಾಕುತ್ತಿರುವ ನಮಗೆ ಬದುಕೇ ಗಂಟಾಗಿ ಹೋಗಿದೆ. ರಿಪೇರಿ ಮಾಡಲು ಸಾಧ್ಯವಿಲ್ಲದಂತೆ ಸಂಬಂಧಗಳನ್ನು ಹಾಳುಮಾಡಿಕೊಂಡಿದ್ದೇವೆ….. ಕಣ್ಣಿಗೆ ಕಟ್ಟುವ ಚಿತ್ರಣ ನೀಡುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ದಾರಿ ಬಿಡಿ…
ದಾರಿ ಬಿಡಿ…
December 6, 2020
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
Copyright © 2026 Bayalu