Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸೋತ ಅಂಗೈಗಳಿಗಂಟಿ…
Share:
Poems October 19, 2025 ಜಬೀವುಲ್ಲಾ ಎಂ.ಅಸದ್

ಸೋತ ಅಂಗೈಗಳಿಗಂಟಿ…

ನನ್ನಲ್ಲಿ ನೀನು ತುಂಬಿರಲು
ನಿನ್ನಲ್ಲಿಲ್ಲ ನಾನು
ಇಲ್ಲವೆಂಬ ಅರಿವು ನನ್ನಲ್ಲಿರಲು
ಇನ್ನೂ ಹೇಳಲಿ ಏನು?

ಒಡೆದ ಗಾಜಿನ ಲೋಟ
ಚೂರಾದ ಹೃದಯದ ನೋಟ
ಎರಡೂ ಒಂದೇ ಆಗಿರುವಾಗ ಈಗ

ಮುರಿದ ರೆಕ್ಕೆಯ ಹಕ್ಕಿಯ ಶೋಕ
ಮನ ಅನುಭವಿಸುತ್ತಿರುವಾಗ
ಮಾತು ಹುಟ್ಟಿತು ಹೇಗೆ ಈ ಸಮಯ
ಮೌನವೇ ಎಲ್ಲವನ್ನು ಸಂಹರಿಸುವಾಗ

ದಿಕ್ಕಿಲ್ಲದ ದಾರಿಯ ಒಂಟಿ ಪಯಣಿಗ
ನಡೆದಷ್ಟು ದೂರ
ತಲುಪುವುದಾದರೂ ಎಲ್ಲಿಗೆ?
ಕೊನೆ ಮುಟ್ಟುವುದಾದರೂ ಹೇಗೆ?
ಕಾಣದ ಗಮ್ಯ, ಅನಾಥ ಭಾವ
ಹುಟ್ಟು ಅರಸುತ್ತಿದೆ ಸಾವಿನ ಮನೆಯಂಗಳವ
ಸೋತ ಅಂಗೈಗಳಿಗಂಟಿ ನಗುತಿದೆ ಶೂನ್ಯ

ಅದೇ ಎಲ್ಲಾ… ಎಲ್ಲಾ…

Previous post ಮಾಯದ ಗಾಯ
ಮಾಯದ ಗಾಯ
Next post ಹಣತೆಯ ಹಂಗು
ಹಣತೆಯ ಹಂಗು

Related Posts

ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...
ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...

Comments 2

  1. ಗಿರೀಶ್ ವಿ
    Oct 27, 2025 Reply

    ಕಾಣದ ಗಮ್ಯ, ಕಾಣುವ ಶೂನ್ಯ… ಗಹನವಾದ ಪರಿಕಲ್ಪನೆಗಳು ಸರ್.

  2. ಜಾಹ್ನವಿ ಬೆಂಗಳೂರು
    Nov 7, 2025 Reply

    ಸೋಲು- ಗೆಲುವು ಎರಡೂ ನಮ್ಮ ನಮ್ಮ perceptions….. ಜಗದ ದುಃಖಕ್ಕೇಲ್ಲಾ ಸೋಲೇ ಕಾರಣವಲ್ಲಾ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
September 6, 2023
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
Copyright © 2025 Bayalu