Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಕಾರ-ನಿರಾಕಾರ
Share:
Poems January 7, 2022 ಜ್ಯೋತಿಲಿಂಗಪ್ಪ

ಆಕಾರ-ನಿರಾಕಾರ

ಇರಯ್ಯಾ
ಕಾಯುವವನೇ ಇರದಿರುವಾಗ
ನಿನಗೇತರ ಅವಸರ
ಕಾಯುತ್ತಾನೆಂದು ಕಾಯುವೆಯಲ್ಲಾ
ಸಾವ ಕಾಯುವ ನ್ಯಾಯ
ಅದಾವುದಯ್ಯಾ ಕೇಡಿಲ್ಲ
ಅಳಿಯೆನೆಂದು ಹಲ್ಲ ಮಸೆಯದಿರು
ಕಾಯ ಕಾಯದು

ಆಕಾರಕೆ ಒಲಿದ ಕಣ್ಣು
ನಿರಾಕಾರಕೆ ಮಣಿಯದೇ

ಬೆಳಕಿಗೆ ಬಾಗದು ನೆರಳು.

* * *
ಈ
ಕಾಣದ ಆದಿ
ಕಂಡರಿಯದ ಅಂತ್ಯ
ಎರಡರ ಮೋಹ ಈ ನಾನು

ಎರಡೂ ತುಂಬಲಾಗದ ಬರಿದು

ಜೇಡ ಜಾಲಕೆ ಅಂಟಿದ ಇಬ್ಬನಿ
ಜೇಡನ ಕೊರಳಿಗೆ ಸುತ್ತಿದ ನೀರ ಮಾಲೆ

ಈ ಕಣ್ಣಾಚೆ ಏನೋ ಇದೆ
ಬೇರಿಲ್ಲದ ಬಯಕೆ ಚಿಗುರು

ಮಗುವೇ ಇಲ್ಲಾ
ಸಿಕ್ಕಾಳೆಯೇ ತಾಯಿ

ನೀರಿನಂತೆ ಹರಿದೂ ಕೂಡುವುದು

ಒಬ್ಬನೇ ಹೋಗುವಾಗ ಮತ್ತೊಬ್ಬ
ಬರುವುದು ಗೊತ್ತಾಗದೇ…

ಎಷ್ಟೊಂದು ಶಬ್ದಗಳು
ಕಿವಿ ಕಿವುಡಾಗಿದೆ

ಈ ಆಕಾರ ಮನೆಗೊಂದುರೂಪು
ನಿಜ ಬಳಸುವುದೆಲ್ಲಾ ನಿರಾಕಾರ

Previous post ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
Next post ಕಾಲ ಎಲ್ಲಿದೆ?
ಕಾಲ ಎಲ್ಲಿದೆ?

Related Posts

ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 1

  1. Jayakumar Vijaypur
    Jan 13, 2022 Reply

    ಕಾಣದ ಆದಿ, ಕಂಡರಿಯದ ಅಂತ್ಯದ ನಡುವೆ ಆಕಾರ-ನಿರಾಕಾರಗಳ ಜಟಾಪಟಿ!! ಅನುಭಾವಿಕ ನುಡಿಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ವೀರ
ವೀರ
April 29, 2018
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ನೆಮ್ಮದಿ
ನೆಮ್ಮದಿ
April 6, 2020
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ನನ್ನ ಶರಣರು…
ನನ್ನ ಶರಣರು…
April 9, 2021
ತುತ್ತೂರಿ…
ತುತ್ತೂರಿ…
June 10, 2023
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
Copyright © 2026 Bayalu