Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಿಕೊಡು ಗುರುವೇ…
Share:
Poems July 4, 2022 ಕೆ.ಆರ್ ಮಂಗಳಾ

ಹುಡುಕಿಕೊಡು ಗುರುವೇ…

ದೇಹದಲ್ಲೋ ಭಾವದಲ್ಲೋ
ಎದೆಯ ಒಳಗೋ ತಲೆಯ ಒಳಗೋ
ಕಳೆದುಹೋಗಿದ್ದೇನೆ ನಾನು
ಕಳೆದುಹೋಗಿದ್ದೇನೆ…

ಕುಲದಲ್ಲೋ ಛಲದಲ್ಲೋ
ಹಠದಲ್ಲೋ ಅಹಮಿನಲ್ಲೋ
ಸೇರಿಹೋಗಿದ್ದೇನೆ ನಾನು
ಸೇರಿಹೋಗಿದ್ದೇನೆ…

ಸಂಗದಲ್ಲೋ ಸಂಸಾರದಲ್ಲೋ
ಸ್ನೇಹದಲ್ಲೋ ಪ್ರೇಮದಲ್ಲೋ
ಮುಳುಗಿಹೋಗಿದ್ದೇನೆ ನಾನು
ಮುಳುಗಿಹೋಗಿದ್ದೇನೆ…

ನೆನಪಿನಲ್ಲೋ ಕನಸಿನಲ್ಲೋ
ಮಾತಿನಲ್ಲೋ ಮೌನದಲ್ಲೋ
ಕರಗಿ ಹೋಗಿದ್ದೇನೆ ನಾನು
ಕರಗಿ ಹೋಗಿದ್ದೇನೆ…

ಬರೆಯುತಿರುವ ಅಕ್ಷರಗಳಲ್ಲೋ
ಕಲೆ ಹಾಕಿದ ಮಾಹಿತಿಯೊಳಗೋ
ಮಸುಕಾಗಿದ್ದೇನೆ
ಕಳೆದು ಹೋದ ಕಾಲದಲ್ಲೋ
ನಾಳೆ ಬರುವ ದಿನಗಳಲ್ಲೋ
ಜಾರಿಹೋಗಿದ್ದೇನೆ…

ಮತಿಗೆಟ್ಟು ಧೃತಿಗೆಟ್ಟು
ಮುಂದ ತಿಳಿಯದೇ, ಗೊತ್ತನರಿಯದೇ
ನಡೆವ ದಾರಿಯಲ್ಲಿ ದಿಕ್ಕುತಪ್ಪಿದ್ದೇನೆ
ಹುಡುಕಿಕೊಡು ಗುರುವೆ
ನನ್ನ ನನಗೆ ಹುಡುಕಿಕೊಡು.

Previous post ಮರೆತೆ…
ಮರೆತೆ…
Next post ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...

Comments 3

  1. Manohara acharya
    Jul 5, 2022 Reply

    ನಮಸ್ತೆ ಮಂಗಳ.ಹುಡುಕಿ ಕೊಡಿ ಗುರುವೇ ಮತ್ತು ನನ್ನ ನಿನ್ನ ನಡುವೆ ಬಹಳ ಸೊಗಸಾಗಿದೆ. ಇನ್ನು ಹೆಚ್ಚು ಹೆಚ್ಚು ಹೊರಬರಲಿ ಎಂದು ಆಶಿಸುತ್ತೇನೆ.ಪ್ರೀತಿ ಇರಲಿ

  2. H V Jaya
    Jul 6, 2022 Reply

    ಕವನ ಬಹಳ ಅರ್ಥಗರ್ಭಿತವಾಗಿದೆ… ನಾನೂ ಅಜ್ಞಾನದ ಕತ್ತಲೆಯೊಳಗೆ ಕಳದುಹೋಗಿದ್ದೇನೆ. ಸುಜ್ಞಾನವನ್ನು ನೀಡಿ ಹುಡುಕಿ ಕೊಡಿ ಗುರುವೆ…

  3. ಪೆರೂರು ಜಾರು, ಉಡುಪಿ
    Jul 7, 2022 Reply

    ಕಳೆದುಕೊಂಡವರನ್ನು ಹುಡುಕಿಕೊಡುವ ಗುರುಗಳು ಇಂದೂ ಇದ್ದಾರೆಯೆ? ಪೋಲೀಸರಂತೂ ಕಳೆದುಕೊಂಡವರಿಂದ ತಮಗೇನು ಲಾಭ ಎಂದು ತಿಳಿದ ಬಳಿಕ ಹುಡುಕುತ್ತಾರೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
Copyright © 2026 Bayalu