Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಬುದ್ಧ ಮಹಾಗುರು
Share:
Poems January 4, 2020 ಪದ್ಮಾಲಯ ನಾಗರಾಜ್

ನನ್ನ ಬುದ್ಧ ಮಹಾಗುರು

ನನ್ನ ಬುದ್ಧ ಮಹಾಗುರುವು…
ಧರ್ಮವಲ್ಲ ದೈವವಲ್ಲ
ನುಡಿಯಲ್ಲ ಪಡಿಯಲ್ಲ
ವಿಗ್ರಹವಲ್ಲ ಅನುಗ್ರಹವಲ್ಲ
ಸಂಭ್ರಮವಲ್ಲ ಉತ್ಸವವಲ್ಲ
ಸುಖವಲ್ಲ ದುಃಖವಲ್ಲ
ವಾದವಲ್ಲ ಬೇಧವಲ್ಲ
ಮಂತ್ರವಲ್ಲ ತಂತ್ರವಲ್ಲ
ಮಾನಾವಮಾನ ಅಲ್ಲವೇ ಅಲ್ಲ!

ನನ್ನ ಬುದ್ಧ ಮಹಾಗುರುವೆಂದರೆ
ಕಥೆಯಲ್ಲ ವ್ಯಥೆಯಲ್ಲ
ಜಾತಿಯಲ್ಲ ಜ್ಯೋತಿಯಲ್ಲ
ಬೆಡಗಲ್ಲ ಬೆರಗಲ್ಲ
ಜನುಮವಲ್ಲ ಜರೆಯಲ್ಲ
ಕೋಪವಲ್ಲ ತಾಪವಲ್ಲ
ರೂಪವಲ್ಲ ನೋಟವಲ್ಲ
ಅನ್ಯವಲ್ಲ ಅನನ್ಯವಲ್ಲ
ಧ್ಯಾನವಲ್ಲ ಧಾತನಲ್ಲ
ಅವ ಲೋಕಪರ ನಿರಂತರ…
ನನ್ನ ಬುದ್ಧಮಹಾಗುರುವು…

ಅಲ್ಲಮನ ಅಲ್ಲಗಳಲಿ
ಬಸವಣ್ಣನ ತಾಯ್ಗರುಳ ಸಂಬಂಧದಲಿ
ವೇಮನನ ವಿಮಲ ಪ್ರಜ್ಞೆಯಲಿ
ಸೂಫಿಗಳ ನಡೆಸಾರದಲಿ
ಕಬೀರನ ಕರೆಗಳಲಿ
ತಾವೋನ ತಾವಲ್ಲದ ತಾವಿನಲಿ
ಮಂಟೇದಯ್ಯನ ನೀಲಿ ಗ್ಯಾನದಲಿ
ಬಾಬಾಸಾಹೇಬರ ಮಹಾಕರುಣೆಯಲಿ
ಸದಾ ಎಚ್ಚರದಿ ಎಚ್ಚೆತ್ತುಕೊಂಡಿಹನು!!!

ಆದರೆ…
ತಪ್ಪು ನುಡಿವ ಕರ್ಮಿಯಾಗಿಹ
ಜಾತಿಬಿಡದ ನೀಚನಾಗಿಹ
ಸಂಗ್ರಹೇಚ್ಚೆಗೆ ಜಾರಿಕೊಂಡಿಹ
ನಾ ಮೇಲೆನುವ ಮದಾಂಧನಾಗಿಹ
ನನ್ನ ನಾ ಕಲ್ಪಿಸಿಕೊಳ್ಳುತ್ತಿರುವ
ನನ್ನ ನಾ ಸುಖಿಸುತ್ತಿರುವ
ನನ್ನೊಳು ನಾ ಚದುರಿಹೋಗಿರುವ
ನನ್ನೊಳು ಹುಡುಕಲು ಆತ ಎಲ್ಲಿಹನು?

