Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರು… ಬರಿ ನೀರೇ?
Share:
Poems December 13, 2024 ಜ್ಯೋತಿಲಿಂಗಪ್ಪ

ನೀರು… ಬರಿ ನೀರೇ?

ಕತ್ತಲೆಂಬುದು ಕಣ್ಣ ಮುಂದೋ
ಕಣ್ಣ ಹಿಂದೋ…

ಜ್ಞಾನ ಎಂಬುದು ಅರಿವಲ್ಲ
ಅರಿದರೆ ಅಜ್ಞಾನ…

ಕತ್ತಲ ಒಳಗಣ ಬೆಳಕ
ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ

ಜ್ಞಾನವೇನು ಮರವೆಯೇ…

ನದಿ ಯಾವುದು
ನೀರು ಯಾವುದು

ದೋಣಿ ಯಾವುದು
ಹುಟ್ಟು ಯಾವುದು

ನದಿ ದಾಟಿಸಿದುದು ದೋಣಿಯೋ ಹುಟ್ಟೋ…

ನೀರ ನಡುವಿನ ದಾರಿ
ಕೂಡಿ ಹರಿಯದೇ

ನೀರು ಹರಿದರೆ ಹಳ್ಳ
ನಿಂತರೆ ಕೊಳ್ಳ

ನೀರರಿದು ನಿಂತು ಅಬ್ಧಿ..

ಹಸಿವು ಇದ್ದಲ್ಲಿ ಉಣ್ಣುವುದೇ ಸೊಗಸು.

Previous post ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
Next post ನಾನುವಿನ ಉಪಟಳ
ನಾನುವಿನ ಉಪಟಳ

Related Posts

ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...
ಲಿಂಗದ ಹಂಗೇ…
Share:
Poems

ಲಿಂಗದ ಹಂಗೇ…

September 10, 2022 ಜ್ಯೋತಿಲಿಂಗಪ್ಪ
ಹೊದಿಯೋಕೊಂದು ಆಕಾಶ ಮಲಗೋಕೊಂದು ನೆಲ ಕುಡಿಯೋಕೊಂದು ಸಿಂಧು ಉಣ್ಣೋಕೆ ಒಂದಿಷ್ಟು ಭಿಕ್ಷೆ ಹಾಡೋಕೊಂದು ತಂಬೂರಿ ಕೇಳೋಕೊಂದು ಕಿವಿ ಇನ್ನೇನು ಆಂ ಮರೆತೇ ಮೆರೆಯಲು ಒಂದು ಮರೆವು...

Comments 1

  1. ರವೀಶ್ ಜಗಲಿ
    Dec 18, 2024 Reply

    ಜ್ಞಾನಕ್ಕೆ ಅಜ್ಞಾನದ ಜಾಗ, ಕತ್ತಲಿಗೆ ಬೆಳಕಿನ ಒಡಲು… ಕವನ ಬೇರೆಲ್ಲಿಗೋ ದಾರಿ ತೋರುವಂತಿದೆ.👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಬಯಲಾಟ
ಬಯಲಾಟ
March 17, 2021
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
Copyright © 2025 Bayalu