Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದ್ದೇನೆ ನಾನು?
Share:
Poems February 10, 2023 ಕೆ.ಆರ್ ಮಂಗಳಾ

ಎಲ್ಲಿದ್ದೇನೆ ನಾನು?

ನರನಾಡಿಗಳಲ್ಲೋ
ರಕ್ತ ಮಾಂಸಗಳಲ್ಲೋ
ಮಿದುಳಿನಲೋ ಹೃದಯದಲೋ,
ಚರ್ಮದ ಹೊದಿಕೆಯಲೋ
ಎಲ್ಲಿದ್ದೇನೆ ನಾನು?

ಬಾಡುವ ದೇಹದಲೋ
ಬದಲಾಗೋ ವಿಚಾರಗಳಲೋ
ಬೆಂಬಿಡದ ಭಾವಗಳಲ್ಲೋ
ಬೇರೂರಿದ ನಂಬಿಕೆಗಳಲ್ಲೋ
ಎಲ್ಲಿದ್ದೇನೆ ನಾನು?

ಈ ಹೊತ್ತು ಎಂಬುದೇ
ಕೈಗೆಟುಕದಿರುವಾಗ
ಸರಿವ ಕ್ಷಣಗಳಲ್ಲೋ
ಬರುವ ಗಳಿಗೆಗಳಲ್ಲೋ
ಎಲ್ಲಿದ್ದೇನೆ ನಾನು?

ಕಟ್ಟಿದ್ದು ಮರೆಯುತ್ತಾ
ಕೆಡವಿದ್ದು ತುಳಿಯುತ್ತಾ
ಕಟ್ಟುತ್ತಾ ಕೆಡವುತ್ತಾ
ಆಡುವಾಟವೇ ಇಲ್ಲವಾಗಿರಲು
ಎಲ್ಲಿದ್ದೇನೆ ನಾನು?

ಎಲ್ಲಿಂದ ಬಂದದ್ದು
ಎಲ್ಲಿಗೆ ಹೊರಟದ್ದು
ಯಾರು ಯಾರಿಗೆ ಸಾಕ್ಷಿ
ನಿಲಲೊಲ್ಲದ ನಡಿಗೆಯಲಿ
ಎಲ್ಲಿದ್ದೇನೆ ನಾನು?

ಹೆತ್ತವರು ಹೇಳಲಿಲ್ಲ
ನೆರೆದವರು ತಿಳಿಸಲಿಲ್ಲ
ಪುಸ್ತಕದಿ ಬರೆದಿಲ್ಲ
ಪಾಠದಲಿ ಓದಲಿಲ್ಲ
ಎಲ್ಲಿದ್ದೇನೆ ನಾನು?

ಕಣ್ತೆರೆದು ಹುಡುಕಿದರೂ
ಕಣ್ಮುಚ್ಚಿ ಕುಳಿತರೂ
ಹಗಲಲ್ಲಿ ಕಾಣಲಿಲ್ಲ
ರಾತ್ರಿಯಲಿ ಜೊತೆಗಿಲ್ಲ
ಎಲ್ಲಿದ್ದೇನೆ ನಾನು?

ಭವದೊಳಗೆ ಮುಳುಗಿ
ಕದಳಿಯಲಿ ಕಳೆದು
ಗುರು ಕೃಪೆಗೆ ಬಾಯಾರಿ
ಬಯಲ ಬಡಬಡಿಸುವ ಜೀವ
ಎಲ್ಲಿರುವೆ ನೀನು?

Previous post ಕಣ್ಣ ಪರಿಧಿ
ಕಣ್ಣ ಪರಿಧಿ
Next post ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

Related Posts

ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Comments 4

  1. ಸುನಂದಾ ರಾಚಣ್ಣ, ದಾವಣಗೆರೆ
    Feb 11, 2023 Reply

    ಮನದಾಳದ ಭಾವಗಳನ್ನೆಲ್ಲಾ ದಾಟಿ ಗುರಿಯತ್ತ ಸಾಗಿರುವೆ… ಸರಿವ ಕ್ಷಣಗಳ, ಬರುವ ಗಳಿಗೆಗಳ ಕಟ್ಟುತ್ತಾ ಕೆಡವುತ್ತಾ ಮುಂದೆ ಸಾಗಿ, ಗುರು ಪಾದಕ್ಕೆ ಅರ್ಪಿತಳಾಗಿರುವೆ… ಎಲ್ಲಿಂದ ಬಂದು ಅದೆಲ್ಲಿಗೆ ಹೋಗುವ ಹಂಬಲ? ಬಯಲಾಗುವ ತುಡಿತ… ಹೇಗೆ ಬರೆದೆ? ಒಂದೊಂದು ಹಂತ ದಾಟಿ ಗುರುಗೆ, ಗುರಿಗೆ ಹತ್ತಿರಾಗುತಿರುವೆ… ಈ ಪಯಣ ನನ್ನ ಕಲ್ಪನೆಗೂ ಮೀರಿದ್ದು ಮಗಳೇ!!!
    ✍🏼 ಸುನಂದಾ ಕಪ್ಪರದ

  2. VEERESH
    Feb 11, 2023 Reply

    ಅದ್ಭುತ ಬರಹ ಮೇಡಂ👌🏻👌🏻👌🏻

  3. Venkatesh
    Feb 11, 2023 Reply

    🙏

  4. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Feb 13, 2023 Reply

    “ಪ್ರತಿ ಪದವೂ ನಮ್ಮೊಳಗಿನ. ನಮ್ಮನ್ನು ಹುಡುಕುವಂತೆ ಮಾಡುತ್ತದೆ ,ಎಲ್ಲಿದ್ದೇನೆ ನಾನು ಕವನ. 👌👌👍👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
Copyright © 2026 Bayalu