Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಲುಗಡೆಯಿಲ್ಲದ ಪಯಣ…
Share:
Poems September 6, 2026 ಕೆ.ಆರ್ ಮಂಗಳಾ

ನಿಲುಗಡೆಯಿಲ್ಲದ ಪಯಣ…

ಕಡಲ ತೀರದ ಜೊತೆಗಲ್ಲುಗಳ
ನಡುನಡುವೆ
ಒಪ್ಪಾಗಿ ಒರಗಿದ್ದ
ನಿನ್ನನೆತ್ತಿಕೊಂಡಾಗ
ಕಂಡದ್ದು ನನ್ನದೇ ಬಿಂಬ…
ನೆನಪಾದದ್ದು ಬ್ಲೇಕ್ ಹೇಳಿದ
ಅನಂತದ ಪ್ರತಿಬಿಂಬ

ಸಾಗರದ ಕತೆಗಳಿವೆ
ನಿನ್ನ ಒಡಲಿನಲಿ
ಗಾಳಿಯ ಮಾತುಗಳಿವೆ
ನಿನ್ನ ಚಲನೆಯಲಿ
ಮರಮರಳಿ ಬಂದು
ಸೆಳೆದೊಯ್ಯುವ
ನೀರಲೆಗಳ ಏರಿಳಿತಕೆ
ನಿನ್ನನೊಪ್ಪಿಸಿ
ಹೊರಟದ್ದಾದರೂ ಎಲ್ಲಿಗೆ?

ಕಡಲಗರ್ಭಕೆ ಬೆದರದೆ
ತೆರೆಯ ರಭಸಕೆ ಬೆಚ್ಚದೆ
ಮುಳುಗುತ ಏಳುತ
ದಡದಲಿ ಹೊರಳುತ
ನಿಲುಗಡೆಯಿಲ್ಲದ
ಬಯಲುದಾರಿಯಲಿ
ಕಾಯುತ್ತಿರುವುದು ಯಾರಿಗೆ?

ಆದಿ-ಅಂತ್ಯದ ಕೊನೆಗಳೇ ಇಲ್ಲದ
ದೇಶ-ಕಾಲಗಳ ಗಡಿಗಳೂ ಇಲ್ಲದ
ನಿಲ್ಲದ ಮುಗಿಯದ
ನಿತ್ಯ ಪಯಣದಲಿ
ಬಂಡೆಯಾಗಿದ್ದೆಯೋ ಬೆಟ್ಟವಾಗಿದ್ದೆಯೋ
ಕಂಡವರಾದರೂ ಯಾರು?
ಬಂಡೆ-ಬೆಟ್ಟಗಳೂ ಬದಲಾವಣೆಯೊಳಗು
ನಿನ್ನ ಮೂಲವ ಬಲ್ಲವರಾರು?

ಯಾವ ನೀರಿನಲಿ ಯಾವ ನೆಲದಲಿ
ಅದಾವ ಮಣ್ಣ ಮಸೆತದಲಿ
ಕರಗಿ ಹೋಯಿತು
ನಿನ್ನ ಒರಟು ಮೈಚಗರ?
ಹೆಗಲು ಕೊಟ್ಟವರಾರು
ಮಸೆದು ನಕ್ಕವರಾರು
ನೋಡಿ ಕಂಡವರಾರು
ಪರಿವರ್ತನೆಯ ಪರ್ವ…

ಅನಂತ ಜಲರಾಶಿಯ
ಅನಾಹತ ಗಾನಕೆ
ಮೌನವಾಗಿ ಮೆದುವಾದದ್ದು
ನೀನೊಬ್ಬನೇ ಅಲ್ಲ;
ನಾನಾದರೂ ಯಾರು…
ಅದೇ ಹಾದಿಯ
ಮತ್ತೊಬ್ಬ ಅನಾಮಿಕ.

Previous post ಅನಿಶಾ…
ಅನಿಶಾ…

Related Posts

ಶೂನ್ಯ ತುಂಬಿಕೊಂಡ ಬಿಂದಿಗೆ
Share:
Poems

ಶೂನ್ಯ ತುಂಬಿಕೊಂಡ ಬಿಂದಿಗೆ

September 6, 2026 ಜಬೀವುಲ್ಲಾ ಎಂ.ಅಸದ್
ಝೆನ್ ಹೇಳುತ್ತದೆ, ಹೀಗೆ… ನನಗೆ ಎಲ್ಲಾ ಗೊತ್ತಿದೆ ಎಂದರೆ ನಿನಗೆ ಏನೂ ಗೊತ್ತಿಲ್ಲ ಎಂದರ್ಥ ನನಗೇನೂ ಗೊತ್ತಿಲ್ಲ ಎಂದರೆ ಆಗಲೂ… ನಿನಗೆ ಏನೂ ಗೊತ್ತಿಲ್ಲವೆಂದೇ ಅರ್ಥ...
ಅನಿಶಾ…
Share:
Poems

ಅನಿಶಾ…

September 6, 2026 ಜ್ಯೋತಿಲಿಂಗಪ್ಪ
ನಾನು ನಡೆದಷ್ಟೇ ನನ್ನ ದಾರಿ ಹಾಕಿದ ಹೆಜ್ಜೆಗೆ ದೂರ ಅಂಜಿಕೆಯೇ ಗುರಿ ಇಲ್ಲದ ಪಯಣಕೆ ದಿಕ್ಕಿಲ್ಲ ದಿಕ್ಕು ನೋಡಿ ಹರಿದೀತೇ ಬೆಳಕು ಈ ದಿಕ್ಕಿಗೆ ಹೆಸರಿಟ್ಟವನು ನಾನಲ್ಲವೇ ಒಂದು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ನಾನು… ನನ್ನದು
ನಾನು… ನನ್ನದು
July 4, 2021
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
Copyright © 2026 Bayalu