Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಲಿ ಸವಾರಿ…
Share:
Poems June 10, 2023 ಜ್ಯೋತಿಲಿಂಗಪ್ಪ

ಹುಲಿ ಸವಾರಿ…

ಖಾಲೀ…
ಇರುವೆಯಲ್ಲಾ ಏನಾದರೂ ನೋಡು
ಕಣ್ಣು ತುಂಬಿದೆ ನೋಡಲೇನುಂಟು ನೋಡದು

ಏನಾದರೂ ಕೇಳು
ಕಿವಿ ತುಂಬಿದೆ ಕೇಳಲೇನುಂಟು ಕೇಳದು

ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ
ತುಳುಕಾಡುತಿವೆ

ಇರು ಇಲ್ಲವಾಗಿರು
ನೆನೆ ನೆನೆದು ನೆನಹು ಅಳಿಯಲಿ

ಹುಲಿ ಸವಾರಿ ಮಾಡಿರುವೆ
ಇಳಿಯುವ ಭಯ
ಭಾವರಹಿತ ಆಗುವುದೆಂದರೆ
ಹುಲಿ ಸವಾರಿಯೇ…

ಹಳೆಯ ಗಾಯ ತಾಗಿ ನೋಯಿಸಿತೇ
ಮಾಯದ ಗಾಯ ನೋವು
ಇದ್ದೇನೋ ಇರೆನೋ….

*** *** ***

ಈ
ಮನವ
ನಿನಗೆ ಕೊಟ್ಟಿರುವೆ ಇನ್ನಾವ
ಮನದಲಿ ಧ್ಯಾನಿಸಲಿ ನಿನ್ನ

ಅಕ್ಕಾ

ನಿನ್ನ ಧ್ಯಾನಿಸುವ ವ್ಯಸನ
ಅಶನ ತೊರೆದಿರುವೆ

ಒಲಿಯುವೆಯೋ
ಒಲಿಯೆಯೋ…

ಆವ ಸಂಬಂಧವೂ ಇಲ್ಲ

ಇನ್ನೇನಿದೆ
ಕಾಯ ಮಣ್ಣಾದಡೆ
ಜೀವ ಬಯಲಾಗದೇ

ಅರಿವೇ
ನೀನಾಗಿರಲು ಇನ್ನಾರ ಕೇಳಲಿ

ಬಯಲಾಗದ ಜೀವಕೆ ಕಾಯ
ಮಣ್ಣಾಗುವುದರಿಯದು

ಈ
ಕಣ್ಣ ಕಾಯದಿಂದ
ಬಿಡಿಸು ಕಾಣುವೆ ನಿನ್ನ

ಕಾಣುವ ಕಣ್ಣಿರಲು ಕಾಯ ಮಣ್ಣು

ಧ್ಯಾನಿಸುವುದೇನು ಒಂದು ವ್ಯಸನವೇ…

ಕತೆಗಾರನಾದರೂ ಕತೆಯಲಿ ಬಾಗಿ.

Previous post ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
Next post ಮೀನಿನ ಬಯಕೆ
ಮೀನಿನ ಬಯಕೆ

Related Posts

ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 3

  1. ZABIULLA M. Asad
    Jun 12, 2023 Reply

    ನಮಸ್ತೆ ಸರ್
    ನಿಮ್ಮ ಎರಡೂ ಕವಿತೆಗಳ ಓದಿನೊಂದಿಗೆ ನನ್ನ ಮುಂಜಾವು ಸಂಪನ್ನವಾಯಿತು ಸರ್.
    ಕವಿತೆಗಳ ಅಮೂರ್ತಡೆದೆಗಿನ ಅನುಭಾವದ ನಡಿಗೆ ಆತ್ಮವನ್ನು ತಾಕಿತು. ಗಾಳಿ ಎಲೆಯನ್ನು ಸ್ಪರ್ಶಸಿದ ಹಾಗೆ…
    ಮೇಘಕೆ ಹಕ್ಕಿಯ ರೆಕ್ಕೆ ಮುಟ್ಟಿದ ಹಾಗೆ…

    ಮಣ್ಣು ಮೆಟ್ಟಿದ ದಾರಿ ಕವಿತೆಯನ್ನು ಸಹ ಓದಿದೆ.

    ಧನ್ಯವಾದಗಳು ಸರ್ 🙏🏻💐

  2. ರವಿಕುಮಾರ ಜಗಳೂರು
    Jun 14, 2023 Reply

    ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ… ಬಸವಣ್ಣನವರ ಆಶಯ ನೆನಪಾಯಿತು…

  3. ದಯಾಶಂಕರ ಮಧುಗಿರಿ
    Jun 20, 2023 Reply

    ಕತೆಗಾರನೂ ಕತೆಯಲಿ ಭಾಗಿಯಾದ ಪರಿ, ನನಗೆ ನಾನೊಡ್ಡಿದ ವಿಧಿ!

Leave a Reply to ರವಿಕುಮಾರ ಜಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭೃತ್ಯಾಚಾರ
ಭೃತ್ಯಾಚಾರ
June 5, 2021
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ದೇಹ ದೇವಾಲಯ
ದೇಹ ದೇವಾಲಯ
June 12, 2025
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
Copyright © 2025 Bayalu