Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯ ಸಂತ
Share:
Poems September 7, 2020 ಜ್ಯೋತಿಲಿಂಗಪ್ಪ

ಸಂತೆಯ ಸಂತ

ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ
ಕಣ್ಣಿಗೆ ಕರುಳು ಇರಬಾರದು
ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ
ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ

ಈ ಮೂರು ಮೊಳದ ಗುಂಡಿಯ ತೋಡುವರೈದು ಮಂದಿ
ಓಡುವ ಸೂರ್ಯನ ಹಿಡಿಯಲಾಗದು ನೆರಳು
ಬಿಡಮ್ಮಾ ಇದು ಯಾವ ತತ್ವದ ಹಾಡೋ
ತಂಬೂರಿ ಮೀಟುವ ಬೆರಳು ಮೊಂಡು

ನೆನೆದರೆ ಕಾಡುವುದು ಮರೆಹು
ಮರೆದರೆ ಕಾಡುವುದು ನೆನಹು
ಅರಿದರೆ ಕಾಡುವುದು ನೆನಹು ಮರೆಹು
ಶಬ್ದದೊಳಗಣ ನಿಸದ್ದುವ ಬಲ್ಲವರೇ ಬಲ್ಲರು

ನಿನ್ನಿಂದ ನಾನರಿದೆನಲ್ಲದೆ ಎನ್ನಿಂದ ನೀನಾಗಲಿಲ್ಲ
ಅಂತರಂಗದಲಿ ಅಡಗಿಸಿಟ್ಟ ಭಾವ
ಬಹಿರಂಗದಲಿ ಪೂಜೆಗೊಳ್ಳದು
ಕಣ್ಣ ಒಳಗಣ ಬಿಂಬ ಕಣ್ಣಿಗೆ ಇಂಬು

ಬೆಟ್ಟ ಏರಿ ಬಂದವನ ಕೂಡೇನು ಕಷ್ಟ ಸುಖ
ನೆಲದಲಿ ತೆವಳುವ ಮಣ್ಣು
ಮಣ್ಣಿಲ್ಲದೆ ಇರದು
ಅಂಗವಿಲ್ಲದವಗೆ ಅಂಗಿ ತೊಡಿಸಲುಂಟೇ…

Previous post ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
Next post ಮನಸ್ಸು
ಮನಸ್ಸು

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ಆಗು ಕನ್ನಡಿಯಂತೆ…
Share:
Poems

ಆಗು ಕನ್ನಡಿಯಂತೆ…

September 13, 2025 ಕೆ.ಆರ್ ಮಂಗಳಾ
ಗ್ರಹಿಸು ಸಂಗ್ರಹಿಸಬೇಡ ಏನನ್ನೂ… ಕಂಡದ್ದು ಕೇಳಿದ್ದು ಮೂಸಿದ್ದು ಮುಟ್ಟಿದ್ದು ಅನುಭವಿಸಿದ್ದು ಓದಿದ್ದು ಕೂಡ… ತೂರಿಹೋಗಲಿ ಅವಿತ ವಾಸನೆಗಳೆಲ್ಲಾ ಮುಗಿಬಿದ್ದು ಬರುವ...

Comments 2

  1. Mariswamy Gowdar
    Sep 10, 2020 Reply

    ಕಣ್ಣೊಳಗಣ ಕರುಳು ಹಿಂಗಿದಲ್ಲದೆ ನಿನ್ನ ನೋಡಲಾಗದು… ವಚನ ನೆನಪಿಸಿದಿರಿ. ಸುಂದರ ಕವನ.

  2. Nagaraju M.P
    Sep 13, 2020 Reply

    ಕವನ abstract art ಅನ್ನು ನೆನಪಿಸುವಂತಿದೆ. ನಿಮ್ಮ ಅಲ್ಲಮ ಮತ್ತು ಅಕ್ಕನ ನೆನಪಿನ ಕವನಗಳನ್ನು ನಾನು ಓದಿದ್ದೇನೆ, ಚೆನ್ನಾಗಿವೆ ಸರ್.

Leave a Reply to Mariswamy Gowdar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
Copyright © 2025 Bayalu