Previous post ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
Next post ಗುರುಪಥ
ಗುರುಪಥ

Related Posts

ನಿನ್ನದೊಂದು ಸ್ಪರ್ಶ
Share:
Poems

ನಿನ್ನದೊಂದು ಸ್ಪರ್ಶ

February 16, 2026 ಕೆ.ಆರ್ ಮಂಗಳಾ
ಅಷ್ಟು ಸಲೀಸಲ್ಲಾ ಬಿಡು ನಿನ್ನ ಕೈ ಹಿಡಿಯುವುದು ಎದುರಿದ್ದೂ ಅವಿತಿರುವ ನಿನ್ನಿರುವಿಗೆ ಅಡಿಯಿಡುವುದು… ಇಲ್ಲೇ, ಇದೇ ಗಳಿಗೆಯಲ್ಲೇ… ಈ ಕ್ಷಣವೇ… ನೀನು ಪ್ರತ್ಯಕ್ಷವಂತೆ! ಯಾರಾದರೂ...
ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...

Comments 6

  1. Mahantesh Mysuru
    Jan 6, 2020 Reply

    ಬುದ್ದ ಮಹಾಗುರು ಕವನ ತುಂಬಾ ಚನ್ನಾಗಿದೆ. ಮತ್ತೆ ಮತ್ತೆ ಮನನ ಮಾಡುವಂತಿದೆ. ರೂಪವಲ್ಲ ನೋಟವಲ್ಲ, ಅನ್ಯವಲ್ಲ ಅನನ್ಯವಲ್ಲ, ಧ್ಯಾನವಲ್ಲ ಧಾತನಲ್ಲ… ಸಾಲುಗಳು ಬಹಳ ಸೊಗಸಾಗಿವೆ.

  2. ಶಿವಕುಮಾರ್ ಸಾಲಿ
    Jan 8, 2020 Reply

    ಬುದ್ದನಂತಹ ಜ್ಞಾನಿಯನ್ನು ನಿಜಕ್ಕೂ ಎಲ್ಲೆಲ್ಲಿ ಕಾಣಬೇಕೆಂದು ಸೂಚಿಸಿದ ಶರಣ ನಾಗರಾಜವರಿಗೆ ವಂದನೆಗಳು

  3. Chetan M.P
    Jan 9, 2020 Reply

    ಕವನದ ಒಂದೊಂದು ಪದವೂ ಮನನಯೋಗ್ಯ

  4. Dinesh P
    Jan 14, 2020 Reply

    ಬುದ್ಧನನ್ನ ಬದುಕಿನಲ್ಲಿ ಕಾಣುವ ಸುಂದರ ಪರಿಕಲ್ಪನೆ.

  5. Jayaraj Bidar
    Jan 16, 2020 Reply

    ಬುದ್ದನನ್ನು ಎಲ್ಲಿ, ಹೇಗೆ ಹುಡುಕಿಕೊಳ್ಳಬೇಕೆಂದು ಗೊತ್ತಾಯಿತು. ಬುದ್ದನ ಜಾಗದಲ್ಲಿ ಬಸವನ ಹೆಸರು ಹಾಕಿದರೂ ಕವನಕ್ಕೆ ಚ್ಯುತಿ ಬರುವುದಿಲ್ಲ. ಮಹಾತ್ಮರನ್ನು ಹೀಗೇ ಹುಡುಕಿಕೊಳ್ಳಬೇಕು.

  6. Chinmayi
    May 15, 2021 Reply

    ಬುದ್ದ ಬುದ್ದನಿಗೇ ಸರಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಣ್ಣ ದೀಪ
ಕಣ್ಣ ದೀಪ
September 7, 2021
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ನಾನು  ಬಿಂಬ
ನಾನು ಬಿಂಬ
September 13, 2025
ನಾನು… ನನ್ನದು
ನಾನು… ನನ್ನದು
July 4, 2021
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಗ್ರಹಣ
ಗ್ರಹಣ
December 9, 2025
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
Copyright © 2026 Bayalu