Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಡ ಸೋಂಕದ ಅಲೆಗಳು
Share:
Poems July 10, 2025 ಜ್ಯೋತಿಲಿಂಗಪ್ಪ

ದಡ ಸೋಂಕದ ಅಲೆಗಳು

ನದಿ ಕೂಡುವ ಕಡಲ ಅಂಚು
ನಿಂತು ಸಂಬಂಧ ಹುಡುಕುತಿರುವೆ

ಕಡಲ ಸೇರುವ ನೀರು
ನದಿ ಯಾವುದು ಕಡಲು ಯಾವುದು
ಸಂಬಂಧ ಅಸಂಬಂಧ

ಎರಡೆಂಬ ಭಿನ್ನ ಅಳಿಯದೇ..

ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ

ನೀರಿರದ ದಾರಿ ನದಿ ಗುರುತು ಮೂಡಿಸಿದೆ
ನೀರಲಿ ನೀರಾಗಿಹ ನೀರು
ನೀರಾಗಿಸಿದೆ ಎನ್ನ

ಮರೆಯ ಆಚೆ ಮರೆಯಬಾರದ ಘನ

ಅರಿಯಲಿಲ್ಲ ಅರಿದಿಲ್ಲ
ಬಲ್ಲತನದ ಭಂಗ ಇನ್ನಿಲ್ಲ

ಅನನ್ಯ ಎಂಬುದೇನು…?
ಭ್ರಮೆ; ಹೇಳಬಾರದ ಶಬ್ದ ಸಂಭ್ರಮ

ಆಹಾ ಕಣ್ಣ ಸುಖವ ನೆಚ್ಚಿ
ಮಣ್ಣು ಮೆಟ್ಟಿದ ಪಾದ ಆಹಾ
ನೆಲ ಮುಟ್ಟದು ಕಣ್ಣು

ಊರು ಹಾಳಾಯಿತು;ಮದ ತಣ್ಣಗಾಯಿತು
ಹೊಗೆ ಇಲ್ಲದ ಬೆಂಕಿ ಸುಟ್ಟ ಊರು
ಕಣ್ಣಿಲ್ಲದವರ ಕಾಡಿತ್ತು

ಹರಿಯುವ ನದಿ ನೀರು
ನಾದವ ಏನೆಂದು ಬರೆಯಲಿ.

Previous post ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
Next post ಕಲಿಸು ಗುರುವೆ…
ಕಲಿಸು ಗುರುವೆ…

Related Posts

ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...
ಬೆಳಕು ಸಿಕ್ಕೀತೆ?
Share:
Poems

ಬೆಳಕು ಸಿಕ್ಕೀತೆ?

March 9, 2023 ಜ್ಯೋತಿಲಿಂಗಪ್ಪ
ಈಗ ನೀನು ಮರೆವು ನಾನು ಇರುವೆ ನಾ.. ಹೇಳ ಬಾರದು ಕೇಳ ಬಾರದು ಬಾಳೆ ಹಣ್ಣಾಗಿ ಈಗಷ್ಟೇ ಬಾಗಿದೆ ಏನೇ ಹೇಳಿ ಕಾಣುವುದೆಲ್ಲಾ ಸತ್ಯವೇ ಅಲ್ಲಾ ಏನೂ ಆಗಬಹುದು ಆಕಾಶ ಮೈದೆರೆದರೆ ಬಯಲು...

Comments 3

  1. ಷಡಕ್ಷರಿ ಎಸ್
    Jul 22, 2025 Reply

    ದಡ ಮುಟ್ಟದ ಅಲೆಗಳ ಗುರಿ ಯಾವುದು? ಗಮ್ಯವಿಲ್ಲದ ಜೀವನವನ್ನು ಒಗಟಾಗಿ ಬೆಡಗಿನ ನುಡಿಯಲ್ಲಿ ಕಟ್ಟಿದ ಕವನ ಚೆನ್ನಾಗಿದೆ👌👌👌

  2. ಶಿವಪುತ್ರ ಕಲ್ಲಹಳ್ಳಿ
    Jul 31, 2025 Reply

    ದಾರಿ ತೋರುವ ಕೈಗೆ ಕುರುಡಾದರೆ ಏನು ಗತಿ?

  3. ಬಸವಪ್ರಭು ಹತ್ತಿಕಟ್ಟಿ
    Aug 2, 2025 Reply

    ದಾರಿ ತೋರುವ ಕೈಯ ಹಿಡಿದಿರುವೆ
    ಕೈಯ ಕುರುಡು ತೋರದು ದಾರಿ- ದಿಕ್ಕು ತಪ್ಪಿದ ನಮ್ಮ ಬದುಕಿನ ಕಾರಣ 😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಕಣ್ಣ ದೀಪ
ಕಣ್ಣ ದೀಪ
September 7, 2021
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
ಶಿವಯೋಗ
ಶಿವಯೋಗ
July 4, 2021
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಭಾರ
ಭಾರ
October 6, 2020
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
Copyright © 2025 Bayalu