Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ  ದಾರಿ…
Share:
Poems May 10, 2023 ಜ್ಯೋತಿಲಿಂಗಪ್ಪ

ಈ ದಾರಿ…

ಈ
ದಾರಿ
ಹೋಗುವುದು
ಎಲ್ಲಿಗೆ ನಾನೂ ಅರಿಯೆ
ನೀವೂ ಅರಿಯೆರಿ

ಅರಿದವನಂತೆ ನಾನು ಹೋಗುತಿರಲು
ಅರಿಯದವರಂತೆ ನೀವು ಸುಮ್ಮನೇ ಇರುವಿರಿ
ಏನು ಚೆಂದ
ಅಲ್ಲಲ್ಲಿಗೆ ಅಲ್ಲಲ್ಲಿಗೆ
ದಾರಿ ಸವೆಯದು ಸರಿಯದು
ಕಣ್ಣು ಸವೆದು ಸರಿದುದು

ಈಗಷ್ಟೇ
ಕೇಳಿಸಿಕೊಂಡ ಕಿವಿ
ನೋಡಲರಿಯದು ಕಂಡ ಕಣ್ಣು
ಹೇಳಲರಿಯದು

ಕಣ್ಣು ತಪ್ಪಿ ಕಂಡುದು
ಕಿವಿ ತಪ್ಪಿ ಕೇಳಿದು

ಎರಡೂ ನಿಜ
ಎರಡೂ ಸುಳ್ಳು

ಸುಮ್ಮನೆ ಬಂದ ದಾರಿ.,

ನನ್ನ
ನಿಮ್ಮ ನಡುವೆ
ಕಂಡೂ ಕಾಣದೆ
ಕಾಣದೆ ಕಂಡ ದಾರಿ
ಸುಮ್ಮನೆ ಇದೆ
ಹೋದವರು ಬರುವ ದಾರಿ
ಕಾಯುತಿರುವೆ

ಕಾಯುವುದೇನು ಸುಮ್ಮನೆಯೇ…

Previous post ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
Next post ನೋಟದ ಕೂಟ…
ನೋಟದ ಕೂಟ…

Related Posts

ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...
ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...

Comments 2

  1. ಪೆರೂರು ಜಾರು, ಉಡುಪಿ
    May 13, 2023 Reply

    ಅರಿತ ದಾರಿ ಎಂದರೆ ಅಸಡ್ಡೆ ಉಪೇಕ್ಷೆ
    ಅರಿಯದ ದಾರಿ ಎನಲು ಕುತೂಹಲ ಅಪೇಕ್ಷೆ
    ಸರಿಯುವ ನೆಲಕುಸಿತಗಳ
    ಮನಸ್ಸು ಅರಿತವರಿಲ್ಲ

  2. Kumara Basappa
    May 29, 2023 Reply

    ಸುಳ್ಳು ನಿಜಗಳ ಬೇಲಿ ದಾಟದೆ ದಾರಿ ಕಾಣದು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ನೆಮ್ಮದಿ
ನೆಮ್ಮದಿ
April 6, 2020
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಗಂಟಿನ ನಂಟು
ಗಂಟಿನ ನಂಟು
November 7, 2020
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
Copyright © 2025 Bayalu