Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಸರಿಲ್ಲದಾ ಊರಿನ ಹಾಡು
Share:
Poems May 6, 2020 ಪದ್ಮಾಲಯ ನಾಗರಾಜ್

ಹೆಸರಿಲ್ಲದಾ ಊರಿನ ಹಾಡು

ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//

ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//

ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//

ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//

ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//

ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.

-ಪದ್ಮಾಲಯ ನಾಗರಾಜ್

Previous post ಮನವೇ ಮನವೇ…
ಮನವೇ ಮನವೇ…
Next post WHO AM I?
WHO AM I?

Related Posts

ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...
ನನ್ನ-ನಿನ್ನ ನಡುವೆ
Share:
Poems

ನನ್ನ-ನಿನ್ನ ನಡುವೆ

June 5, 2021 ಕೆ.ಆರ್ ಮಂಗಳಾ
ನನ್ನ-ನಿನ್ನ ನಡುವೆ ಗೋಡೆ ಎಬ್ಬಿಸಿದವರಾರು ಪರದೆ ಬಿಟ್ಟವರಾರು? ಕತ್ತಲು ತುಂಬಿದವರಾರು? ಮಂಜು ಕವಿಸಿದವರಾರು? ನಿನ್ನಿಂದ ನನ್ನ ದೂರ ಮಾಡಿದವರಾರು? ನನ್ನ-ನಿನ್ನ ನಡುವೆ ಕಂದ...

Comments 3

  1. Jyothilingappa
    May 7, 2020 Reply

    ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.

  2. Gangadhar navale
    May 14, 2020 Reply

    ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.

  3. Chandru pujar
    Aug 25, 2020 Reply

    Dhanyvad Sar Tumba chennagide

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಾಸೋಹ ತತ್ವ
ದಾಸೋಹ ತತ್ವ
January 10, 2021
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
Copyright © 2023 Bayalu