Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗಣ ಮರ
Share:
Poems March 12, 2022 ಜ್ಯೋತಿಲಿಂಗಪ್ಪ

ಒಳಗಣ ಮರ

ಈ
ಪದ
ಏನು ನಿಜ ಹೇಳುತ್ತಾ
ನಿಜ ಹೇಳುವುದು ಅಲ್ಲಾ
ಕಾಣುವುದು ಅಲ್ಲಾ
ಕೇಳುವುದು ಅಲ್ಲಾ
ಅನುಭಾವಿಸುವುದು
ಭಾವದಲಿ ಆನು ನಿಜವಾಗುವುದು

ಈ
ಪದ ಅರ್ಥದಲಿ ಏನಿದೆಯೋ
ಅಕ್ಷರ ಬಲ್ಲವರು ಹೇಳಿ
ಓಂ ಹ್ರೀಂ….

ಈ
ಬೀಜದ
ಒಳಗೆ ಮರ ಅಡಗಿದೆ
ತೋರುವುದು ಹೇಗೆ

ನೆಲದಲಿ ಹುದುಗಿಸಬೇಕು
ನೀರು ಎರೆಯಬೇಕು
ಮೇಲಾಗಿ ಕಾಯಬೇಕು

ಆ
ಬೀಜದ ಒಳಗಣ ಮರ
ನಗುತಿದೆ ಈಗ ತೋರಿದರೂ ಕಾಣದು

ಈ
ತೊಗಲಿಗೆ ಹೊಳಪೇ
ರುದ್ರಾಕ್ಷಿ ಕೊಬ್ಬೆಲ್ಲಾ ಒಣಗಿದೆ
ಕನಸೊಳಗೂ ಕಾಡುತ್ತಿಲ್ಲ ಆ ದೇವತೆ.

Previous post ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
Next post ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Comments 1

  1. Malini Gowda
    Mar 23, 2022 Reply

    ಬದುಕಿನ ಹೂರಣ ಮರೆಯಾದಾಗ ಒಳಗಣ ಮರ ಒಣಗಿರುತ್ತದೋ ಅಥವಾ ಸರಿಯಾದ ಆರೈಕೆ ಸಿಗದೆ ಬೀಜವಿದ್ದಾಗ್ಯೂ ಮರ ಬೆಳೆಯದೇ ಹೋಗುತ್ತದೋ… ಕಾವ್ಯದ ಸ್ಫುರಣಗಳು ಅನಂತ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
Copyright © 2025 Bayalu