Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ  ದಾರಿ…
Share:
Poems May 10, 2023 ಜ್ಯೋತಿಲಿಂಗಪ್ಪ

ಈ ದಾರಿ…

ಈ
ದಾರಿ
ಹೋಗುವುದು
ಎಲ್ಲಿಗೆ ನಾನೂ ಅರಿಯೆ
ನೀವೂ ಅರಿಯೆರಿ

ಅರಿದವನಂತೆ ನಾನು ಹೋಗುತಿರಲು
ಅರಿಯದವರಂತೆ ನೀವು ಸುಮ್ಮನೇ ಇರುವಿರಿ
ಏನು ಚೆಂದ
ಅಲ್ಲಲ್ಲಿಗೆ ಅಲ್ಲಲ್ಲಿಗೆ
ದಾರಿ ಸವೆಯದು ಸರಿಯದು
ಕಣ್ಣು ಸವೆದು ಸರಿದುದು

ಈಗಷ್ಟೇ
ಕೇಳಿಸಿಕೊಂಡ ಕಿವಿ
ನೋಡಲರಿಯದು ಕಂಡ ಕಣ್ಣು
ಹೇಳಲರಿಯದು

ಕಣ್ಣು ತಪ್ಪಿ ಕಂಡುದು
ಕಿವಿ ತಪ್ಪಿ ಕೇಳಿದು

ಎರಡೂ ನಿಜ
ಎರಡೂ ಸುಳ್ಳು

ಸುಮ್ಮನೆ ಬಂದ ದಾರಿ.,

ನನ್ನ
ನಿಮ್ಮ ನಡುವೆ
ಕಂಡೂ ಕಾಣದೆ
ಕಾಣದೆ ಕಂಡ ದಾರಿ
ಸುಮ್ಮನೆ ಇದೆ
ಹೋದವರು ಬರುವ ದಾರಿ
ಕಾಯುತಿರುವೆ

ಕಾಯುವುದೇನು ಸುಮ್ಮನೆಯೇ…

Previous post ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
Next post ನೋಟದ ಕೂಟ…
ನೋಟದ ಕೂಟ…

Related Posts

ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Comments 2

  1. ಪೆರೂರು ಜಾರು, ಉಡುಪಿ
    May 13, 2023 Reply

    ಅರಿತ ದಾರಿ ಎಂದರೆ ಅಸಡ್ಡೆ ಉಪೇಕ್ಷೆ
    ಅರಿಯದ ದಾರಿ ಎನಲು ಕುತೂಹಲ ಅಪೇಕ್ಷೆ
    ಸರಿಯುವ ನೆಲಕುಸಿತಗಳ
    ಮನಸ್ಸು ಅರಿತವರಿಲ್ಲ

  2. Kumara Basappa
    May 29, 2023 Reply

    ಸುಳ್ಳು ನಿಜಗಳ ಬೇಲಿ ದಾಟದೆ ದಾರಿ ಕಾಣದು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
December 9, 2025
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
Copyright © 2026 Bayalu