Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುದಿಗಳೆರಡು ಇಲ್ಲವಾದಾಗ…
Share:
Poems March 9, 2023 ಕೆ.ಆರ್ ಮಂಗಳಾ

ತುದಿಗಳೆರಡು ಇಲ್ಲವಾದಾಗ…

ಭೂಮಿ- ಆಕಾಶದ ದೂರ ಅಳಿದಾಗ
ಭುವಿಯ ಸೆಳೆತವೂ ಇಲ್ಲ
ಆಗಸದ ಎಳೆತವೂ ಇಲ್ಲ.

ಹಗಲು- ರಾತ್ರಿಗಳ ಭ್ರಮಣ ಸರಿದಾಗ
ಬೆಳಗಿನ ಬಯಕೆಯೂ ಇಲ್ಲ
ಕತ್ತಲೆಯ ಭಯವೂ ಇಲ್ಲ.

ಧರ್ಮ- ಅಧರ್ಮಗಳ ವಾದಗಳು ಸೋತಾಗ
ಧರ್ಮಾಂಧತೆಯೂ ಇಲ್ಲ
ಅಧರ್ಮದ ಜಂಜಡವೂ ಇಲ್ಲ.

ಪಾಪ- ಪುಣ್ಯಗಳ ಗುಟ್ಟು ಬಿಚ್ಚಿದಾಗ
ನರಕ ಭೀತಿಯೂ ಇಲ್ಲ
ಸ್ವರ್ಗದ ಆಸೆಯೂ ಇಲ್ಲ.

ದ್ವೈತ- ಅದ್ವೈತಗಳ ಮೇಲಾಟ ನಿಂತಾಗ
ಎರಡೆಂಬ ಭಿನ್ನತೆ ಇಲ್ಲ
ಬ್ರಹ್ಮ ನಾನೆಂಬ ಧಾಷ್ಟ್ಯವೂ ಇಲ್ಲ.

ಸಾಕಾರ- ನಿರಾಕಾರಗಳ ಗೊಂದಲ ಬಿಟ್ಟಾಗ
ಮೂರ್ತಿಗಳ ಹಂಗೂ ಇಲ್ಲ
ಕಾಣದುದರ ಕಲ್ಪನೆಯೂ ಇಲ್ಲ.

ರೂಪ- ವಿರೂಪಗಳ ದಿಟ್ಟಿಸಿ ಕಂಡಾಗ
ಸೌಂದರ್ಯದ ಬಣ್ಣನೆಯೂ ಇಲ್ಲ
ಕುರೂಪದ ಹೇವರಿಕೆಯೂ ಇಲ್ಲ.

ಸೋಲು- ಗೆಲುವುಗಳ ಒಳಹೊಕ್ಕು ಬಂದಾಗ
ಬೀಳುವ ಭಯವೂ ಇಲ್ಲ
ಬೀಗುವ ಭ್ರಮೆಯೂ ಇಲ್ಲ.

ಸುಖ- ದುಃಖಗಳ ಸುಳಿಯ ತೆಗೆದಾಗ
ಹಿತದ ಮೈಮರೆವಿಕೆ ಇಲ್ಲ
ತಲ್ಲಣದ ದುಗುಡವೂ ಇಲ್ಲ.

ಜ್ಞಾನ- ಅಜ್ಞಾನದ ಜಾಡ ತಿಳಿದಾಗ
ನಾ ಬಲ್ಲೆನೆಂಬ ಕೋಡೂ ಇಲ್ಲ
ಅರಿಯೆನೆಂಬ ಅಳುಕೂ ಇಲ್ಲ.

ಶ್ರೇಷ್ಠ- ಕನಿಷ್ಠತೆಯ ಹುಸಿಯನರಿತಾಗ
ಹಿರಿದೆಂಬ ಹೊಗಳಿಕೆ ಇಲ್ಲ
ಕಿರಿದೆಂಬ ತಾತ್ಸಾರವಿಲ್ಲ.

ಇದೆ- ಇಲ್ಲಗಳ ಹೊಯ್ದಾಟ ಮರೆಯಾದಾಗ
ಇರುವುದರ ಗುಂಗೂ ಇಲ್ಲ
ಇಲ್ಲದುದರ ಗುಲ್ಲೂ ಇಲ್ಲ.

ಬೇಕು- ಬೇಡಗಳ ಆಯ್ಕೆಗಳು ಸರಿದಾಗ
ಇನ್ನೇನಿದೆ ಹಾತೊರೆವುದಕೆ?
ಬೇಡೆಂದು ಬೇಸರಿಸುವುದಕೆ?

ತಾನು- ಎದಿರು ಎನುವ ಮಾಯೆ ಹರಿದಾಗ
ನಾನೆನ್ನುವ ಅಹಮಿಕೆ ಎಲ್ಲಿದೆ?
ನೀನೆನುವ ಬೇಧವಾದರೂ ಎಲ್ಲಿ?

Previous post ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
Next post ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...

Comments 3

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Mar 11, 2023 Reply

    ನಿಜ..ಎರಡರ ಹಂಗು ತೊರೆದರೆ ಏನೂ ಉಳಿಯದು.ಸರಳವಾಗಿ ಹೇಳಿರುವ ಇರಿ.

  2. ಸುನಂದಾ ರಾಚಣ್ಣ, ದಾವಣಗೆರೆ
    Mar 12, 2023 Reply

    ತುದಿಗಳೆರಡು ಇಲ್ಲವಾದಾಗ ಏನು ಇವೆ, ಏನೂ ಇಲ್ಲ ಎಂದಾಗ, ಇದು ಭ್ರಮೆಯೋ, ಕಲ್ಪನೆಯೋ, ನಿಜವೋ ಸುಳ್ಳೋ ತಿಳಿಯದೇ ತಲೆಕೆರೆದುಕೊಂಡಾಗ ಸಿಕ್ಕಿದ್ದು ಬಯಲು, ಬರೀ ಬಯಲು, ಅಲ್ಲೇನು ಹುಡುಕಲಿ? ಆದಿ, ಅಂತ್ಯ ಎರಡೂ ಇಲ್ಲ, ಬದುಕು ಸಾಗುತಿದೆ, ಜೀವನ ಎಂಥ ವಿಸ್ಮಯ ಅಲ್ಲವೇ?

  3. ಅಂಬಾರಾಯ ಬಿರಾದಾರ
    Mar 14, 2023 Reply

    ತುದಿ ಮೊದಲಿಲ್ಲದ ಘನ ಬಯಲು
    👌👍👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನುಭವ ಮಂಟಪ
ಅನುಭವ ಮಂಟಪ
April 11, 2025
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಮಾಯದ ಗಾಯ
ಮಾಯದ ಗಾಯ
October 19, 2025
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
Copyright © 2026 Bayalu