Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭವ ರಾಟಾಳ
Share:
Poems September 10, 2022 ಕೆ.ಆರ್ ಮಂಗಳಾ

ಭವ ರಾಟಾಳ

ಇಗೋ ಹರಾಜಾಗುತ್ತಿದೆ ಈ ದೇಹ
ಪ್ರತಿ ದಿನ, ಪ್ರತಿ ಗಳಿಗೆ
ಕಾಣದ ಖದೀಮನ ಕೈಗೆ ಸಿಕ್ಕು

ತನ್ನದಲ್ಲದ ಕಾಯವನು
ಹರಾಜು ಹಾಕುತ್ತಲೇ ಇರುತ್ತಾನೆ
ಕ್ಷಣಾರ್ಧದ ಬಿಡುವೂ ಕೊಡದೆ

ಕೊಳ್ಳುವವರಿಗಿಲ್ಲಿ ಬರವಿಲ್ಲ
ಬಿಡ್ ಮಾಡುತ್ತಲೇ ಇರುತ್ತವೆ
ಲಕ್ಷೋಪಲಕ್ಷ ಭಾವಗಳು
ಕೊನೆಯಿಲ್ಲದ ಬೇಡಿಕೆಗಳು
ತಬ್ಬಿಕೊಂಡು ಅಮರಿಕೊಳುವ
ನಂಬುಗೆಗಳು, ಚಿತ್ರವಿಚಿತ್ರ ಸೆಳೆತಗಳು
ಅನಂತ ಮುಖವಾಡಗಳ ಹೊತ್ತ
ಅಹಮಿನ ಅವತಾರಗಳು
ನಾ ಮುಂದು ತಾ ಮುಂದು ಎನ್ನುವ
ನಿರಂತರ ಪೈಪೋಟಿ…

ಒಡಲ ಸೇರುತ್ತಲೇ ಜೀವ ಪಡೆವ
ಈ ವಿದೇಹಗಳಿಗೆಲ್ಲಾ
ಯಾವ ಕರಾರುಗಳಿಲ್ಲದೆ
ಜೀತ ಮಾಡುತ್ತಿರುವ
ಕಾಯವು ಅಮಾಯಕವೋ?
ಮೋಸವನರಿಯದ ಮೊದ್ದೋ?
ತೀರದಾಸೆಯ ದಾಹಿಯೋ…

ವಿಷಯಂಗಳ ಕೈ ಬದಲಾದ
ಗಳಿಗೆ-ಗಳಿಗೆಗೂ ಇದಕೆ
ಹುಟ್ಟು-ಸಾವಿನ ಚಕ್ರ
ಮತ್ತದೇ ಭವದ ರಾಟಾಳ
ತಾನಾರೆನ್ನುವ ಪ್ರಜ್ಞೆ
ಮಾಸಿ ಈ ಅಂಗಕ್ಕೆ
ಯುಗಯುಗಗಳೇ ಕಳೆದಿವೆ…

ಗುರು ಅರಿವು ಸಿಕ್ಕಾಗಲೇ
ಹರಾಜಿನ ಸದ್ದು ಅಡಗೀತು
ಸುಖ-ದುಃಖಗಳ ಬವಣೆ ತಪ್ಪೀತು
ಜನನ-ಮರಣಗಳ ಆಟ ನಿಂದೀತು
ಕಾಯಕ್ಕೆ ಬಿಡುಗಡೆ ದಕ್ಕೀತು.

Previous post ಲಿಂಗದ ಹಂಗೇ…
ಲಿಂಗದ ಹಂಗೇ…
Next post ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

Related Posts

ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...
ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...

Comments 3

  1. Ramesh. M.Y
    Sep 18, 2022 Reply

    ರಾಟಾಳ ಎಂದರೆ ಚಕ್ರ ಅಥವಾ ಚರಕ ಎಂದು ಗೊತ್ತಾಯಿತು. ಕವನ ಚೆನ್ನಾಗಿದೆ.

  2. Gangadhar Mudaliar
    Sep 18, 2022 Reply

    ಭವದ ರಾಟಾಳ ಓದಿದೆ, ‘ಹರಾಜಿನ ಸದ್ದನ್ನು’ ನೀವೇ ಅಡಗಿಸಬೇಕು.

  3. ಪೆರೂರು ಜಾರು, ಉಡುಪಿ
    Sep 18, 2022 Reply

    ಹರಾಜಾದ ಗುರುಗಳು ಭವದ ರಾಟೆಯ ಭಾಗ
    ಹರಾಜು ತಡೆಯಲು ಇನ್ನೆಲ್ಲಿದೆ ಜಾಗ
    ತನ್ನರಿವು ತನ ತಲೆಗೆ ತನ್ನ ಕಯ್ಯೊಂದೆ ಈಗ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ವಚನ – ಚಿಂತನ
ವಚನ – ಚಿಂತನ
October 10, 2023
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
October 19, 2025
ಶರಣನಾಗುವುದು…
ಶರಣನಾಗುವುದು…
February 10, 2023
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
Copyright © 2025 Bayalu