Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನುವಿನ ಉಪಟಳ
Share:
Poems December 13, 2024 ಕೆ.ಆರ್ ಮಂಗಳಾ

ನಾನುವಿನ ಉಪಟಳ

ಕಣ್ಣಪಾಪೆಯಲಿ ನಾನವಿತು
ಕುಳಿತಿರಲು
ಕಾಣುವ ನೋಟಗಳಿಗೆ
ಲೆಕ್ಕ ಹಾಕುವರಾರು?

ತಲೆಯೊಳಗೆ ನಾನೆಂಬುದು
ತತ್ತಿ ಇಟ್ಟಿರುವಾಗ
ಬರುವ ಯೋಚನೆಗಳನು
ಎಣಿಸಿದವರಾರು?

ಮನದ ಮೂಲೆಮೂಲೆಯಲು
ನಾನೇ ಮಲಗಿರುವಾಗ
ಜಗದ ಸೊಬಗಿಗೆ
ಜಾಗವೆಲ್ಲಿಹುದು?

ಮೌನದ ಬಲೆಯೊಳಗೂ
ಸ್ವಗತಗಳೇ ತುಂಬಿರಲು
ಖಾಲಿಯಾಗುವ ಗಳಿಗೆ
ಬರುವುದುಂಟೇನು?

ನಾಲಿಗೆಯ ತುಂಬೆಲ್ಲ
ರುಚಿಗಳೇ ಮೆತ್ತಿರಲು
ಸಹಜತೆಯ ಸವಿಯದಕೆ
ತಿಳಿದಿತೇನು?

ನೋಟ- ಕೂಟಗಳು
ಜೊತೆಯಾಗಿ ಎಳೆಯಲು
ಬಾಳ ಬಂಡಿಯು ತನ್ನ
ಗುರಿ ಸೇರುವುದೇನು?

ಕಾಗದದ ದೋಣಿಯನೇ
ನಾನೆಂದುಕೊಂಡಾಗ
ಭವದಲೆಯ ಹೊಡೆತವನು
ತಡೆಯಲಾದೀತೆ?
ತಾ ಬರಿಯ ಗಾಳಿಪಟ
ಸೂತ್ರ ಇನ್ನಾರೋ
ಎಂದುಕೊಂಡಂತೆ ಹಾರು ಹಕ್ಕಿ
ಅಹಮಿಕೆಯ ಅರಮನೆಯೇ
ನನ್ನದೆನುವಾಗ
ಇರುವಿಕೆಯ ಆಗಸಕೆ
ಹಾರಲಾದೀತೇ?

ತನ್ನದಲ್ಲದ ತನುವಿನಲಿ
ಕೋಟೆಯೊಳು ಕೋಟೆ ಕಟ್ಟಿ
ಕಾಮಿಸುತಾ ಕಲ್ಪಿಸುತಾ
ಒಡೆತನ ಸಾಧಿಸಿಹ
ಮನದ ಮುಖ ಕಳಚದೆ
ಅಹಮಿಕೆ ಕರಗದು
ಅಂತರಂಗ ಕಾಣದು
ನಾನು ಮರೆಯಾಗದು…

Previous post ನೀರು… ಬರಿ ನೀರೇ?
ನೀರು… ಬರಿ ನೀರೇ?
Next post ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

Related Posts

ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...
ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...

Comments 1

  1. Padmalaya
    Dec 13, 2024 Reply

    ಬಿಡಾಕಾಗದಿದ್ದರೆ ಪೂಜೆ ಮಾಡಬಹುದು…

Leave a Reply to Padmalaya Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
Copyright © 2026 Bayalu