Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಲದ ನಿಧಾನ
Share:
Poems April 29, 2018 ಕೆ.ಆರ್ ಮಂಗಳಾ

ನೆಲದ ನಿಧಾನ

ನನ್ನ ಶರಣರು ಅವರು
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.

ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು.

ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನ ಕಾಡುವವರು.

Previous post ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
Next post ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ

Related Posts

ಬರಿದಾಗುವ ಬೆರಗು
Share:
Poems

ಬರಿದಾಗುವ ಬೆರಗು

February 6, 2025 ಜಬೀವುಲ್ಲಾ ಎಂ.ಅಸದ್
ನಿಂತಲ್ಲೇ ಬಯಲು ಕೊನೆಗೊಳ್ಳದು ಗೆಳೆಯ ನಡೆಯಬೇಕು ನೀನೇ ಖುದ್ದು ಭವದ ಬೇಲಿಗಳ ದಾಟುತ್ತ ಸಾವಿರ ಹೆಜ್ಜೆಗಳ ಮಿಡಿದು ಈ ಸಮಯ ಜಗ ಹುಚ್ಚನೆಂದರೂ ಸರಿಯೇ ಹತ್ತು ಮುಳ್ಳುಗಳ ಮಧ್ಯೆ...
ನಡೆಯ ಎಡೆ…
Share:
Poems

ನಡೆಯ ಎಡೆ…

April 5, 2026 ಕೆ.ಆರ್ ಮಂಗಳಾ
ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...

Comments 1

  1. padmalaya nagraj
    May 10, 2019 Reply

    exellent poem

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ನನ್ನೆದುರು ನಾ…
ನನ್ನೆದುರು ನಾ…
March 6, 2024
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಅಂದು-ಇಂದು
ಅಂದು-ಇಂದು
December 8, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
Copyright © 2026 Bayalu