Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ  ದಾರಿ…
Share:
Poems May 10, 2023 ಜ್ಯೋತಿಲಿಂಗಪ್ಪ

ಈ ದಾರಿ…

ಈ
ದಾರಿ
ಹೋಗುವುದು
ಎಲ್ಲಿಗೆ ನಾನೂ ಅರಿಯೆ
ನೀವೂ ಅರಿಯೆರಿ

ಅರಿದವನಂತೆ ನಾನು ಹೋಗುತಿರಲು
ಅರಿಯದವರಂತೆ ನೀವು ಸುಮ್ಮನೇ ಇರುವಿರಿ
ಏನು ಚೆಂದ
ಅಲ್ಲಲ್ಲಿಗೆ ಅಲ್ಲಲ್ಲಿಗೆ
ದಾರಿ ಸವೆಯದು ಸರಿಯದು
ಕಣ್ಣು ಸವೆದು ಸರಿದುದು

ಈಗಷ್ಟೇ
ಕೇಳಿಸಿಕೊಂಡ ಕಿವಿ
ನೋಡಲರಿಯದು ಕಂಡ ಕಣ್ಣು
ಹೇಳಲರಿಯದು

ಕಣ್ಣು ತಪ್ಪಿ ಕಂಡುದು
ಕಿವಿ ತಪ್ಪಿ ಕೇಳಿದು

ಎರಡೂ ನಿಜ
ಎರಡೂ ಸುಳ್ಳು

ಸುಮ್ಮನೆ ಬಂದ ದಾರಿ.,

ನನ್ನ
ನಿಮ್ಮ ನಡುವೆ
ಕಂಡೂ ಕಾಣದೆ
ಕಾಣದೆ ಕಂಡ ದಾರಿ
ಸುಮ್ಮನೆ ಇದೆ
ಹೋದವರು ಬರುವ ದಾರಿ
ಕಾಯುತಿರುವೆ

ಕಾಯುವುದೇನು ಸುಮ್ಮನೆಯೇ…

Previous post ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
Next post ನೋಟದ ಕೂಟ…
ನೋಟದ ಕೂಟ…

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...

Comments 2

  1. ಪೆರೂರು ಜಾರು, ಉಡುಪಿ
    May 13, 2023 Reply

    ಅರಿತ ದಾರಿ ಎಂದರೆ ಅಸಡ್ಡೆ ಉಪೇಕ್ಷೆ
    ಅರಿಯದ ದಾರಿ ಎನಲು ಕುತೂಹಲ ಅಪೇಕ್ಷೆ
    ಸರಿಯುವ ನೆಲಕುಸಿತಗಳ
    ಮನಸ್ಸು ಅರಿತವರಿಲ್ಲ

  2. Kumara Basappa
    May 29, 2023 Reply

    ಸುಳ್ಳು ನಿಜಗಳ ಬೇಲಿ ದಾಟದೆ ದಾರಿ ಕಾಣದು.

Leave a Reply to ಪೆರೂರು ಜಾರು, ಉಡುಪಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
Copyright © 2025 Bayalu