Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಡ ಸೋಂಕದ ಅಲೆಗಳು
Share:
Poems July 10, 2025 ಜ್ಯೋತಿಲಿಂಗಪ್ಪ

ದಡ ಸೋಂಕದ ಅಲೆಗಳು

ನದಿ ಕೂಡುವ ಕಡಲ ಅಂಚು
ನಿಂತು ಸಂಬಂಧ ಹುಡುಕುತಿರುವೆ

ಕಡಲ ಸೇರುವ ನೀರು
ನದಿ ಯಾವುದು ಕಡಲು ಯಾವುದು
ಸಂಬಂಧ ಅಸಂಬಂಧ

ಎರಡೆಂಬ ಭಿನ್ನ ಅಳಿಯದೇ..

ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ

ನೀರಿರದ ದಾರಿ ನದಿ ಗುರುತು ಮೂಡಿಸಿದೆ
ನೀರಲಿ ನೀರಾಗಿಹ ನೀರು
ನೀರಾಗಿಸಿದೆ ಎನ್ನ

ಮರೆಯ ಆಚೆ ಮರೆಯಬಾರದ ಘನ

ಅರಿಯಲಿಲ್ಲ ಅರಿದಿಲ್ಲ
ಬಲ್ಲತನದ ಭಂಗ ಇನ್ನಿಲ್ಲ

ಅನನ್ಯ ಎಂಬುದೇನು…?
ಭ್ರಮೆ; ಹೇಳಬಾರದ ಶಬ್ದ ಸಂಭ್ರಮ

ಆಹಾ ಕಣ್ಣ ಸುಖವ ನೆಚ್ಚಿ
ಮಣ್ಣು ಮೆಟ್ಟಿದ ಪಾದ ಆಹಾ
ನೆಲ ಮುಟ್ಟದು ಕಣ್ಣು

ಊರು ಹಾಳಾಯಿತು;ಮದ ತಣ್ಣಗಾಯಿತು
ಹೊಗೆ ಇಲ್ಲದ ಬೆಂಕಿ ಸುಟ್ಟ ಊರು
ಕಣ್ಣಿಲ್ಲದವರ ಕಾಡಿತ್ತು

ಹರಿಯುವ ನದಿ ನೀರು
ನಾದವ ಏನೆಂದು ಬರೆಯಲಿ.

Previous post ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
Next post ಕಲಿಸು ಗುರುವೆ…
ಕಲಿಸು ಗುರುವೆ…

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...

Comments 3

  1. ಷಡಕ್ಷರಿ ಎಸ್
    Jul 22, 2025 Reply

    ದಡ ಮುಟ್ಟದ ಅಲೆಗಳ ಗುರಿ ಯಾವುದು? ಗಮ್ಯವಿಲ್ಲದ ಜೀವನವನ್ನು ಒಗಟಾಗಿ ಬೆಡಗಿನ ನುಡಿಯಲ್ಲಿ ಕಟ್ಟಿದ ಕವನ ಚೆನ್ನಾಗಿದೆ👌👌👌

  2. ಶಿವಪುತ್ರ ಕಲ್ಲಹಳ್ಳಿ
    Jul 31, 2025 Reply

    ದಾರಿ ತೋರುವ ಕೈಗೆ ಕುರುಡಾದರೆ ಏನು ಗತಿ?

  3. ಬಸವಪ್ರಭು ಹತ್ತಿಕಟ್ಟಿ
    Aug 2, 2025 Reply

    ದಾರಿ ತೋರುವ ಕೈಯ ಹಿಡಿದಿರುವೆ
    ಕೈಯ ಕುರುಡು ತೋರದು ದಾರಿ- ದಿಕ್ಕು ತಪ್ಪಿದ ನಮ್ಮ ಬದುಕಿನ ಕಾರಣ 😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
WHO AM I?
WHO AM I?
June 17, 2020
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
Copyright © 2026 Bayalu