Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದೆ ಈ ಕ್ಷಣ?
Share:
Poems October 21, 2024 ಕೆ.ಆರ್ ಮಂಗಳಾ

ಎಲ್ಲಿದೆ ಈ ಕ್ಷಣ?

ವರ್ತಮಾನದಲ್ಲಿ ನಡೆಯಲರಿಯದೆ
ನುಡಿಯಲರಿಯದೆ ಬಾಳಲರಿಯದೆ
ಕಳದೇ ಹೋಗುವ ಬದುಕು
ಕಾಣಲಾರದು ಯಾಕೆ- ‘ಈ ಕ್ಷಣ’?

ರಾಗಾಲಾಪಗಳ ಬಣ್ಣಗಳಲಿ
ಮಿಂದೇಳುತಿರುವಾಗ
ಬಯಕೆ ಬೇಗುದಿಗಳಲಿ
ಬೇಯುತಿರುವಾಗ, ಎಲ್ಲಿದೆ ಈ ಕ್ಷಣ?

ಅವರಿವರ ಸುದ್ದಿಯಲೇ
ದಿನ ಸವೆಯುತಿರುವಾಗ
ದ್ವೇಷ-ರೋಷ-ವಿಷಯಗಳ
ವಿಷ ತೊನೆಯುತಿರುವಾಗ, ತಿಳಿದೀತೆ ಈ ಕ್ಷಣ?

ಹಿಂದುಮುಂದುಗಳ ಗೊಂದಲ
ತಲೆ ತುಂಬಿಕೊಂಡಾಗ
ಆಸೆ ಆಮೋದಗಳಿಗೆ
ಹಗಲಿರುಳು ಸವೆವಾಗ, ಅರಿವಾದೀತೇ ಈ ಕ್ಷಣ?

ಸುಖ-ದುಃಖ ಸರಪಳಿಯ
ನನಗೆ ನಾನೇ ಹೊಸೆದು
ಸ್ವಹಿತದ ಸಂಬಂಧಗಳ
ಕೂಡಿ ಕಳೆಯುತಿರುವಾಗ ಸಿಕ್ಕೀತೆ ಈ ಕ್ಷಣ?

ಕಣ್ಣು ಹಾಯಿಸಿದಲೆಲ್ಲಾ
ಮನವು ಹರಿದಲೆಲ್ಲಾ
ಪೂರ್ವ ಸಂಚಿತಗಳೇ
ಬಗೆಬಗೆಯಾಗಿ ತೋರುವಾಗ, ಕಂಡೀತೆ ಈ ಕ್ಷಣ?

ಮಾತಲ್ಲೂ ಮೌನದಲೂ
ಪೂಜೆಯಲೂ, ಧ್ಯಾನದಲೂ
ಸಿಗದ ಈ ಕ್ಷಣ
ಕಣ್ಮುಂದೆ, ಕಾಲಡಿಯೇ
ಸರಿದು ಹೋಗುವ ಪರಿಗೆ
ಕಂಗಾಲಾಗಿ ಬೆಚ್ಚಿ ನಿಂತಾಗ
ಕರುಣಾಮಯಿ ಗುರು ಹೇಳಿದ-

ಈ ಕ್ಷಣಕೂ ಮುಖ್ಯ
ಇನ್ನೇನೋ ಇದೆ ಎನುವ
ಮನದ ಮೋಡಿ ಮಾತಿಗೆಲ್ಲಾ
ಕಿವಿಯಾಗಬೇಡಮ್ಮಾ
ಅಲ್ಲೇನಿದೆ…
ಬರಿ ತೆವಲುಗಳು
ಸುಖದ ಅಮಲುಗಳು
ಒಣ ಯೋಚನೆಗಳು
ನಾಳಿನ ಭಯಗಳು
ಏನೇನೋ ಆತಂಕಗಳು…
ಚಿತ್ತದಾಟದಲಿ ಮುಳುಗಿರುವುದೂ
ಗಾಢ ನಿದ್ದೆಯೇ!

ಕಂಗಳ ಕರುಳ ಕೊಯ್ಯದೆ
ಮನದ ತಿರುಳ ಹುರಿಯದೆ
ಹಿಡಿಯಲಾರೆ ನೀನದರ ಜಾಡ
ಕಾಣಲಾರೆ ಅದರ ಬೆಳಗ.
ತಿಳಿ ಮಗಳೇ-
ಈ ಕ್ಷಣವೆಂದರೆ
ಬೇರೇನೂ ಅಲ್ಲ-
ಅದೊಂದು ಬಿಡುಗಡೆ, ಮಹಾ ಎಚ್ಚರ!

Previous post ಈ ಬಳ್ಳಿ…
ಈ ಬಳ್ಳಿ…
Next post ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Comments 1

  1. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Oct 24, 2024 Reply

    ಈ ಕ್ಷಣವೆಂದರೆ ನಿಜವಾಗಿಯೂ ಮಹಾ ಎಚ್ಚರವೇ!!!
    ಎಲ್ಲಿದೆ ಈ ಕ್ಷಣ ತುಂಬ ಚೆನ್ನಾಗಿದೆ👌👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಮನವೇ ಮನವೇ…
ಮನವೇ ಮನವೇ…
May 6, 2020
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಗುರುವಂದನೆ
ಗುರುವಂದನೆ
October 13, 2022
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
Copyright © 2025 Bayalu