Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುಪಥ
Share:
Poems January 4, 2020 ಕೆ.ಆರ್ ಮಂಗಳಾ

ಗುರುಪಥ

ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು
ಕಂಡಕಂಡವರನ್ನೆಲ್ಲ ಕೇಳಿ
ಓದುಬಲ್ಲವರನ್ನೆಲ್ಲ ಹುಡುಕಿ
ಸುಸ್ತಾದದ್ದೆ ಬಂತು,
ದಾರಿ ಸಿಗಲಿಲ್ಲ

ಹೇಳುವದನ್ನೆಲ್ಲ ಹಿಡಿದು
ಓದಿದುದನ್ನೆಲ್ಲ ನಂಬಿ
ಕೇಳಿ ಅರಿತದ್ದೆ ನಿಜವೆಂದು
ಇಲ್ಲೇನೋ ಇದೆ, ಅಲ್ಲೇನೋ ಇದೆ
ಎಂದು ಅಡಿಗಡಿಗೆ ಕನವರಿಸಿದ್ದೆ ಬಂತು,
ದಾರಿ ಸಿಗಲಿಲ್ಲ.

ಬೆಳಕಿನ ಭ್ರಮೆ ಹೊತ್ತು
ಯೋಗದ ಹಠ ಹಿಡಿದು
ಹಗಲು ರಾತ್ರಿಗಳ ಪರವೆಯಿಲ್ಲದೆ
ಎಚ್ಚರಾದಾಗೆಲ್ಲ ಎದ್ದು ಕುಳಿತು
ಕಣ್ಮುಚ್ಚಿ ಕಣ್ತೆರೆದು ಹುಡುಕಿದ್ದೆ ಬಂತು,
ದಾರಿ ಸಿಗಲಿಲ್ಲ.

ವಚನ ವ್ಯಾಖ್ಯಾನಗಳಲಿ
ಭಾವಾರ್ಥಗಳ ಬೆಂಬತ್ತಿ
ಹುಡುಕಿದ್ದೆ ತಡಕಿದ್ದೆ ದಣಿದಿದ್ದೆ
ಮಾತು ಮಾತು ಮಥಿಸಿ
ವಾದ ವಿವಾದಗಳ ದೂಳೆದ್ದಿತೇ ವಿನಃ,
ದಾರಿ ಸಿಗಲಿಲ್ಲ.

ನೀನೇನೇ ಬಯಸಿದೊಡೆ ಅದ ಸಾಧಿಸಲು
ಬ್ರಹ್ಮಾಂಡವೇ ನಿನಗೆ ನೆರವಾಗಲು ಸಂಚುಹೂಡುವುದೆಂಬ
ಪಾಲೊ ಕೊಯಿಲೊ ಮಾತು
ನಿಜವಾಗೋ ಕಾಲ ಈಗ ಬಂದಿತ್ತು
ಗೊತ್ತಿರದ ಮೂಲೆಯ ಮಂದಬೆಳಕಿನಲಿ
ಗುರುಪಥ ಕಂಡಿತ್ತು, ಎದೆ ಹಗುರವಾಗಿತ್ತು
ಮಹದಾರಿ ಸಿಕ್ಕಿತ್ತು.

Previous post ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
Next post ತನ್ನ ಪರಿ ಬೇರೆ…
ತನ್ನ ಪರಿ ಬೇರೆ…

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...

Comments 2

  1. Jyothilingappa
    Jan 6, 2020 Reply

    ಕಂಡ
    ಗುರು ಪಥ
    ದಲಿ ದಾರಿ ಸಿಕ್ಕಿತೇ ಹೇಳಿ
    ನಿಜ
    ದಾರಿ ಆವುದು ‘ಬಯಲು’ವಿಗೆ.

  2. Madhukar Bannuru
    Jan 16, 2020 Reply

    ಅಕ್ಕಾ, ನಿಮಗೆ ಸಿಕ್ಕ ಗುರುಪಥ ಯಾವುದು? ನಮಗೂ ತೋರಿಸಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
Copyright © 2026 Bayalu