Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಂದು-ಇಂದು
Share:
Poems December 8, 2021 ಕೆ.ಆರ್ ಮಂಗಳಾ

ಅಂದು-ಇಂದು

ಅಂದು-
ಹೇಗೋ ಎಂತೋ
ಸುರುಸುರುಳಿಯಾಗಿ
ಬಗೆಬಗೆಯಲಿ ಪರಿಪರಿಯಲಿ
ಸುತ್ತಿಕೊಂಡಿದ್ದು-
ಮೆತ್ತಿಕೊಂಡಿದ್ದು
ಬೆಳೆಯುತ್ತಾ-ಬಲಿಯುತ್ತಾ
ನಂಟಾಗಿ- ಗಂಟಾಗಿ
ಯಮಯಾತನೆಯ ಹೊರೆಯಾಗಿ
ಮುಡಿಯೇರಿ ಭವಭಾರ
ಉಸಿರ ಹಿಸುಕಿತ್ತು.

ಇಂದು-
ಹೊರೆಗಳನು ಇಳುಹುತ್ತಾ
ಗಂಟುಗಳ ಬಿಡಿಸುತ್ತಾ
ಪೊರೆಗಳನು ಕಳಚುತ್ತಾ
ಹಗುರಾಗಿ ನವಿರಾಗಿ
ಸಾಗುತಿದೆ ನಡಿಗೆ
ಕಾಲದೊಂದಿಗೆ ಚಲನೆ…

ಗುರು ಸಿಕ್ಕು ಬೆಳಕಾಗಿ
ಗಮ್ಯತೆಯ ಅರಿವಾಗಿ
ಕೇಳುವ- ಕೆದಕುವ
ಸಂಚಿ ಬರಿದಾಗಿತ್ತು…
ನಿನ್ನೆ ಕಳೆದ ಮೇಲೆ
ನಾಳೆ ಎಂಬುದೂ ಇಲ್ಲ…
ಮಾತು ಮರೆತಾ ‘ನಾನು’
ಮಾತಿಲ್ಲದಾ ನೀನು
ಸಂಧಿಸುವ ಆ ಗಳಿಗೆ
ಬರಬಾರದೇ ಇಂದೇ?

Previous post ಬೆಳಕಲಿ ದೀಪ
ಬೆಳಕಲಿ ದೀಪ
Next post ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ಹಣತೆಯ ಹಂಗು
Share:
Poems

ಹಣತೆಯ ಹಂಗು

October 19, 2025 ಕೆ.ಆರ್ ಮಂಗಳಾ
ನಾನೆಂಬ ಕತ್ತಲೆಗೆ ನೀನೆಂಬ ಜ್ಯೋತಿ ನಾನಿದ್ದಾಗ ನೀ ಇರಲೇ ಬೇಕೆನುವ ತರ್ಕ ನಾನು ಕರಗದೆ ನೀನಾಗಲಾರೆ ನೀನು ಸರಿಯದೇ ಬೆಳಕ ಕಾಣಲಾರೆ… ಕತ್ತಲೆಗಲ್ಲವೆ ಬೆಳಕಿನ ಮೋಹ? ಕೈಯ ಹಣತೆಯಲಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
Copyright © 2025 Bayalu