Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನನ್ನು ಕ್ಷಮಿಸು
Share:
Poems April 5, 2026 ಜ್ಯೋತಿಲಿಂಗಪ್ಪ

ನನ್ನನ್ನು ಕ್ಷಮಿಸು

ಆಸೆಗಳಿರಲು ಆತಂಕ
ನಿಲ್ಲದು
ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ

ಹುಟ್ಟಿದರೆ ಸಾವು
ಹುಟ್ಟದಿರೆ ಸಾವಿಲ್ಲ
ಸಾವಿಗೇನು ಕೇಡೇ…

ಸಂತೆಯ ಸದ್ದಿನಲಿ
ಸಂತನಾಗುವೆಯಾದರೆ ಸಂತೆಗೂ ಸದ್ದಿಲ್ಲ

ಆಸೆ ಹುಟ್ಟಿದರೆ
ಆಸೆ ಸಾಯುವವರೆಗೂ ಹುಟ್ಟುತಲೇ ಇರುವೆ

ಸುಡದ ಬಯಕೆಗಳು
ಸುಡುತಲೇ ಇರುವವು

ನನ್ನನ್ನು ಕ್ಷಮಿಸು
ನಾನೇನು ಮಾಡುತ್ತಿದ್ದೇನೆಂದು
ನನಗೇ ಗೊತ್ತಿಲ್ಲ

ಈ
ಸರಿ ತಪ್ಪುಗಳೆಲ್ಲಾ ನನ್ನ
ಅಹಂಕಾರದ ಮುದ್ರೆಗಳು
ಸುಡಲೀ ಅಹಂ

ಸಿಟ್ಟು
ಸಂತಸದಲಿರುವಾಗ
ಮೌನ ಕ್ಷೇಮ

ಕ್ಷಮಿಸುವುದಾದರೆ
ನನ್ನ
ಅಹಂಕಾರವನ್ನ ಕ್ಷಮಿಸು
ಇಲ್ಲಾ
ಮರೆತು ಬಿಡು

ಹಾರಿದೆ
ಕ್ಷಿಪಣಿ; ಪರಿಣಾಮ
ಎದುರಿಸು

ಕಾದಾಟಗಳೆಲ್ಲಾ ಭ್ರಮೆ
ಭ್ರಮೆಗಳಿಗಾಗಿ ಕಾದಾಟ

ನನ್ನ
ರೂಹಿಂಗೆ ನಾನೇ ಮರುಳು
ಕನ್ನಡಿಯ ಹಂಗೇ…

Previous post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
Next post ನಡೆಯ ಎಡೆ…
ನಡೆಯ ಎಡೆ…

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...

Comments 3

  1. ಎನ್.ಪಿ.ಮಂಜುನಾಥ್
    Apr 9, 2026 Reply

    ಸುಡಲು ಸಾಧ್ಯವಾಗದ ಬಯಕೆಗಳು ಸುಡುತ್ತಲೇ ಇರುತ್ತವೆ… ಕಾವ್ಯದ ಚುಟುಕು ಸಾಲುಗಳಲ್ಲಿ ಚಿಂತನೆಗೆ ಹಚ್ಚುವ ಆಳ ವಿಚಾರಗಳಿವೆ…. ನಿಮ್ಮ ಕವನಗಳನ್ನು ತಪ್ಪದೇ ಓದುವೆ🙏

    • GH JYOTILINGAPPA
      Apr 10, 2026 Reply

      ನಿಮ್ಮ ಅಭಿಮಾನ ಮತ್ತು ಓದಿಗೆ ಮನ ತುಂಬಿತು.

  2. ಡಾ.ಉಮೇಶ್ ಸೊರಬ
    Apr 10, 2026 Reply

    ಸಮಕಾಲೀನ ಜಾಗತಿಕ ವಿದ್ಯಮಾನಗಳಿಗೆ ಬೀಜವಾಗಿರುವ ಅಹಮ್ ಅನ್ನು ಮೀರಲಾರದ ಮನಸ್ಥಿತಿ ಇಲ್ಲಿ ಸಜೀವ ಚಿತ್ರವಾಗಿ ರೂಪುಗೊಂಡಿದೆ. ಆಸೆ ಮತ್ತು ಆಯುಷ್ಯಗಳ ನಡುವೆ ಚಾಚಿಕೊಂಡಿರುವ ಮನುಷ್ಯನ ಕ್ರೌರ್ಯವನ್ನು ಒರೆಗೆ ಹಚ್ಚುವ ಈ ಕವಿತೆ ತನ್ನ ಎಲ್ಲಾ ಸಾಲುಗಳಲ್ಲೂ ವಿಷಾದದ ಜೊತೆಗೆ ವಿವೇಕವನ್ನೂ , ವಿವೇಕದ ಜೊತೆಗೆ ವ್ಯಂಗ್ಯವನ್ನೂ , ವ್ಯಂಗ್ಯದ ಜೊತೆಗೆ ವ್ಯಕ್ತಿತ್ವದ ಅವನತಿಯನ್ನು ರೂಪಕಗೊಳಿಸುವ ಬಗೆ ಅಪೂರ್ವವಾಗಿ ಮೂಡಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಮಾಯದ ಗಾಯ
ಮಾಯದ ಗಾಯ
October 19, 2025
ಗಣಾಚಾರ
ಗಣಾಚಾರ
August 8, 2021
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಬಯಲಾಟ
ಬಯಲಾಟ
March 17, 2021
Copyright © 2026 Bayalu