Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪೊರೆವ ದನಿ…
Share:
Poems August 11, 2025 ಕೆ.ಆರ್ ಮಂಗಳಾ

ಪೊರೆವ ದನಿ…

ಮೈಯೆಲ್ಲಾ ಕಿವಿಯಾಗಿ
ಮನವೆಲ್ಲಾ ಕಣ್ಣಾಗಿ
ಕೇಳಿಸಿಕೊಂಡೆನಯ್ಯಾ
ನೀನಾಡಿದ ಒಂದೊಂದು ನುಡಿಯ
ಮರೆತು ಹೋಗದಂತೆ
ನಾಲಿಗೆಗೆ ಮಂತ್ರವಾಗಿಸಿದೆ
ಜಾರಿಹೋಗದಂತೆ
ಜೋಪಾನದಿ ಎದೆಗಿಳಿಸಿಕೊಂಡೆ.

ಇಲ್ಲಿದೆ ಕೊಳೆ ಅಲ್ಲಿದೆ ಹೊಲೆ
ಇದೋ ನೋಡು
ದುರ್ವಿಚಾರಗಳ ನೆಲೆ
ಅದೇಕೆ ಬಂತು
ತನ್ನೆಲ್ಲಾ ಬಳಗಸಹಿತ
ದುರ್ಗುಣಗಳ ದಂಡು
ಹುಡುಕಿ ತೆಗೆ ತೆವಲುಗಳ
ಹಿಸುಕಿ ನೋಡು
ನಂಬಿಕೆಗಳ, ಭಾವಗಳ
ಬೂಟಾಟಿಕೆಯ ನಡೆಗಳ
ತೋರುತ್ತ ಹೋದೆಯಯ್ಯಾ
ಮಿಂಚಿನ ಚಾಟಿಯಂತೆ…

ಹಗಲುರಾತ್ರಿ ಎನದೆ
ಬೇಡದ್ದು, ಮರೆತದ್ದು
ಅಗತ್ಯವೇ ಇಲ್ಲದ್ದು
ಎಲ್ಲ ಕಲಬೆರಕೆಯಾಗಿ
ಸುಳಿಯಾಗಿ ಸೆಳೆವಾಗ
ಎದೆಯುದ್ದ, ಕೊರಳುದ್ದ
ಉಕ್ಕೇರಿ ಅಪ್ಪಳಿಸುವಾಗ
ಕೊಚ್ಚಿ ಹೋಗದಂತೆ
ನಿಲುವ ಗುಟ್ಟ ಹೇಳಿಕೊಟ್ಟೆ.

ಸುತ್ತುವರಿದ ಕದಳಿಯಲಿ
ಕಳೆದುಹೋಗದಂತೆ
ಎದುರಿನ ಜಾಲಕ್ಕೆ
ಸಿಕ್ಕಿ ಬೀಳದಂತೆ
ನನ್ನದೇ ಮೋಸಕ್ಕೂ
ನಾನೊಳಗಾಗದಂತೆ
ಭವದ ಜಟಿಲತೆಗಳಿಗೆ
ಎದೆಗುಂದದಂತೆ
ಮೂರರ ಮಾಯೆಗೆ
ಮಾರುಹೋಗದಂತೆ
ಪಾರಾಗುವ ಪಟ್ಟುಗಳ
ಕಲಿಸಿ ಕಾಪಾಡಿದೆ.

Previous post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ
Next post ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)

Related Posts

ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
Copyright © 2025 Bayalu