Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯ ಸಂತ
Share:
Poems September 7, 2020 ಜ್ಯೋತಿಲಿಂಗಪ್ಪ

ಸಂತೆಯ ಸಂತ

ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ
ಕಣ್ಣಿಗೆ ಕರುಳು ಇರಬಾರದು
ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ
ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ

ಈ ಮೂರು ಮೊಳದ ಗುಂಡಿಯ ತೋಡುವರೈದು ಮಂದಿ
ಓಡುವ ಸೂರ್ಯನ ಹಿಡಿಯಲಾಗದು ನೆರಳು
ಬಿಡಮ್ಮಾ ಇದು ಯಾವ ತತ್ವದ ಹಾಡೋ
ತಂಬೂರಿ ಮೀಟುವ ಬೆರಳು ಮೊಂಡು

ನೆನೆದರೆ ಕಾಡುವುದು ಮರೆಹು
ಮರೆದರೆ ಕಾಡುವುದು ನೆನಹು
ಅರಿದರೆ ಕಾಡುವುದು ನೆನಹು ಮರೆಹು
ಶಬ್ದದೊಳಗಣ ನಿಸದ್ದುವ ಬಲ್ಲವರೇ ಬಲ್ಲರು

ನಿನ್ನಿಂದ ನಾನರಿದೆನಲ್ಲದೆ ಎನ್ನಿಂದ ನೀನಾಗಲಿಲ್ಲ
ಅಂತರಂಗದಲಿ ಅಡಗಿಸಿಟ್ಟ ಭಾವ
ಬಹಿರಂಗದಲಿ ಪೂಜೆಗೊಳ್ಳದು
ಕಣ್ಣ ಒಳಗಣ ಬಿಂಬ ಕಣ್ಣಿಗೆ ಇಂಬು

ಬೆಟ್ಟ ಏರಿ ಬಂದವನ ಕೂಡೇನು ಕಷ್ಟ ಸುಖ
ನೆಲದಲಿ ತೆವಳುವ ಮಣ್ಣು
ಮಣ್ಣಿಲ್ಲದೆ ಇರದು
ಅಂಗವಿಲ್ಲದವಗೆ ಅಂಗಿ ತೊಡಿಸಲುಂಟೇ…

Previous post ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
Next post ಮನಸ್ಸು
ಮನಸ್ಸು

Related Posts

ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...
ಕನ್ನಡಿ ನಂಟು
Share:
Poems

ಕನ್ನಡಿ ನಂಟು

October 10, 2023 ಜ್ಯೋತಿಲಿಂಗಪ್ಪ
ಮಾಳಿಗೆ ಮನೆ ಮನೆಯೊಳಗಣ ಕತ್ತಲಿಗೆ ಬಯಲೊಳಗೊಂದು ಕನ್ನಡಿ ಕಿಲಾಡಿ ಬೆಳಕು ಕಿಂಡಿಯಲಿ ಹರಿದು ಒಳಗು ಎಲ್ಲಾ ಬೆಳಗು ಕಟ್ಟೆಯಲಿ ಕುಳಿತು ಅಜ್ಜಾ ಮೊಮ್ಮಗನ ಈ ಕನ್ನಡೀ ಕಿಲಾ ಡೀ ಆಟಾ...

Comments 2

  1. Mariswamy Gowdar
    Sep 10, 2020 Reply

    ಕಣ್ಣೊಳಗಣ ಕರುಳು ಹಿಂಗಿದಲ್ಲದೆ ನಿನ್ನ ನೋಡಲಾಗದು… ವಚನ ನೆನಪಿಸಿದಿರಿ. ಸುಂದರ ಕವನ.

  2. Nagaraju M.P
    Sep 13, 2020 Reply

    ಕವನ abstract art ಅನ್ನು ನೆನಪಿಸುವಂತಿದೆ. ನಿಮ್ಮ ಅಲ್ಲಮ ಮತ್ತು ಅಕ್ಕನ ನೆನಪಿನ ಕವನಗಳನ್ನು ನಾನು ಓದಿದ್ದೇನೆ, ಚೆನ್ನಾಗಿವೆ ಸರ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವಯೋಗ
ಶಿವಯೋಗ
July 4, 2021
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ತುತ್ತೂರಿ…
ತುತ್ತೂರಿ…
June 10, 2023
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
Copyright © 2026 Bayalu