Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಕಾರ-ನಿರಾಕಾರ
Share:
Poems January 7, 2022 ಜ್ಯೋತಿಲಿಂಗಪ್ಪ

ಆಕಾರ-ನಿರಾಕಾರ

ಇರಯ್ಯಾ
ಕಾಯುವವನೇ ಇರದಿರುವಾಗ
ನಿನಗೇತರ ಅವಸರ
ಕಾಯುತ್ತಾನೆಂದು ಕಾಯುವೆಯಲ್ಲಾ
ಸಾವ ಕಾಯುವ ನ್ಯಾಯ
ಅದಾವುದಯ್ಯಾ ಕೇಡಿಲ್ಲ
ಅಳಿಯೆನೆಂದು ಹಲ್ಲ ಮಸೆಯದಿರು
ಕಾಯ ಕಾಯದು

ಆಕಾರಕೆ ಒಲಿದ ಕಣ್ಣು
ನಿರಾಕಾರಕೆ ಮಣಿಯದೇ

ಬೆಳಕಿಗೆ ಬಾಗದು ನೆರಳು.

* * *
ಈ
ಕಾಣದ ಆದಿ
ಕಂಡರಿಯದ ಅಂತ್ಯ
ಎರಡರ ಮೋಹ ಈ ನಾನು

ಎರಡೂ ತುಂಬಲಾಗದ ಬರಿದು

ಜೇಡ ಜಾಲಕೆ ಅಂಟಿದ ಇಬ್ಬನಿ
ಜೇಡನ ಕೊರಳಿಗೆ ಸುತ್ತಿದ ನೀರ ಮಾಲೆ

ಈ ಕಣ್ಣಾಚೆ ಏನೋ ಇದೆ
ಬೇರಿಲ್ಲದ ಬಯಕೆ ಚಿಗುರು

ಮಗುವೇ ಇಲ್ಲಾ
ಸಿಕ್ಕಾಳೆಯೇ ತಾಯಿ

ನೀರಿನಂತೆ ಹರಿದೂ ಕೂಡುವುದು

ಒಬ್ಬನೇ ಹೋಗುವಾಗ ಮತ್ತೊಬ್ಬ
ಬರುವುದು ಗೊತ್ತಾಗದೇ…

ಎಷ್ಟೊಂದು ಶಬ್ದಗಳು
ಕಿವಿ ಕಿವುಡಾಗಿದೆ

ಈ ಆಕಾರ ಮನೆಗೊಂದುರೂಪು
ನಿಜ ಬಳಸುವುದೆಲ್ಲಾ ನಿರಾಕಾರ

Previous post ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
Next post ಕಾಲ ಎಲ್ಲಿದೆ?
ಕಾಲ ಎಲ್ಲಿದೆ?

Related Posts

ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...
ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...

Comments 1

  1. Jayakumar Vijaypur
    Jan 13, 2022 Reply

    ಕಾಣದ ಆದಿ, ಕಂಡರಿಯದ ಅಂತ್ಯದ ನಡುವೆ ಆಕಾರ-ನಿರಾಕಾರಗಳ ಜಟಾಪಟಿ!! ಅನುಭಾವಿಕ ನುಡಿಗಳು.

Leave a Reply to Jayakumar Vijaypur Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಮರೆತೆ…
ಮರೆತೆ…
July 4, 2022
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
Copyright © 2025 Bayalu