Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರಡು ಎಲ್ಲಿ?
Share:
Poems October 5, 2021 ಕೆ.ಆರ್ ಮಂಗಳಾ

ಎರಡು ಎಲ್ಲಿ?

ನಾನು ದ್ವೈತವೋ ಅದ್ವೈತವೋ
ಹೀಗೊಂದು ಪ್ರಶ್ನೆ ಎದ್ದದ್ದೇ ತಡ
ನಡೆದಿತ್ತು ಒಳಗೊಂದು ತಾಕಲಾಟ-

ಒಂದೆಡೆ-
ನೆನಪುಗಳಿಗೆ, ಕನಸುಗಳಿಗೆ
ಪ್ರೀತಿಯ ಕನವರಿಕೆಗಳಿಗೆ
ಎದೆಯ ಹಂಬಲಗಳಿಗೆಲ್ಲ
ನಾನೇ ಕರುಳಿನ ಸೆಲೆ
ಪೋಣಿಸುತಾ ಮಾತುಗಳ
ನಾನಿಲ್ಲದೆ ನೀನಿಲ್ಲ ಎಂದಿತು ಮನ.

ಇನ್ನೊಂದೆಡೆ-
ಪರವಸ್ತುವಿನ ಪ್ರತಿನಿಧಿ ನಾ
ಜಗತ್ಕರ್ತನ ಪ್ರತಿಬಿಂಬ
ಎಲ್ಲದರ ಸೂತ್ರಧಾರಿ
ನಾನೇ ಅಂತಿಮಸತ್ಯ
ಆತ್ಮದ ಪರ ನಡೆದಿತ್ತು
ಚಿತ್ತದ ವಕಾಲತ್ತು.

ಮನವು ಕಲ್ಪನೆಯಾಟ
ಆತ್ಮ ಜ್ಞಾನದ ನೋಟ
ಮನವು- ಆತ್ಮಗಳೆರಡೂ
ನಾನಲ್ಲ ಗುರುವೇ.
ಇಲ್ಲದ ಮನವೂ ಅಲ್ಲ
ಕಲ್ಪಿತ ಆತ್ಮನೂ ಅಲ್ಲ
ಎರಡರ ಹಂಗಳಿದಲ್ಲದೆ
ಆಳ-ನಿರಾಳವಿಲ್ಲ.

Previous post ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
Next post ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…

Related Posts

ಪ್ರೇಮ ಮತ್ತು ದ್ವೇಷ
Share:
Poems

ಪ್ರೇಮ ಮತ್ತು ದ್ವೇಷ

July 10, 2025 ಜಬೀವುಲ್ಲಾ ಎಂ.ಅಸದ್
ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...
ಬೆಳಕು ಸಿಕ್ಕೀತೆ?
Share:
Poems

ಬೆಳಕು ಸಿಕ್ಕೀತೆ?

March 9, 2023 ಜ್ಯೋತಿಲಿಂಗಪ್ಪ
ಈಗ ನೀನು ಮರೆವು ನಾನು ಇರುವೆ ನಾ.. ಹೇಳ ಬಾರದು ಕೇಳ ಬಾರದು ಬಾಳೆ ಹಣ್ಣಾಗಿ ಈಗಷ್ಟೇ ಬಾಗಿದೆ ಏನೇ ಹೇಳಿ ಕಾಣುವುದೆಲ್ಲಾ ಸತ್ಯವೇ ಅಲ್ಲಾ ಏನೂ ಆಗಬಹುದು ಆಕಾಶ ಮೈದೆರೆದರೆ ಬಯಲು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಈ  ದಾರಿ…
ಈ ದಾರಿ…
May 10, 2023
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
Copyright © 2025 Bayalu