Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನವೇ ಮನವೇ…
Share:
Poems May 6, 2020 Bayalu

ಮನವೇ ಮನವೇ…

ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ
ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ//

ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ
ವಿಲವಿಲ ಎನ್ನುತ ನಲುಗಿದೆ ನೀನು ನಲಿವಿಲ್ಲ ಮನವೇ
ಒಲವಿಂದಲೆ ನೀ ಬಲೆ ಮೂರಕ್ಕೆ ಬಲಿಯಾದೆ ಮನವೇ
ನೆಲೆ ತಾನರಿಯದೆ ಅಲೆಯುವ ಸೊಣಗ ಅಲೆದಂತೆ ಮನವೇ //1//

ಹರಿಯುವ ನೀರಿಗೆ ಬೆರಳಿಟ್ಟುಂಡರೆ ಹಿರಿದುಂಟೇ ಮನವೇ
ಕರಿ ಕುನ್ನಿಯು ತಾ ಕೆರ ಕಚ್ಚಾಡಲು ಸಿರಿಯುಂಟೇ ಮನವೇ
ಉರಗನ ಬಾಯಲಿ ಇರುತಿಹ ಕಪ್ಪೆಯ ಪರಿನೀನೆಲೆ ಮನವೇ
ಮರಣದ ಬಾಧೆ ಬರುತಿದೆ ಮುಂದೆ ಮೆರೆಯದಿರು ಮನವೇ //2//

ಸಿರಿ ಸುಖವೆಲ್ಲ ಹಿರಿ ಸಂತೆಯು ತಾ ಕರಗುವ ಪರಿಮನವೇ
ಮರುತಗೆ ಇದಿರು ಉರಿಯುವ ಜ್ಯೋತಿ ಇರಲುಂಟೇ ಮನವೇ
ಹಿರಿಹಿರಿ ನಂಬಿದೆ ಕರಗುವ ಸಿರಿಯನೆ ಮರುಳಾದೆಲೆ ಮನವೇ
ಗುರಿಯನು ಕಾಣದೆ ಧರೆ ಸಿರಿಯೊಳಗೆ ಚರಿಸದಿರು ಮನವೇ //3//

ಇಳೆಯಲ್ಲಾಡುತ ಒಳಬೆಳಗನ್ನು ಕಳೆದೆ ಎಲೆ ಮನವೇ
ಒಳ ಸೇರುತ ನೀ ಕಳೆಬೆಳಗಿನೊಳು ಮುಳುಗುತಲಿರು ಮನವೇ
ಇಳೆಯನು ಬೆಳಗುವ ಇನಶಶಿ ಎಲ್ಲ ಒಳಗಿವೆ ತಿಳಿ ಮನವೇ
ಅಳಿಯದ ಬೆಳಗು ಒಳಗಿದೆ ತಿಳಿದು ತಿಳಿಯಾಗಲೆ ಮನವೇ //4//

ಸನ್ನುತ ಶರಣರ ಬೆನ್ನಿಗೆ ಬೀಳು ಉನ್ನತಿ ಎಲೆ ಮನವೇ
ಬನ್ನವ ಅಳಿಸಿ ರನ್ನವ ತಿಳಿಸುವರಿನ್ನಾರೆಲೆ ಮನವೇ
ಅನ್ಯವ ತೊರೆಸಿ ಭಿನ್ನವ ಕಳೆಯುವರಿನ್ನಾರೆಲೆ ಮನವೇ
ಮುನ್ನಿನ ನಿರವಯಲುನ್ನತ ನಿನ್ನೊಳು ತೋರುವರೆಲೆ ಮನವೇ //5//

-ಮಹಾಲಿಂಗ ಶಿವಯೋಗಿಗಳು

Previous post ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
Next post ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ನಿನ್ನದೊಂದು ಸ್ಪರ್ಶ
Share:
Poems

ನಿನ್ನದೊಂದು ಸ್ಪರ್ಶ

February 16, 2026 ಕೆ.ಆರ್ ಮಂಗಳಾ
ಅಷ್ಟು ಸಲೀಸಲ್ಲಾ ಬಿಡು ನಿನ್ನ ಕೈ ಹಿಡಿಯುವುದು ಎದುರಿದ್ದೂ ಅವಿತಿರುವ ನಿನ್ನಿರುವಿಗೆ ಅಡಿಯಿಡುವುದು… ಇಲ್ಲೇ, ಇದೇ ಗಳಿಗೆಯಲ್ಲೇ… ಈ ಕ್ಷಣವೇ… ನೀನು ಪ್ರತ್ಯಕ್ಷವಂತೆ! ಯಾರಾದರೂ...

Comments 2

  1. B.S.Patil
    May 14, 2020 Reply

    ಮನವೇ ತತ್ವಪದ ಓದುತ್ತಾ ಹೋದಂತಡ ಹಾಡಿಸಿಕೊಳ್ಳತೊಡಗಿತು. ಒಂದೊಂದು ಸಾಲೂ ಬಹಳ ಹಿಡಿಸಿದವು. ಶ್ರೀಗಳಿಗೆ ಶರಣು.

  2. Channappa Vali
    May 14, 2020 Reply

    ಮನವೇ ಮನವೇ… ಮತ್ತು ಹೆಸರಿಲ್ಲದಾ ಊರಿನ ಹಾಡು ಎರಡೂ ಬಹಳ ಚನ್ನಾಗಿವೆ. ಸ್ವರ ವಚನಗಳನ್ನು ಓದಿದಂತೆ ಭಾಸವಾಯಿತು. ಎರಡಕ್ಕೂ ರಾಗ ಹಾಕಿ ಹಾಡುವಂತಿವೆ. ಪ್ರತಿ ಸಾಲುಗಳೂ ಮನನಯೋಗ್ಯವಾಗಿವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಬಯಲಾಟ
ಬಯಲಾಟ
March 17, 2021
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
Copyright © 2026 Bayalu