Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಾಳಿ ಬುರುಡೆ
Share:
Poems June 17, 2020 ಪದ್ಮಾಲಯ ನಾಗರಾಜ್

ಗಾಳಿ ಬುರುಡೆ

ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ
ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ
ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು
ಗಾಳಿಗೆ ತೂರ್ಹೋಗಬೇಡಾ //ನಂಬಿ//

ಚಿತ್ರಾ ವಿಚಿತ್ರದಿಂದಲಿ ಆಟವಾಡುತ ನಲಿಯುತಿಹುದು
ಒಂದರೊಳು ಹನ್ನೊಂದು ತೂರಿಸಿ ಬಣ್ಣದೋಕುಳಿ ಬಳಿಯುತಿಹುದು //ನಂಬಿ//

ಅನುಕ್ಷಣವೂ ನಿನ್ನ ಜತೆಯಲಿ/ನೆರಳಿನಂತೆ ನಲಿಯುತಿಹುದು
ಇಲ್ಲಸಲ್ಲದ ಕನಸ ತೋರಿಸಿ/ ಮಾಯಾಜಾಲವ ಹೆಣೆಯುತಿಹುದು //ನಂಬಿ//

ನಾದದೊಳಗೆ ಬಿಂದು ಮೋಹಿಸಿ/ ಹಾದರವೊಂದಾಗುತಿಹುದು
ಸಂತೆ ಕೂಟದ ಮನೆಯೊಳಗದು/ ಸಮರಸವನು ಕೊಲ್ಲುತಿಹುದು //ನಂಬಿ//

ಚಂಚಲಾಂಗಿಯು ನಾನೇ ಎನುತಿದೆ/ ಧರ್ಮಕರ್ಮ ನನ್ನದೆನುತಿದೆ
ಅಡವಿ ಸೇರಿ ಅವಿತು ಕುಳಿತರೂ/ ನಿನ್ನನೂ ಬಿಡಲಾರೆ ಎನುತಿದೆ //ನಂಬಿ//

ಸುತ್ತಮುತ್ತಾ ಮೇಲೆ ಕೆಳಗೆ/ ಆಕಾರರಹಿತ ನಾನು ಎನುತಿದೆ
ಸ್ವರ್ಗ-ನರಕ ನನ್ನದೆನುತಾ/ ಕೇಕೆ ಹಾಕಿ ನಗುತಲಿಹುದು //ನಂಬಿ//

ಹೆಸರೇ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲ
ಕದವ ತಟ್ಟಿ/ ನಿರ್ಭಯದಿ ಬದುಕು ಸಾಗಿಸಿ
ಆಳದಾ ನಿರಾಳವಾಗು //ನಂಬಿ//

Previous post WHO AM I?
WHO AM I?
Next post ಅವಿರಳ ಅನುಭಾವಿ-4
ಅವಿರಳ ಅನುಭಾವಿ-4

Related Posts

ಹೀಗೊಂದು ಸಂವಾದ…
Share:
Poems

ಹೀಗೊಂದು ಸಂವಾದ…

April 6, 2023 ಕೆ.ಆರ್ ಮಂಗಳಾ
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು ಬಯಕೆಯ ಸೆಲೆಗೆ ಮರುಳಾಗಿಹುದು ಕಾಣುವೆನೆಂತು ಜೀವದ ಸೊಬಗ ಅರಿಯುವುದೆಂತು ಪ್ರಾಣದ ಹೊಲಬ ಗೊತ್ತಿಲ್ಲದ ನಡಿಗೆ ಕತ್ತಲ ದಾರಿ...
ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...

Comments 3

  1. ಬಸವಲಿಂಗಪ್ಪ ಕಡೂರು
    Jun 19, 2020 Reply

    ಗಾಳಿ ಬುರುಡೆಯು ನಮ್ಮನ್ನು ತೂರಿ ರೂರಿ ಕೇಕೇ ಹಾಕುತ್ತಿದೆ. ಬದುಕಿನ ಚಿತ್ರಣ ನೀಡುತ್ತದೆ. ರಾಗ ಹಾಕಿದರೆ ಸೊಗಸಾಗಿ ಹಾಡಬಹುದು.

  2. Jayaraj Bidar
    Jun 24, 2020 Reply

    ದೇಹ ಗಾಳಿ ಬುರುಡೆ, ಮನಸ್ಸು ಗಾಳಿ ಬುರುಡೆ, ನಮ್ಮ ಬದುಕೇ ಗಾಳಿ ಬುರುಡೆ ಎನ್ನಿಸಿತು. ವಿಚಾರಕ್ಕೊಡ್ಡುವ ಕವನ, ಪದ್ಮಾಲಯ ನಾಗರಾಜ್ ಶರಣರ ಕವನ ಸಂಕಲನಗಳೇನಾದರೂ ಇದ್ದರೆ ದಯವಿಟ್ಟು ತಿಳಿಸಿ.

  3. ಮಧುಸೂದನ್
    Jun 25, 2020 Reply

    ಮಾಯಾಜಾಲವ ಹೆಣೆವ ಗಾಳಿಬುರುಡೆ ಮನದ ಮುಂದಣ ಮಾಯೆ, ಆಸೆಗಳ ಜಾಲ. ಸರಳ, ಅರ್ಥಗರ್ಭಿತ ಹಾಡು.

Leave a Reply to ಬಸವಲಿಂಗಪ್ಪ ಕಡೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
Copyright © 2026 Bayalu