Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಲಿ ಸವಾರಿ…
Share:
Poems June 10, 2023 ಜ್ಯೋತಿಲಿಂಗಪ್ಪ

ಹುಲಿ ಸವಾರಿ…

ಖಾಲೀ…
ಇರುವೆಯಲ್ಲಾ ಏನಾದರೂ ನೋಡು
ಕಣ್ಣು ತುಂಬಿದೆ ನೋಡಲೇನುಂಟು ನೋಡದು

ಏನಾದರೂ ಕೇಳು
ಕಿವಿ ತುಂಬಿದೆ ಕೇಳಲೇನುಂಟು ಕೇಳದು

ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ
ತುಳುಕಾಡುತಿವೆ

ಇರು ಇಲ್ಲವಾಗಿರು
ನೆನೆ ನೆನೆದು ನೆನಹು ಅಳಿಯಲಿ

ಹುಲಿ ಸವಾರಿ ಮಾಡಿರುವೆ
ಇಳಿಯುವ ಭಯ
ಭಾವರಹಿತ ಆಗುವುದೆಂದರೆ
ಹುಲಿ ಸವಾರಿಯೇ…

ಹಳೆಯ ಗಾಯ ತಾಗಿ ನೋಯಿಸಿತೇ
ಮಾಯದ ಗಾಯ ನೋವು
ಇದ್ದೇನೋ ಇರೆನೋ….

*** *** ***

ಈ
ಮನವ
ನಿನಗೆ ಕೊಟ್ಟಿರುವೆ ಇನ್ನಾವ
ಮನದಲಿ ಧ್ಯಾನಿಸಲಿ ನಿನ್ನ

ಅಕ್ಕಾ

ನಿನ್ನ ಧ್ಯಾನಿಸುವ ವ್ಯಸನ
ಅಶನ ತೊರೆದಿರುವೆ

ಒಲಿಯುವೆಯೋ
ಒಲಿಯೆಯೋ…

ಆವ ಸಂಬಂಧವೂ ಇಲ್ಲ

ಇನ್ನೇನಿದೆ
ಕಾಯ ಮಣ್ಣಾದಡೆ
ಜೀವ ಬಯಲಾಗದೇ

ಅರಿವೇ
ನೀನಾಗಿರಲು ಇನ್ನಾರ ಕೇಳಲಿ

ಬಯಲಾಗದ ಜೀವಕೆ ಕಾಯ
ಮಣ್ಣಾಗುವುದರಿಯದು

ಈ
ಕಣ್ಣ ಕಾಯದಿಂದ
ಬಿಡಿಸು ಕಾಣುವೆ ನಿನ್ನ

ಕಾಣುವ ಕಣ್ಣಿರಲು ಕಾಯ ಮಣ್ಣು

ಧ್ಯಾನಿಸುವುದೇನು ಒಂದು ವ್ಯಸನವೇ…

ಕತೆಗಾರನಾದರೂ ಕತೆಯಲಿ ಬಾಗಿ.

Previous post ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
Next post ಮೀನಿನ ಬಯಕೆ
ಮೀನಿನ ಬಯಕೆ

Related Posts

ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...
ಹಾಯ್ಕುಗಳು
Share:
Poems

ಹಾಯ್ಕುಗಳು

November 10, 2022 ಜ್ಯೋತಿಲಿಂಗಪ್ಪ
೦೧ ಖಾಲಿ ಮನೆಯ ಬಾಗಿಲು ಬಡಿದರೆ ಸದ್ದು ಕೇಳಿತು. ೦೨ ಹೆಂಡದ ಹುಳಿ ವಾಸನೆ ಮಡಿಕೆಯ ಖಾಲಿಗಂಟದು. ೦೩ ಏನು ಸೋಜಿಗ ಹೂವ ಪರಿಮಳವ ಗಾಳಿ ಹೊತ್ತುದು. ೦೪ ದೀಪ ಆರಿತು ಇದ್ದ ಬೆಳಕು...

Comments 3

  1. ZABIULLA M. Asad
    Jun 12, 2023 Reply

    ನಮಸ್ತೆ ಸರ್
    ನಿಮ್ಮ ಎರಡೂ ಕವಿತೆಗಳ ಓದಿನೊಂದಿಗೆ ನನ್ನ ಮುಂಜಾವು ಸಂಪನ್ನವಾಯಿತು ಸರ್.
    ಕವಿತೆಗಳ ಅಮೂರ್ತಡೆದೆಗಿನ ಅನುಭಾವದ ನಡಿಗೆ ಆತ್ಮವನ್ನು ತಾಕಿತು. ಗಾಳಿ ಎಲೆಯನ್ನು ಸ್ಪರ್ಶಸಿದ ಹಾಗೆ…
    ಮೇಘಕೆ ಹಕ್ಕಿಯ ರೆಕ್ಕೆ ಮುಟ್ಟಿದ ಹಾಗೆ…

    ಮಣ್ಣು ಮೆಟ್ಟಿದ ದಾರಿ ಕವಿತೆಯನ್ನು ಸಹ ಓದಿದೆ.

    ಧನ್ಯವಾದಗಳು ಸರ್ 🙏🏻💐

  2. ರವಿಕುಮಾರ ಜಗಳೂರು
    Jun 14, 2023 Reply

    ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ… ಬಸವಣ್ಣನವರ ಆಶಯ ನೆನಪಾಯಿತು…

  3. ದಯಾಶಂಕರ ಮಧುಗಿರಿ
    Jun 20, 2023 Reply

    ಕತೆಗಾರನೂ ಕತೆಯಲಿ ಭಾಗಿಯಾದ ಪರಿ, ನನಗೆ ನಾನೊಡ್ಡಿದ ವಿಧಿ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ವೀರ
ವೀರ
April 29, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಮಾತು ಮಾಯೆ
ಮಾತು ಮಾಯೆ
July 4, 2021
Copyright © 2025 Bayalu