Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುದಿಗಳೆರಡು ಇಲ್ಲವಾದಾಗ…
Share:
Poems March 9, 2023 ಕೆ.ಆರ್ ಮಂಗಳಾ

ತುದಿಗಳೆರಡು ಇಲ್ಲವಾದಾಗ…

ಭೂಮಿ- ಆಕಾಶದ ದೂರ ಅಳಿದಾಗ
ಭುವಿಯ ಸೆಳೆತವೂ ಇಲ್ಲ
ಆಗಸದ ಎಳೆತವೂ ಇಲ್ಲ.

ಹಗಲು- ರಾತ್ರಿಗಳ ಭ್ರಮಣ ಸರಿದಾಗ
ಬೆಳಗಿನ ಬಯಕೆಯೂ ಇಲ್ಲ
ಕತ್ತಲೆಯ ಭಯವೂ ಇಲ್ಲ.

ಧರ್ಮ- ಅಧರ್ಮಗಳ ವಾದಗಳು ಸೋತಾಗ
ಧರ್ಮಾಂಧತೆಯೂ ಇಲ್ಲ
ಅಧರ್ಮದ ಜಂಜಡವೂ ಇಲ್ಲ.

ಪಾಪ- ಪುಣ್ಯಗಳ ಗುಟ್ಟು ಬಿಚ್ಚಿದಾಗ
ನರಕ ಭೀತಿಯೂ ಇಲ್ಲ
ಸ್ವರ್ಗದ ಆಸೆಯೂ ಇಲ್ಲ.

ದ್ವೈತ- ಅದ್ವೈತಗಳ ಮೇಲಾಟ ನಿಂತಾಗ
ಎರಡೆಂಬ ಭಿನ್ನತೆ ಇಲ್ಲ
ಬ್ರಹ್ಮ ನಾನೆಂಬ ಧಾಷ್ಟ್ಯವೂ ಇಲ್ಲ.

ಸಾಕಾರ- ನಿರಾಕಾರಗಳ ಗೊಂದಲ ಬಿಟ್ಟಾಗ
ಮೂರ್ತಿಗಳ ಹಂಗೂ ಇಲ್ಲ
ಕಾಣದುದರ ಕಲ್ಪನೆಯೂ ಇಲ್ಲ.

ರೂಪ- ವಿರೂಪಗಳ ದಿಟ್ಟಿಸಿ ಕಂಡಾಗ
ಸೌಂದರ್ಯದ ಬಣ್ಣನೆಯೂ ಇಲ್ಲ
ಕುರೂಪದ ಹೇವರಿಕೆಯೂ ಇಲ್ಲ.

ಸೋಲು- ಗೆಲುವುಗಳ ಒಳಹೊಕ್ಕು ಬಂದಾಗ
ಬೀಳುವ ಭಯವೂ ಇಲ್ಲ
ಬೀಗುವ ಭ್ರಮೆಯೂ ಇಲ್ಲ.

ಸುಖ- ದುಃಖಗಳ ಸುಳಿಯ ತೆಗೆದಾಗ
ಹಿತದ ಮೈಮರೆವಿಕೆ ಇಲ್ಲ
ತಲ್ಲಣದ ದುಗುಡವೂ ಇಲ್ಲ.

ಜ್ಞಾನ- ಅಜ್ಞಾನದ ಜಾಡ ತಿಳಿದಾಗ
ನಾ ಬಲ್ಲೆನೆಂಬ ಕೋಡೂ ಇಲ್ಲ
ಅರಿಯೆನೆಂಬ ಅಳುಕೂ ಇಲ್ಲ.

ಶ್ರೇಷ್ಠ- ಕನಿಷ್ಠತೆಯ ಹುಸಿಯನರಿತಾಗ
ಹಿರಿದೆಂಬ ಹೊಗಳಿಕೆ ಇಲ್ಲ
ಕಿರಿದೆಂಬ ತಾತ್ಸಾರವಿಲ್ಲ.

ಇದೆ- ಇಲ್ಲಗಳ ಹೊಯ್ದಾಟ ಮರೆಯಾದಾಗ
ಇರುವುದರ ಗುಂಗೂ ಇಲ್ಲ
ಇಲ್ಲದುದರ ಗುಲ್ಲೂ ಇಲ್ಲ.

ಬೇಕು- ಬೇಡಗಳ ಆಯ್ಕೆಗಳು ಸರಿದಾಗ
ಇನ್ನೇನಿದೆ ಹಾತೊರೆವುದಕೆ?
ಬೇಡೆಂದು ಬೇಸರಿಸುವುದಕೆ?

ತಾನು- ಎದಿರು ಎನುವ ಮಾಯೆ ಹರಿದಾಗ
ನಾನೆನ್ನುವ ಅಹಮಿಕೆ ಎಲ್ಲಿದೆ?
ನೀನೆನುವ ಬೇಧವಾದರೂ ಎಲ್ಲಿ?

Previous post ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
Next post ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

Related Posts

ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Comments 3

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Mar 11, 2023 Reply

    ನಿಜ..ಎರಡರ ಹಂಗು ತೊರೆದರೆ ಏನೂ ಉಳಿಯದು.ಸರಳವಾಗಿ ಹೇಳಿರುವ ಇರಿ.

  2. ಸುನಂದಾ ರಾಚಣ್ಣ, ದಾವಣಗೆರೆ
    Mar 12, 2023 Reply

    ತುದಿಗಳೆರಡು ಇಲ್ಲವಾದಾಗ ಏನು ಇವೆ, ಏನೂ ಇಲ್ಲ ಎಂದಾಗ, ಇದು ಭ್ರಮೆಯೋ, ಕಲ್ಪನೆಯೋ, ನಿಜವೋ ಸುಳ್ಳೋ ತಿಳಿಯದೇ ತಲೆಕೆರೆದುಕೊಂಡಾಗ ಸಿಕ್ಕಿದ್ದು ಬಯಲು, ಬರೀ ಬಯಲು, ಅಲ್ಲೇನು ಹುಡುಕಲಿ? ಆದಿ, ಅಂತ್ಯ ಎರಡೂ ಇಲ್ಲ, ಬದುಕು ಸಾಗುತಿದೆ, ಜೀವನ ಎಂಥ ವಿಸ್ಮಯ ಅಲ್ಲವೇ?

  3. ಅಂಬಾರಾಯ ಬಿರಾದಾರ
    Mar 14, 2023 Reply

    ತುದಿ ಮೊದಲಿಲ್ಲದ ಘನ ಬಯಲು
    👌👍👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
Copyright © 2025 Bayalu