Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದೆ ಈ ಕ್ಷಣ?
Share:
Poems October 21, 2024 ಕೆ.ಆರ್ ಮಂಗಳಾ

ಎಲ್ಲಿದೆ ಈ ಕ್ಷಣ?

ವರ್ತಮಾನದಲ್ಲಿ ನಡೆಯಲರಿಯದೆ
ನುಡಿಯಲರಿಯದೆ ಬಾಳಲರಿಯದೆ
ಕಳದೇ ಹೋಗುವ ಬದುಕು
ಕಾಣಲಾರದು ಯಾಕೆ- ‘ಈ ಕ್ಷಣ’?

ರಾಗಾಲಾಪಗಳ ಬಣ್ಣಗಳಲಿ
ಮಿಂದೇಳುತಿರುವಾಗ
ಬಯಕೆ ಬೇಗುದಿಗಳಲಿ
ಬೇಯುತಿರುವಾಗ, ಎಲ್ಲಿದೆ ಈ ಕ್ಷಣ?

ಅವರಿವರ ಸುದ್ದಿಯಲೇ
ದಿನ ಸವೆಯುತಿರುವಾಗ
ದ್ವೇಷ-ರೋಷ-ವಿಷಯಗಳ
ವಿಷ ತೊನೆಯುತಿರುವಾಗ, ತಿಳಿದೀತೆ ಈ ಕ್ಷಣ?

ಹಿಂದುಮುಂದುಗಳ ಗೊಂದಲ
ತಲೆ ತುಂಬಿಕೊಂಡಾಗ
ಆಸೆ ಆಮೋದಗಳಿಗೆ
ಹಗಲಿರುಳು ಸವೆವಾಗ, ಅರಿವಾದೀತೇ ಈ ಕ್ಷಣ?

ಸುಖ-ದುಃಖ ಸರಪಳಿಯ
ನನಗೆ ನಾನೇ ಹೊಸೆದು
ಸ್ವಹಿತದ ಸಂಬಂಧಗಳ
ಕೂಡಿ ಕಳೆಯುತಿರುವಾಗ ಸಿಕ್ಕೀತೆ ಈ ಕ್ಷಣ?

ಕಣ್ಣು ಹಾಯಿಸಿದಲೆಲ್ಲಾ
ಮನವು ಹರಿದಲೆಲ್ಲಾ
ಪೂರ್ವ ಸಂಚಿತಗಳೇ
ಬಗೆಬಗೆಯಾಗಿ ತೋರುವಾಗ, ಕಂಡೀತೆ ಈ ಕ್ಷಣ?

ಮಾತಲ್ಲೂ ಮೌನದಲೂ
ಪೂಜೆಯಲೂ, ಧ್ಯಾನದಲೂ
ಸಿಗದ ಈ ಕ್ಷಣ
ಕಣ್ಮುಂದೆ, ಕಾಲಡಿಯೇ
ಸರಿದು ಹೋಗುವ ಪರಿಗೆ
ಕಂಗಾಲಾಗಿ ಬೆಚ್ಚಿ ನಿಂತಾಗ
ಕರುಣಾಮಯಿ ಗುರು ಹೇಳಿದ-

ಈ ಕ್ಷಣಕೂ ಮುಖ್ಯ
ಇನ್ನೇನೋ ಇದೆ ಎನುವ
ಮನದ ಮೋಡಿ ಮಾತಿಗೆಲ್ಲಾ
ಕಿವಿಯಾಗಬೇಡಮ್ಮಾ
ಅಲ್ಲೇನಿದೆ…
ಬರಿ ತೆವಲುಗಳು
ಸುಖದ ಅಮಲುಗಳು
ಒಣ ಯೋಚನೆಗಳು
ನಾಳಿನ ಭಯಗಳು
ಏನೇನೋ ಆತಂಕಗಳು…
ಚಿತ್ತದಾಟದಲಿ ಮುಳುಗಿರುವುದೂ
ಗಾಢ ನಿದ್ದೆಯೇ!

ಕಂಗಳ ಕರುಳ ಕೊಯ್ಯದೆ
ಮನದ ತಿರುಳ ಹುರಿಯದೆ
ಹಿಡಿಯಲಾರೆ ನೀನದರ ಜಾಡ
ಕಾಣಲಾರೆ ಅದರ ಬೆಳಗ.
ತಿಳಿ ಮಗಳೇ-
ಈ ಕ್ಷಣವೆಂದರೆ
ಬೇರೇನೂ ಅಲ್ಲ-
ಅದೊಂದು ಬಿಡುಗಡೆ, ಮಹಾ ಎಚ್ಚರ!

Previous post ಈ ಬಳ್ಳಿ…
ಈ ಬಳ್ಳಿ…
Next post ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)

Related Posts

ಗಾಳಿ ಬುರುಡೆ
Share:
Poems

ಗಾಳಿ ಬುರುಡೆ

June 17, 2020 ಪದ್ಮಾಲಯ ನಾಗರಾಜ್
ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು ಗಾಳಿಗೆ ತೂರ್ಹೋಗಬೇಡಾ //ನಂಬಿ// ಚಿತ್ರಾ...
ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...

Comments 1

  1. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Oct 24, 2024 Reply

    ಈ ಕ್ಷಣವೆಂದರೆ ನಿಜವಾಗಿಯೂ ಮಹಾ ಎಚ್ಚರವೇ!!!
    ಎಲ್ಲಿದೆ ಈ ಕ್ಷಣ ತುಂಬ ಚೆನ್ನಾಗಿದೆ👌👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನಸ್ಸು
ಮನಸ್ಸು
September 7, 2020
ಗುರುಪಥ
ಗುರುಪಥ
January 4, 2020
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಗುಟುಕು ಆಸೆ…
ಗುಟುಕು ಆಸೆ…
May 8, 2024
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಭಾರ
ಭಾರ
October 6, 2020
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
Copyright © 2025 Bayalu