Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಲಿ ಸವಾರಿ…
Share:
Poems June 10, 2023 ಜ್ಯೋತಿಲಿಂಗಪ್ಪ

ಹುಲಿ ಸವಾರಿ…

ಖಾಲೀ…
ಇರುವೆಯಲ್ಲಾ ಏನಾದರೂ ನೋಡು
ಕಣ್ಣು ತುಂಬಿದೆ ನೋಡಲೇನುಂಟು ನೋಡದು

ಏನಾದರೂ ಕೇಳು
ಕಿವಿ ತುಂಬಿದೆ ಕೇಳಲೇನುಂಟು ಕೇಳದು

ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ
ತುಳುಕಾಡುತಿವೆ

ಇರು ಇಲ್ಲವಾಗಿರು
ನೆನೆ ನೆನೆದು ನೆನಹು ಅಳಿಯಲಿ

ಹುಲಿ ಸವಾರಿ ಮಾಡಿರುವೆ
ಇಳಿಯುವ ಭಯ
ಭಾವರಹಿತ ಆಗುವುದೆಂದರೆ
ಹುಲಿ ಸವಾರಿಯೇ…

ಹಳೆಯ ಗಾಯ ತಾಗಿ ನೋಯಿಸಿತೇ
ಮಾಯದ ಗಾಯ ನೋವು
ಇದ್ದೇನೋ ಇರೆನೋ….

*** *** ***

ಈ
ಮನವ
ನಿನಗೆ ಕೊಟ್ಟಿರುವೆ ಇನ್ನಾವ
ಮನದಲಿ ಧ್ಯಾನಿಸಲಿ ನಿನ್ನ

ಅಕ್ಕಾ

ನಿನ್ನ ಧ್ಯಾನಿಸುವ ವ್ಯಸನ
ಅಶನ ತೊರೆದಿರುವೆ

ಒಲಿಯುವೆಯೋ
ಒಲಿಯೆಯೋ…

ಆವ ಸಂಬಂಧವೂ ಇಲ್ಲ

ಇನ್ನೇನಿದೆ
ಕಾಯ ಮಣ್ಣಾದಡೆ
ಜೀವ ಬಯಲಾಗದೇ

ಅರಿವೇ
ನೀನಾಗಿರಲು ಇನ್ನಾರ ಕೇಳಲಿ

ಬಯಲಾಗದ ಜೀವಕೆ ಕಾಯ
ಮಣ್ಣಾಗುವುದರಿಯದು

ಈ
ಕಣ್ಣ ಕಾಯದಿಂದ
ಬಿಡಿಸು ಕಾಣುವೆ ನಿನ್ನ

ಕಾಣುವ ಕಣ್ಣಿರಲು ಕಾಯ ಮಣ್ಣು

ಧ್ಯಾನಿಸುವುದೇನು ಒಂದು ವ್ಯಸನವೇ…

ಕತೆಗಾರನಾದರೂ ಕತೆಯಲಿ ಬಾಗಿ.

Previous post ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
Next post ಮೀನಿನ ಬಯಕೆ
ಮೀನಿನ ಬಯಕೆ

Related Posts

ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...
ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...

Comments 3

  1. ZABIULLA M. Asad
    Jun 12, 2023 Reply

    ನಮಸ್ತೆ ಸರ್
    ನಿಮ್ಮ ಎರಡೂ ಕವಿತೆಗಳ ಓದಿನೊಂದಿಗೆ ನನ್ನ ಮುಂಜಾವು ಸಂಪನ್ನವಾಯಿತು ಸರ್.
    ಕವಿತೆಗಳ ಅಮೂರ್ತಡೆದೆಗಿನ ಅನುಭಾವದ ನಡಿಗೆ ಆತ್ಮವನ್ನು ತಾಕಿತು. ಗಾಳಿ ಎಲೆಯನ್ನು ಸ್ಪರ್ಶಸಿದ ಹಾಗೆ…
    ಮೇಘಕೆ ಹಕ್ಕಿಯ ರೆಕ್ಕೆ ಮುಟ್ಟಿದ ಹಾಗೆ…

    ಮಣ್ಣು ಮೆಟ್ಟಿದ ದಾರಿ ಕವಿತೆಯನ್ನು ಸಹ ಓದಿದೆ.

    ಧನ್ಯವಾದಗಳು ಸರ್ 🙏🏻💐

  2. ರವಿಕುಮಾರ ಜಗಳೂರು
    Jun 14, 2023 Reply

    ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ… ಬಸವಣ್ಣನವರ ಆಶಯ ನೆನಪಾಯಿತು…

  3. ದಯಾಶಂಕರ ಮಧುಗಿರಿ
    Jun 20, 2023 Reply

    ಕತೆಗಾರನೂ ಕತೆಯಲಿ ಭಾಗಿಯಾದ ಪರಿ, ನನಗೆ ನಾನೊಡ್ಡಿದ ವಿಧಿ!

Leave a Reply to ದಯಾಶಂಕರ ಮಧುಗಿರಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಗಣಾಚಾರ
ಗಣಾಚಾರ
August 8, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
Copyright © 2025 Bayalu