Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪೊರೆವ ದನಿ…
Share:
Poems August 11, 2025 ಕೆ.ಆರ್ ಮಂಗಳಾ

ಪೊರೆವ ದನಿ…

ಮೈಯೆಲ್ಲಾ ಕಿವಿಯಾಗಿ
ಮನವೆಲ್ಲಾ ಕಣ್ಣಾಗಿ
ಕೇಳಿಸಿಕೊಂಡೆನಯ್ಯಾ
ನೀನಾಡಿದ ಒಂದೊಂದು ನುಡಿಯ
ಮರೆತು ಹೋಗದಂತೆ
ನಾಲಿಗೆಗೆ ಮಂತ್ರವಾಗಿಸಿದೆ
ಜಾರಿಹೋಗದಂತೆ
ಜೋಪಾನದಿ ಎದೆಗಿಳಿಸಿಕೊಂಡೆ.

ಇಲ್ಲಿದೆ ಕೊಳೆ ಅಲ್ಲಿದೆ ಹೊಲೆ
ಇದೋ ನೋಡು
ದುರ್ವಿಚಾರಗಳ ನೆಲೆ
ಅದೇಕೆ ಬಂತು
ತನ್ನೆಲ್ಲಾ ಬಳಗಸಹಿತ
ದುರ್ಗುಣಗಳ ದಂಡು
ಹುಡುಕಿ ತೆಗೆ ತೆವಲುಗಳ
ಹಿಸುಕಿ ನೋಡು
ನಂಬಿಕೆಗಳ, ಭಾವಗಳ
ಬೂಟಾಟಿಕೆಯ ನಡೆಗಳ
ತೋರುತ್ತ ಹೋದೆಯಯ್ಯಾ
ಮಿಂಚಿನ ಚಾಟಿಯಂತೆ…

ಹಗಲುರಾತ್ರಿ ಎನದೆ
ಬೇಡದ್ದು, ಮರೆತದ್ದು
ಅಗತ್ಯವೇ ಇಲ್ಲದ್ದು
ಎಲ್ಲ ಕಲಬೆರಕೆಯಾಗಿ
ಸುಳಿಯಾಗಿ ಸೆಳೆವಾಗ
ಎದೆಯುದ್ದ, ಕೊರಳುದ್ದ
ಉಕ್ಕೇರಿ ಅಪ್ಪಳಿಸುವಾಗ
ಕೊಚ್ಚಿ ಹೋಗದಂತೆ
ನಿಲುವ ಗುಟ್ಟ ಹೇಳಿಕೊಟ್ಟೆ.

ಸುತ್ತುವರಿದ ಕದಳಿಯಲಿ
ಕಳೆದುಹೋಗದಂತೆ
ಎದುರಿನ ಜಾಲಕ್ಕೆ
ಸಿಕ್ಕಿ ಬೀಳದಂತೆ
ನನ್ನದೇ ಮೋಸಕ್ಕೂ
ನಾನೊಳಗಾಗದಂತೆ
ಭವದ ಜಟಿಲತೆಗಳಿಗೆ
ಎದೆಗುಂದದಂತೆ
ಮೂರರ ಮಾಯೆಗೆ
ಮಾರುಹೋಗದಂತೆ
ಪಾರಾಗುವ ಪಟ್ಟುಗಳ
ಕಲಿಸಿ ಕಾಪಾಡಿದೆ.

Previous post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ
Next post ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)

Related Posts

ಸೋತ ಅಂಗೈಗಳಿಗಂಟಿ…
Share:
Poems

ಸೋತ ಅಂಗೈಗಳಿಗಂಟಿ…

October 19, 2025 ಜಬೀವುಲ್ಲಾ ಎಂ.ಅಸದ್
ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...
ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
Copyright © 2026 Bayalu