Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಾಳಿ ಬುರುಡೆ
Share:
Poems June 17, 2020 ಪದ್ಮಾಲಯ ನಾಗರಾಜ್

ಗಾಳಿ ಬುರುಡೆ

ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ
ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ
ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು
ಗಾಳಿಗೆ ತೂರ್ಹೋಗಬೇಡಾ //ನಂಬಿ//

ಚಿತ್ರಾ ವಿಚಿತ್ರದಿಂದಲಿ ಆಟವಾಡುತ ನಲಿಯುತಿಹುದು
ಒಂದರೊಳು ಹನ್ನೊಂದು ತೂರಿಸಿ ಬಣ್ಣದೋಕುಳಿ ಬಳಿಯುತಿಹುದು //ನಂಬಿ//

ಅನುಕ್ಷಣವೂ ನಿನ್ನ ಜತೆಯಲಿ/ನೆರಳಿನಂತೆ ನಲಿಯುತಿಹುದು
ಇಲ್ಲಸಲ್ಲದ ಕನಸ ತೋರಿಸಿ/ ಮಾಯಾಜಾಲವ ಹೆಣೆಯುತಿಹುದು //ನಂಬಿ//

ನಾದದೊಳಗೆ ಬಿಂದು ಮೋಹಿಸಿ/ ಹಾದರವೊಂದಾಗುತಿಹುದು
ಸಂತೆ ಕೂಟದ ಮನೆಯೊಳಗದು/ ಸಮರಸವನು ಕೊಲ್ಲುತಿಹುದು //ನಂಬಿ//

ಚಂಚಲಾಂಗಿಯು ನಾನೇ ಎನುತಿದೆ/ ಧರ್ಮಕರ್ಮ ನನ್ನದೆನುತಿದೆ
ಅಡವಿ ಸೇರಿ ಅವಿತು ಕುಳಿತರೂ/ ನಿನ್ನನೂ ಬಿಡಲಾರೆ ಎನುತಿದೆ //ನಂಬಿ//

ಸುತ್ತಮುತ್ತಾ ಮೇಲೆ ಕೆಳಗೆ/ ಆಕಾರರಹಿತ ನಾನು ಎನುತಿದೆ
ಸ್ವರ್ಗ-ನರಕ ನನ್ನದೆನುತಾ/ ಕೇಕೆ ಹಾಕಿ ನಗುತಲಿಹುದು //ನಂಬಿ//

ಹೆಸರೇ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲ
ಕದವ ತಟ್ಟಿ/ ನಿರ್ಭಯದಿ ಬದುಕು ಸಾಗಿಸಿ
ಆಳದಾ ನಿರಾಳವಾಗು //ನಂಬಿ//

Previous post WHO AM I?
WHO AM I?
Next post ಅವಿರಳ ಅನುಭಾವಿ-4
ಅವಿರಳ ಅನುಭಾವಿ-4

Related Posts

ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...

Comments 3

  1. ಬಸವಲಿಂಗಪ್ಪ ಕಡೂರು
    Jun 19, 2020 Reply

    ಗಾಳಿ ಬುರುಡೆಯು ನಮ್ಮನ್ನು ತೂರಿ ರೂರಿ ಕೇಕೇ ಹಾಕುತ್ತಿದೆ. ಬದುಕಿನ ಚಿತ್ರಣ ನೀಡುತ್ತದೆ. ರಾಗ ಹಾಕಿದರೆ ಸೊಗಸಾಗಿ ಹಾಡಬಹುದು.

  2. Jayaraj Bidar
    Jun 24, 2020 Reply

    ದೇಹ ಗಾಳಿ ಬುರುಡೆ, ಮನಸ್ಸು ಗಾಳಿ ಬುರುಡೆ, ನಮ್ಮ ಬದುಕೇ ಗಾಳಿ ಬುರುಡೆ ಎನ್ನಿಸಿತು. ವಿಚಾರಕ್ಕೊಡ್ಡುವ ಕವನ, ಪದ್ಮಾಲಯ ನಾಗರಾಜ್ ಶರಣರ ಕವನ ಸಂಕಲನಗಳೇನಾದರೂ ಇದ್ದರೆ ದಯವಿಟ್ಟು ತಿಳಿಸಿ.

  3. ಮಧುಸೂದನ್
    Jun 25, 2020 Reply

    ಮಾಯಾಜಾಲವ ಹೆಣೆವ ಗಾಳಿಬುರುಡೆ ಮನದ ಮುಂದಣ ಮಾಯೆ, ಆಸೆಗಳ ಜಾಲ. ಸರಳ, ಅರ್ಥಗರ್ಭಿತ ಹಾಡು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ನನ್ನೆದುರು ನಾ…
ನನ್ನೆದುರು ನಾ…
March 6, 2024
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
Copyright © 2025 Bayalu