Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮುಖ- ಮುಖವಾಡ
Share:
Poems February 7, 2021 ಕೆ.ಆರ್ ಮಂಗಳಾ

ಮುಖ- ಮುಖವಾಡ

ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು
ಕೈಯಿಂದ ತಡವಿಕೊಳ್ಳುತ್ತೇನೆ
ಇದು ಮುಖವಾಡವೋ
ಇಲ್ಲಾ ನನ್ನ ಮುಖವೋ?

ಕನ್ನಡಿ ನೋಡುವಾಗೆಲ್ಲಾ
ದಿಗಿಲಾಗುತ್ತದೆ
ನಾನು ಅಂದುಕೊಂಡಿರುವಂತೆ
ಯಾಕಿಲ್ಲಿ ಕಾಣುತ್ತಿಲ್ಲ
ಇದು ನಾನಲ್ಲವಲ್ಲ…

ಗಲಿಬಿಲಿಯಾಗುತ್ತದೆ…
ಒಳ-ಹೊರ ಅಂತರಕಂಡು
ಕಾಲಕ್ಕೆ ಸಿಕ್ಕ ಹೊರ ನೋಟಕ್ಕೂ
ಮನಕ್ಕೆ ನಿಲುಕದ ಒಳ ರೂಪಿಗೂ
ಹೊಂದಿಕೆಯೇ ಆಗುತ್ತಿಲ್ಲವಲ್ಲ…

ಮೇಲು-ಮೇಲಕ್ಕೆ
ಪುಟಿಸುತ್ತಲೇ ಇರುವ
ಚಿತ್ತದಾಟದ ಹೊಲಬ ತಪ್ಪಿಸಿಕೊಂಡು
ಒಳಗಿಳಿಯಲು
ಪರಿತಪಿಸುತ್ತಲೇ ಇದ್ದೇನೆ
ಸಣ್ಣ ಕಿಂಡಿ ಕಂಡರೂ ಸಾಕು…
ಪರಕೀಯವೆನಿಸುತಿಹ ಮುಖವಾಡ
ಕಿತ್ತೊಗೆದು
ನಿಜ ಮುಖವ ಧರಿಸಲು.

Previous post ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ಲಿಂಗದ ಹಂಗೇ…
Share:
Poems

ಲಿಂಗದ ಹಂಗೇ…

September 10, 2022 ಜ್ಯೋತಿಲಿಂಗಪ್ಪ
ಹೊದಿಯೋಕೊಂದು ಆಕಾಶ ಮಲಗೋಕೊಂದು ನೆಲ ಕುಡಿಯೋಕೊಂದು ಸಿಂಧು ಉಣ್ಣೋಕೆ ಒಂದಿಷ್ಟು ಭಿಕ್ಷೆ ಹಾಡೋಕೊಂದು ತಂಬೂರಿ ಕೇಳೋಕೊಂದು ಕಿವಿ ಇನ್ನೇನು ಆಂ ಮರೆತೇ ಮೆರೆಯಲು ಒಂದು ಮರೆವು...
ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...

Comments 2

  1. ಶೋಭಾದೇವಿ, ಭಾಲ್ಕಿ
    Feb 9, 2021 Reply

    ಪರಕೀಯವೆನಿಸುತಿಹ ಮುಖವಾಡ ಕಿತ್ತೊಗೆಯಲು… ಕವನ ಚೆನ್ನಾಗಿದೆ.

  2. Jyothilingappa
    Feb 9, 2021 Reply

    ಮುಖದ ಹುಡುಕಾಟ… ಸರಳ, ಸಹಜ ಕ್ರಿಯೆಗಳ ಮೂಲಕ ಗಟ್ಟಿಯಾಗಿದೆ.

Leave a Reply to ಶೋಭಾದೇವಿ, ಭಾಲ್ಕಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
Copyright © 2025 Bayalu