Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯ ಸಂತ
Share:
Poems September 7, 2020 ಜ್ಯೋತಿಲಿಂಗಪ್ಪ

ಸಂತೆಯ ಸಂತ

ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ
ಕಣ್ಣಿಗೆ ಕರುಳು ಇರಬಾರದು
ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ
ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ

ಈ ಮೂರು ಮೊಳದ ಗುಂಡಿಯ ತೋಡುವರೈದು ಮಂದಿ
ಓಡುವ ಸೂರ್ಯನ ಹಿಡಿಯಲಾಗದು ನೆರಳು
ಬಿಡಮ್ಮಾ ಇದು ಯಾವ ತತ್ವದ ಹಾಡೋ
ತಂಬೂರಿ ಮೀಟುವ ಬೆರಳು ಮೊಂಡು

ನೆನೆದರೆ ಕಾಡುವುದು ಮರೆಹು
ಮರೆದರೆ ಕಾಡುವುದು ನೆನಹು
ಅರಿದರೆ ಕಾಡುವುದು ನೆನಹು ಮರೆಹು
ಶಬ್ದದೊಳಗಣ ನಿಸದ್ದುವ ಬಲ್ಲವರೇ ಬಲ್ಲರು

ನಿನ್ನಿಂದ ನಾನರಿದೆನಲ್ಲದೆ ಎನ್ನಿಂದ ನೀನಾಗಲಿಲ್ಲ
ಅಂತರಂಗದಲಿ ಅಡಗಿಸಿಟ್ಟ ಭಾವ
ಬಹಿರಂಗದಲಿ ಪೂಜೆಗೊಳ್ಳದು
ಕಣ್ಣ ಒಳಗಣ ಬಿಂಬ ಕಣ್ಣಿಗೆ ಇಂಬು

ಬೆಟ್ಟ ಏರಿ ಬಂದವನ ಕೂಡೇನು ಕಷ್ಟ ಸುಖ
ನೆಲದಲಿ ತೆವಳುವ ಮಣ್ಣು
ಮಣ್ಣಿಲ್ಲದೆ ಇರದು
ಅಂಗವಿಲ್ಲದವಗೆ ಅಂಗಿ ತೊಡಿಸಲುಂಟೇ…

Previous post ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
Next post ಮನಸ್ಸು
ಮನಸ್ಸು

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...

Comments 2

  1. Mariswamy Gowdar
    Sep 10, 2020 Reply

    ಕಣ್ಣೊಳಗಣ ಕರುಳು ಹಿಂಗಿದಲ್ಲದೆ ನಿನ್ನ ನೋಡಲಾಗದು… ವಚನ ನೆನಪಿಸಿದಿರಿ. ಸುಂದರ ಕವನ.

  2. Nagaraju M.P
    Sep 13, 2020 Reply

    ಕವನ abstract art ಅನ್ನು ನೆನಪಿಸುವಂತಿದೆ. ನಿಮ್ಮ ಅಲ್ಲಮ ಮತ್ತು ಅಕ್ಕನ ನೆನಪಿನ ಕವನಗಳನ್ನು ನಾನು ಓದಿದ್ದೇನೆ, ಚೆನ್ನಾಗಿವೆ ಸರ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಎರವಲು ಮನೆ…
ಎರವಲು ಮನೆ…
August 10, 2023
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
Copyright © 2025 Bayalu