Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ…
Share:
Poems August 8, 2021 ಜ್ಯೋತಿಲಿಂಗಪ್ಪ

ಹುಡುಕಾಟ…

ಈ
ಮರವೆ
ಯಾವಾಗ ಬರುತ್ತೋ
ಕಾಯುತಾ ಕುಳಿತಿರುವೆ

ಅಲೆದಾಡಿ ಕಾಲು ಸೋತಿವೆ
ಹುಡುಕಾಡಿ ಕಣ್ಣು ಸೋತಿವೆ

ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ
ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ

ಕೊಟ್ಟಿಗೆಯಲಿ ಕಟ್ಟಿ ಹಾಕಿರುವ
ಎತ್ತಿನ ಹೆಗಲೊಳಗೆ ಸುಕ್ಕುಸುಕ್ಕು
ಪಕ್ಕದ ಹೆಂಡದಂಗಡಿಯ ಹುಳಿ
ವಾಸನೆ ಮರೆಯದೆ ಕಟ್ಟಿದೆ

ಕಾಣುತಿದೆ
ನೀರ ಒಳಗಣ ಚಂದಿರನ ಬಿರುಕು
ಈಗಲೂ…

ಹೋದವರು ಹೋದ ದಾರಿ
ತಿರುಗಿ ಬಾರದ ದಾರಿಯಲಿ
ಕುಳಿತಿರುವೆ

ಹೆಜ್ಜೆ ಗುರುತು ಮರೆಯುವ ಮೊದಲು
ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹೋರಿ
ಹುಡುಕಬೇಕು ಮರೆಯದೆ.

Previous post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
Next post ಅರಿವು-ಮರೆವಿನಾಟ
ಅರಿವು-ಮರೆವಿನಾಟ

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Comments 3

  1. Kavyashree
    Aug 9, 2021 Reply

    ಹೌದು ಸರ್, ನಮ್ಮ ಪಂಚೇಂದ್ರಿಯಗಳೆಲ್ಲಾ ಅರಗಿಸಿಕೊಳ್ಳಲಾಗದ ರುಚಿಯ ಕಂಡಿವೆ- ಕವನ ಬಹಳ ಸೊಗಸಾಗಿದೆ.

  2. Shambhulingaiah
    Aug 14, 2021 Reply

    ತಿರುಗಿ ಬಾರದ ದಾರಿಯಲಿ
    ಕುಳಿತಿರುವೆ- ಮತ್ತೇ ಬಾರದ ದಾರಿಯನ್ನು ಸವೆಸುತ್ತಿದ್ದೇವೆ- ಸುಂದರ, ಅರ್ಥಗರ್ಭಿತ ಕವನ.

  3. Padmalaya
    Aug 21, 2021 Reply

    ಜೋತಿಲಿಂಗಪ್ಪನವರ ಕಾವ್ಯ ಸಂಚಿಕೆಯಲ್ಲಿ ಈ ಕವನ ನನಗೆ ಆಕರ್ಷಣೀಯವಾದದ್ದು.ಏಕೆಂದರೆ..ಅವರ ಕವನ ವಿಧಾನದಲ್ಲಿ ರೂಪಕಗಳು ಕರುಳು ಕೊಯ್ಸಿಕೊಳ್ಳುತ್ತವೆ.ಈ ಕವನದಲ್ಲಿ ತುಂಬಾ ಫಲವತ್ತಾಗಿ ರೂಪಕದ ಬೆಳೆ ತೆಗಯುತ್ತಾರೆ.”ಪಕ್ಕದ ಹೆಂಡದಂಗಡಿಯ ಹುಳಿ ವಾಸನೆ.” “ಅರಗಿಸಲಾರದ ರುಚಿ ಕಂಡಿದೆ ನಾಲಿಗೆ”…ಇಂತಹ ರೂಪಕಗಳು ಅಂತರಂಗದ ಆಳದಲ್ಲಿ ಮಡುಗಟ್ಟಿರುವ ಗಬ್ಬು ಗಲೀಜನ್ನ ಹಂಗಿಲ್ಲದೇ ಪ್ರಶ್ನಿಸುತ್ತವೆ…ಅವರ ಕಾವ್ಯ ಝರಿಗಾಗಿ ಅವರಿಗೊಂದು ಸಲಾಂ…..!!!!!!!!!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
October 19, 2025
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
Copyright © 2025 Bayalu