Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಾಳಿ ಬುರುಡೆ
Share:
Poems June 17, 2020 ಪದ್ಮಾಲಯ ನಾಗರಾಜ್

ಗಾಳಿ ಬುರುಡೆ

ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ
ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ
ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು
ಗಾಳಿಗೆ ತೂರ್ಹೋಗಬೇಡಾ //ನಂಬಿ//

ಚಿತ್ರಾ ವಿಚಿತ್ರದಿಂದಲಿ ಆಟವಾಡುತ ನಲಿಯುತಿಹುದು
ಒಂದರೊಳು ಹನ್ನೊಂದು ತೂರಿಸಿ ಬಣ್ಣದೋಕುಳಿ ಬಳಿಯುತಿಹುದು //ನಂಬಿ//

ಅನುಕ್ಷಣವೂ ನಿನ್ನ ಜತೆಯಲಿ/ನೆರಳಿನಂತೆ ನಲಿಯುತಿಹುದು
ಇಲ್ಲಸಲ್ಲದ ಕನಸ ತೋರಿಸಿ/ ಮಾಯಾಜಾಲವ ಹೆಣೆಯುತಿಹುದು //ನಂಬಿ//

ನಾದದೊಳಗೆ ಬಿಂದು ಮೋಹಿಸಿ/ ಹಾದರವೊಂದಾಗುತಿಹುದು
ಸಂತೆ ಕೂಟದ ಮನೆಯೊಳಗದು/ ಸಮರಸವನು ಕೊಲ್ಲುತಿಹುದು //ನಂಬಿ//

ಚಂಚಲಾಂಗಿಯು ನಾನೇ ಎನುತಿದೆ/ ಧರ್ಮಕರ್ಮ ನನ್ನದೆನುತಿದೆ
ಅಡವಿ ಸೇರಿ ಅವಿತು ಕುಳಿತರೂ/ ನಿನ್ನನೂ ಬಿಡಲಾರೆ ಎನುತಿದೆ //ನಂಬಿ//

ಸುತ್ತಮುತ್ತಾ ಮೇಲೆ ಕೆಳಗೆ/ ಆಕಾರರಹಿತ ನಾನು ಎನುತಿದೆ
ಸ್ವರ್ಗ-ನರಕ ನನ್ನದೆನುತಾ/ ಕೇಕೆ ಹಾಕಿ ನಗುತಲಿಹುದು //ನಂಬಿ//

ಹೆಸರೇ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲ
ಕದವ ತಟ್ಟಿ/ ನಿರ್ಭಯದಿ ಬದುಕು ಸಾಗಿಸಿ
ಆಳದಾ ನಿರಾಳವಾಗು //ನಂಬಿ//

Previous post WHO AM I?
WHO AM I?
Next post ಅವಿರಳ ಅನುಭಾವಿ-4
ಅವಿರಳ ಅನುಭಾವಿ-4

Related Posts

ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
ಮಣ್ಣಲ್ಲಿ ಹುಟ್ಟಿ…
Share:
Poems

ಮಣ್ಣಲ್ಲಿ ಹುಟ್ಟಿ…

February 6, 2025 ಜ್ಯೋತಿಲಿಂಗಪ್ಪ
ಬರಿದಾಗದ ಕನಸುಗಳು ಮರೆವಿಗೆ ಸರಿಯವೇ.. ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು ತುಂಬಲು ಆಸೆಯೇ ಇಲ್ಲ ಖಾಲಿ ಆಗುವುದು ಏನೂ ಇರದು ಆಸೆ ಹೊತ್ತ ಮನವಿಲ್ಲ ನಿರಾಸೆ ಎಂಬುದೇನೋ...

Comments 3

  1. ಬಸವಲಿಂಗಪ್ಪ ಕಡೂರು
    Jun 19, 2020 Reply

    ಗಾಳಿ ಬುರುಡೆಯು ನಮ್ಮನ್ನು ತೂರಿ ರೂರಿ ಕೇಕೇ ಹಾಕುತ್ತಿದೆ. ಬದುಕಿನ ಚಿತ್ರಣ ನೀಡುತ್ತದೆ. ರಾಗ ಹಾಕಿದರೆ ಸೊಗಸಾಗಿ ಹಾಡಬಹುದು.

  2. Jayaraj Bidar
    Jun 24, 2020 Reply

    ದೇಹ ಗಾಳಿ ಬುರುಡೆ, ಮನಸ್ಸು ಗಾಳಿ ಬುರುಡೆ, ನಮ್ಮ ಬದುಕೇ ಗಾಳಿ ಬುರುಡೆ ಎನ್ನಿಸಿತು. ವಿಚಾರಕ್ಕೊಡ್ಡುವ ಕವನ, ಪದ್ಮಾಲಯ ನಾಗರಾಜ್ ಶರಣರ ಕವನ ಸಂಕಲನಗಳೇನಾದರೂ ಇದ್ದರೆ ದಯವಿಟ್ಟು ತಿಳಿಸಿ.

  3. ಮಧುಸೂದನ್
    Jun 25, 2020 Reply

    ಮಾಯಾಜಾಲವ ಹೆಣೆವ ಗಾಳಿಬುರುಡೆ ಮನದ ಮುಂದಣ ಮಾಯೆ, ಆಸೆಗಳ ಜಾಲ. ಸರಳ, ಅರ್ಥಗರ್ಭಿತ ಹಾಡು.

Leave a Reply to ಬಸವಲಿಂಗಪ್ಪ ಕಡೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ಇದ್ದಷ್ಟೇ…
ಇದ್ದಷ್ಟೇ…
January 10, 2021
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
Copyright © 2026 Bayalu