Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣು ಮೆಟ್ಟಿದ ದಾರಿ
Share:
Poems October 5, 2021 ಜ್ಯೋತಿಲಿಂಗಪ್ಪ

ಮಣ್ಣು ಮೆಟ್ಟಿದ ದಾರಿ

ಈ
ಸಿಟ್ಟು ದ್ವೇಷ
ಪ್ರೇಮ ಕಾಮ ಮದ…
ಎಲ್ಲಾ ನಾನು ಹೊತ್ತು
ಹೋಗುವನೇ…

ಈ
ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ

ಇದೆಲ್ಲಾ ಮಣ್ಣಾಗುವುದು
ಇದ್ದೇ ಇದೆ
ನಾನು ಮಣ್ಣಾಗುವ ಮೊದಲು
ಮಣ್ಣಾಗವು

ಬಿಡಪ್ಪಾ
ನನ್ನ ಹೆಜ್ಜೆಯ ದಾರಿ
ನಿನ್ನ ಹೆಜ್ಜೆಯ ದಾರಿ
ಬೇರೇನೂ…

ಮಣ್ಣು ಮೆತ್ತಿದ ದಾರಿ ನನ್ನದು
ಮಣ್ಣು ಮೆಟ್ಟಿದ ದಾರಿ ನಿನ್ನದು

ನಾನು
ಯೋಚಿಸುದುದೇ ನನ್ನ
ಪ್ರಜ್ಞೆಯೇ
ಅಲ್ಲಾ
ನನ್ನ ಪ್ರಜ್ಞೆ ನನ್ನ ಯೋಚನೆಯ
ಎಚ್ಚರದಲಿರಿಸಿದೆ

ಕಣ್ಣಿನ ತಂಪು
ಕಿವಿಯ ಇಂಪು
ಎಲ್ಲಾ ಸುಕ್ಕು

ಮಾಗಿದೆ ಕಾಯ
ಇಲ್ಲೇ ಎಲ್ಲೋ ಇದೆ
ಮರೆವು

ಅರಳಿದ ಹೂವೇ
ನೀನಿರು ನಾನೋಗುವೆ.

Previous post ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
Next post ಎರಡು ಎಲ್ಲಿ?
ಎರಡು ಎಲ್ಲಿ?

Related Posts

ಕಲಿಸು ಗುರುವೆ…
Share:
Poems

ಕಲಿಸು ಗುರುವೆ…

July 10, 2025 ಕೆ.ಆರ್ ಮಂಗಳಾ
ಬಳಲಿ ಬಂದೆನು ಗುರುವೆ ನಿನ್ನ ಬಳಿಗೆ ಬಳಲಿಕೆಯ ಪರಿಹರಿಸು ಎದೆಯ ದನಿಯೆ ಇಲ್ಲಸಲ್ಲದ ಹೊರೆಯ ಹೊತ್ತು ಏಗಿದೆ ಹೆಗಲು ಜೀತದಲೆ ಜೀಕುತ್ತಾ ದಿನವ ದೂಡಿರುವೆ ನಾನು ನನ್ನದು ಎಂಬ...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 1

  1. Padmalaya
    Oct 6, 2021 Reply

    ಬಹಳ ಚೆನ್ನಾಗಿ ಹೃದಯ ಹದವಾಗುಯತ್ತಿರುವ ಪರಿಯೊಂದನ್ನ ಈ ಕವನ ನನಗೆ ಸೂಚಿಸುತ್ತಿದೆ. ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ನ್ಯಾಯೋಚಿತವಾಗಿದೆ….

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಗಣಾಚಾರ
ಗಣಾಚಾರ
August 8, 2021
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಸುಮ್ಮನೆ ಇರು
ಸುಮ್ಮನೆ ಇರು
December 6, 2020
Copyright © 2026 Bayalu