Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯೋ ಗುರುವೇ…
Share:
Poems February 11, 2022 ಕೆ.ಆರ್ ಮಂಗಳಾ

ಕಾಯೋ ಗುರುವೇ…

ನಾನು:

ಗಾಳಿಯೇ ಆಡದ, ಕತ್ತಲ ಕೋಣ್ಯಾಗ
ಕಳೆದು ಹೋಗಿನಿ ನನ ಗುರುವೆ
ಚಿಲಕವ ಸರಿಸಿ, ಬಾಗಿಲು ತೆಗೆದು
ಬೆಳಕಾ ತೋರಿಸು ನನ ಗುರುವೆ

ತಡವುತ ಎಡವುತ, ಅಲ್ಲಲ್ಲೇ ಸುತ್ತುತ
ಹೈರಾಣಾಗಿಹೆ ನನ ಗುರುವೆ
ರಾಗವೂ ಬೇಡ, ಮೋಹವೂ ಬೇಡ
ಆಗಸ ತೋರಿಸು ನನ ಗುರುವೆ

ಕನಸಲಿ ಕರಗುತ, ಭವದಲಿ ಬೇಯುತ
ಬಸವಳಿದಿರುವೆ ನನ ಗುರುವೆ
ಅಂಟನು ಬಿಡಿಸಿ, ವಿಷಯವ ಹರಿಸಿ
ಮುಕ್ತಿಯ ತೋರೊ ನನ ಗುರುವೆ

ಗುರು:

ಕೋಣೆಯೂ ಇಲ್ಲ, ಕತ್ತಲೂ ಇಲ್ಲ
ಬಾಗಿಲು ಎಲ್ಲಿದೆ ಹೇಳಮ್ಮಾ
ಇಲ್ಲದ ಕೋಣೆಗೆ ಚಿಲಕವ ಜಡಿದು
ಒಳಗೆ ಅಡಗಿದೆ ಯಾಕಮ್ಮಾ?

ಕಣ್ಣನು ತೆರೆದು ಕಸವನು ತೆಗೆದು
ನಿಜವನು ತಿಳಿದು ನೋಡಮ್ಮ
ಭ್ರಮೆಯನು ಜಾಡಿಸಿ, ಮನಸನು ಕೊಡವಲು
ಅಲ್ಲೇ ಬಯಲಿದೆ ಕಾಣಮ್ಮ

ನೀನೇ ಬೆಳಗು, ನೀನೇ ಆಗಸ
ನೀನೇ ಲಿಂಗವು ಅರಿಯಮ್ಮಾ.

Previous post ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
Next post ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ

Related Posts

ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...
ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...

Comments 5

  1. nynitha
    Feb 12, 2022 Reply

    ಕಾಯೋ ಗುರುವೆ ಕವನ ಬಹಳ ಸೊಗಸಾಗಿದೆ!

  2. Manohara acharya
    Feb 12, 2022 Reply

    Very nice

  3. Padmalaya
    Feb 17, 2022 Reply

    ವಾವ್…ಸೂಪರ್

  4. Perooru Jaru
    Feb 17, 2022 Reply

    ಬಾಗಿಲು ನೀವು ಹಾಕಿಕೊಂಡಿಲ್ಲ, ಈ ಸಮಾಜ ಹಾಕಿದೆ. ಯಾವ ಗುರುವೂ ಈ ಸಮಾಜದ ಸೆರೆಮನೆಯಿಂದ ನಿಮ್ಮನ್ನು ಸಾವಿನ ತನಕ ಬಿಡಿಸಲಾರ.

  5. Suma
    Feb 17, 2022 Reply

    Amazing ..eloquently written

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
Copyright © 2025 Bayalu