Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯದೊಳಗಣ ಬಯಲು
Share:
Poems November 7, 2020 ಜ್ಯೋತಿಲಿಂಗಪ್ಪ

ಕಾಯದೊಳಗಣ ಬಯಲು

ಈ ಬಯಲು ಗುರುತಿಸಲಾರೆ
ನನ್ನ ಕಣ್ಣ ಎದುರು ನಾನು
ಬಯಸುವ ರೂಹು ಇಲ್ಲ

ಕಣ್ಣು ಹೇಳಿದುದು ಸುಳ್ಳೇ

ನೀ ಬಿಟ್ಟ ಉಸಿರಲೊಂದು
ದನಿ ಇದೆ ನಾ ಕೇಳಲಾರೆ

ಉಸಿರು ಒಳಗಣ ದನಿ
ಉಸಿರು ನುಂಗಿತು
ಕಣ್ಣ ಒಳಗಣ ಉಸಿರು
ನೋಟ ನುಂಗಿತು

ಈ ಗೆರೆ ಕೊರೆದು
ಹೋದವರು ಯಾರು ಯಾರು
ಅಳಿಸದಾ ಗೆರೆಯೇ…

ನಾನು ನಾನೇ ಕೊರೆದುದು ಅಳಿಸದುದು
ನಾ ಹೆತ್ತ ಕೂಸು
ತಾಯಿ ಆಗದಿರೆ ಗಂಡನಿಗೆ ಕಳಂಕ

ಕಾಯ ಉಸಿರು, ಉಸಿರು ಕಾಯ
ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ
ಉಸಿರ ಒಳಗಣ ಆ ಸದ್ದು
ಏನದು…

ಒಂದೊಂದು ಕಾಯದಲೂ
ಒಂದು ಚೈತನ್ಯ ಎಂಬರಿವು ಈಗ
ಈಗ ಈ ಐನಸ್ಟೈನ್ ಚೈತನ್ಯ
ಸೂತ್ರ ಬಯಲು

ಬಾಗಿಲಿಗೆ ಮೊಳೆ ಜಡಿದು
ಒಳಗೆ ಕಾಲಿಟ್ಟಿರುವೆ.

Previous post ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
Next post ಗಂಟಿನ ನಂಟು
ಗಂಟಿನ ನಂಟು

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 2

  1. Umesh Patri
    Nov 11, 2020 Reply

    ಕಣ್ಣು ಹೇಳುವುದು ಸುಳ್ಳೋ, ಮನಸ್ಸು ಹೇಳುವುದು ಸುಳ್ಳೋ… ಕೊನೆಗೆ ಈ ಬದುಕೇ ಸುಳ್ಳೋ… ಕವಿಯ ಗೊಂದಲ ಬಿಡುಗಡೆಯಾದರೂ ಓದುಗನ ಗೊಂದಲ ಹಾಗೇ ಉಳಿಯುತ್ತದೆ.

  2. Manikanta Dogila
    Nov 11, 2020 Reply

    ಪ್ರಾಣ ಇರುವ ದೇಹ
    ದೇಹ ಇರುವ ಪ್ರಾಣ… ಕಾಡುವ ಸಾಲುಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ನೆಮ್ಮದಿ
ನೆಮ್ಮದಿ
April 6, 2020
ಸಂತೆಯ ಸಂತ
ಸಂತೆಯ ಸಂತ
September 7, 2020
Copyright © 2025 Bayalu