Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪಾದಕೂ ನೆಲಕೂ…
Share:
Poems June 14, 2024 ಜ್ಯೋತಿಲಿಂಗಪ್ಪ

ಪಾದಕೂ ನೆಲಕೂ…

ಕಣ್ಣೇ ಸೋತಿರಲು
ಈ ಮಾಯಾಂಗನೆ ಬೆತ್ತಲೆ ಆಗುವಳು

ನದಿ
ಒಣಗಿದೆ ಒರತೆಯಲೂ ನೀರು ಜಿನುಗದು

ಕಣ್ಣ
ಒಳಗಣ ದೀಪ ಮಂಕು

ಯಾರಿಗೆ ಗೊತ್ತು
ಯಾವ ದಾರಿ ಎಲ್ಲಿಗೋ
ಪಾದಕೂ ನೆಲಕೂ ಎನಿತು ಅಂತರ

ಈ
ಕಣ್ಣ ಪಾಪೆ ಹೀರಿದ್ದಷ್ಟೇ ಬೆಳಕು
ಪಾಪೆ ಸುಕ್ಕು

ಮೊದಲು ಉಂಡಿಟ್ಟ ತಟ್ಟೆಗಳನೆಲ್ಲಾ ತಿಕ್ಕಿ ತೊಳೆಯಬೇಕು

ಈ ನನ್ನ ಗೆಳತಿಗೆ ಹೇಳುವುದೇನಿದೆ
ಎಲ್ಲಾ ಅರಿತೂ ಅರಿಯದಂತೆ
ಅರಿಯದಿರಲೂ ಅರಿದಂತೆಯೇ ಒಡನಾಡುವ ಚತುರೆ

ಈ
ಧ್ಯಾನದೊಳು ಏನಿದೆಯೋ…
ಏನಿಲ್ಲವೋ…

ಅಳಿಸಲಾಗದು
ಅಂಗೈಯ ಗೆರೆ
ಸಾವು ಎಂಬುದು ಅಮೂರ್ತ.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
Next post ಚಿತ್ತ ಸತ್ಯ…
ಚಿತ್ತ ಸತ್ಯ…

Related Posts

ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...
ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...

Comments 4

  1. Padmalaya
    Jun 14, 2024 Reply

    ಅತ್ಯಂತ….ಅತ್ಯಂತ…ಆಳ..ಕಣ್ಣಿಗೂ ಮೆದುಳಿಗೂ ಸಿಲುಕದಷ್ಟು ದೂರ…ದೂರ

  2. Giri Devaraj
    Jun 16, 2024 Reply

    ಸಾವು ಅಮೂರ್ತ- ಕವನ ಅನುಭಾವಿಕ ನೆಲೆಯಲ್ಲಿ ಮಾತಾಡುತ್ತದೆ🙏🏿

  3. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಜ್ಯೋತಿಲಿಂಗಪ್ಪ ಅಣ್ಣಾವ್ರು ನಿಗೂಢ, ನಿಲುಕದ, ಪ್ರಜ್ಞೆ ಆಚೆಗಿನ ಕವಿ ಅನಿಸಿ ಮಿಂಚಿನಂತೆ ಅಲ್ಪ ಸ್ವಲ್ಪ ಅರ್ಥ ಗೋಚರಿಸಿ ನನ್ನ ಮಂದ ಮತಿಯ ಮಿತಿಯಿದು ಅನಿಸುತ್ತದೆ… ಚಿಂತನೆಗೆ, mysticism ಗೆ ದಾರಿ ತೋರುವ ಅವರಿಗೆ ಧನ್ಯವಾದಗಳು, ಕೃತಜ್ಞತೆಗಳು.

  4. Vishwa Loki
    Jul 1, 2024 Reply

    ಉಂಡಿಟ್ಟ ತಟ್ಟೆಗಳನ್ನೆಲ್ಲಾ ತಿಕ್ಕಿ ತೊಳೆಯುವುದೇ ಬದುಕಾಗಿದೆ. ಉಣ್ಣದೆ ಇರಲು ಸಾಧ್ಯವೇ? ತಿಕ್ಕಿ ತೊಳೆಯುವುದರಿಂದ ಮುಕ್ತಿ ಇಲ್ಲವೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
Copyright © 2025 Bayalu