Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
…ಬಯಲನೆ ಬಿತ್ತಿ
Share:
Poems August 11, 2025 ಜ್ಯೋತಿಲಿಂಗಪ್ಪ

…ಬಯಲನೆ ಬಿತ್ತಿ

ಅಲ್ಲಿ
ನೇತಾಡುವ
ಪಟಗಳೆಲ್ಲಾ ನಿನ್ನೆಯವು
ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ

ಕಣ್ಣೊಳಗಣ ರೂಹು ಕಣ್ಣ ಕೊಲ್ಲದು
ಕಂಗಳ ಮರೆಯ ಕತ್ತಲಿಗೆ
ಕಂಗಳೇ ಪ್ರಮಾಣ

ಪದದ ಅರ್ಥ ಬಿಟ್ಟು
ಕೊಡದ ಗುಟ್ಟು

ನಿಂದರೆ ನೆಳಲಿಲ್ಲ
ನಡೆದರೆ ಹೆಜ್ಜೆಯಿಲ್ಲ

ಊರಿಂದ ಹೋದವರು
ದೂರದ ಸುದ್ದಿ ಹೇಳರು

ಮರವೇ ಬಿದ್ದು ಒಣಗಿತು
ನೆಳಲು
ಇನ್ನೇನು ಇಲ್ಲ

ನೆಲಕ್ಕೆ ಬಿದ್ದ ಹಣ್ಣು
ಮಣ್ಣಾಗುವುದ ಕಾಯುತ್ತಾ ಇದೆ ಬೀಜ.

Previous post ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
Next post ಪೊರೆವ ದನಿ…
ಪೊರೆವ ದನಿ…

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 1

  1. ಡಾ.ಉಮೇಶ ಸೊರಬ
    Aug 13, 2025 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ” ಬಯಲನೆ ಬಿತ್ತಿ ” , ಕಾಲದ ಪರಿಧಿಯಾಚೆ ನಿಂತ ಜಾಗೃತ ಮನಸ್ಸೊಂದು ‘ ಬಯಲು ‘ ಜಿಜ್ಞಾಸೆ ಗೆ ಆತುಕೊಂಡು ಮನುಷ್ಯ ಸಂಬಂಧಗಳ ಅರ್ಥವನ್ನು ವ್ಯಾಖ್ಯಾನಿಸುವ ಅಪರೂಪದ ಕವಿತೆಯಾಗಿ ಮೂಡಿಬಂದಿದೆ.ಕವಿಯ ಅರಿವು ಮತ್ತು ಅನುಭವಗಳು ಕವಿತೆಯ ಆಶಯವನ್ನು ವಿಶೇಷ ರೂಪಕಗಳ ಮೂಲಕ ಹೃದ್ಯಗೊಳಿಸುವ ಕುಶಲಕಾರ್ಯ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.’ ಪದದ ಅರ್ಥವನ್ನು ಬಿಟ್ಟುಕೊಡದ ಗುಟ್ಟ’ ನು ಬಯಲುಮಾಡ ಹೊರಡುವ ಸಹೃದಯರಿಗೆ ಈ ಕವಿತೆ ಒಂದು ಕೌತುಕದ ಸವಾಲೇ ಆಗಿದೆ…..
    ಕವಿಗೆ ಅಭಿನಂದನೆಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಸೂರ್ಯ
ಸೂರ್ಯ
January 8, 2023
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಹುಡುಕಾಟ…
ಹುಡುಕಾಟ…
August 8, 2021
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
Copyright © 2025 Bayalu