Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುಳ್ಳು ಅನ್ನೋದು…
Share:
Poems April 6, 2023 ಜ್ಯೋತಿಲಿಂಗಪ್ಪ

ಸುಳ್ಳು ಅನ್ನೋದು…

ನಾ ಭಕ್ತನಾಗದೆ ನೀ ದೇವನಾದೆಯಾ
ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ
ಕೂಡಿ ಕೊಂಡಾಡುವ ಭಾವ
ಭಾವ ತಪ್ಪಿದ ಇಜ್ಜೋಡು

ಕತ್ತಲೊಳಗೆ ಬೆತ್ತಲಾಟ
ಅಂಗಣದೊಳಗಾಡುವ ಆರು ಗಿಳಿವಿಂಡು
ಒಂದ್ಹತ್ತಿ ಒಂದಿಳಿದು ಚೆಲ್ಲಾಟ

ಉಪ್ಪು ನೀರಲಿ ನೀರಾದರೆ
ನೀರು ಉಪ್ಪಾಗದೇ
ಕಣ್ಣ ಮುಚ್ಚಿದರೂ ಕಾಣುವುದು ಕಣ್ಣು
ಕಣ್ಣು ಕಂಡರೂ ಕಣ್ಣ ಮುಚ್ಚುವುದು
ನೀರಲಿಳಿದೂ ಈಸದೆ ನೀರಾಸೆ

ಒಂದೇ ರುಚಿಯ ಒಪ್ಪದು ಈ ನಾಲಿಗೆ
ಒಂದೇ ದೈವದ ಎಂಜಲು ರುಚಿಗಾಣದು

ಕಣ್ಣ ಚೆಲ್ಲುವ ಕೇಡು ಬೆರಗು.

**** **** ****

ಈ
ಸುಳ್ಳು ಸುಳ್ಳೂ
ಅನ್ನೋದು ಏನು ಗೊತ್ತೇ
ಇಲ್ಲಾ

ಕಣ್ಣೊಂದು ನೋಡಿತು ನಾನೊಂದು ನೋಡಿದೆ
ಕಿವಿಯೊಂದು ಕೇಳಿತು ನಾನೊಂದು ಕೇಳಿದೆ

ನೋಡಿದ್ದು ಕೇಳಿದ್ದು ಎರಡೂ ನಿಜ ಎರಡೂ ಸುಳ್ಳು
ಎರಡರ ನಡುವಿನ ಸಂದೇಹಿ ನಾನು
ಸುಳ್ಳಾ….

ನಿಜಾ ಹೇಳಿ ಪ್ಲೀಸ್

ಕಣ್ಣಾಸೆಗೆ ನೋಡುವುದು ಬಿಡೆ
ಕಿವಿಯಾಸೆಗೆ ಕೇಳುವುದು ಬಿಡೆ

ಬಿಟ್ಟಿ ಆಸೆ ಬಿಡದ ಬಿಡೆ

ಈ
ಸುಳ್ಳು ಅನ್ನೋದು…

Previous post ನಾನೆಂಬುದ ಅಳಿದು…
ನಾನೆಂಬುದ ಅಳಿದು…
Next post ಹೀಗೊಂದು ಸಂವಾದ…
ಹೀಗೊಂದು ಸಂವಾದ…

Related Posts

ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 3

  1. Kumar Tumkur
    Apr 10, 2023 Reply

    ನಾ ಭಕ್ತನಾಗದೇ ನೀ ದೇವನಾಗಲಾರೆ…. ಅರಿವಿನ ಅಳತೆ ಎಲ್ಲಿಂದ ಎಲ್ಲಿಗೆ??? ಅರ್ಥಪೂರ್ಣ ಕವನಗಳು👏👏

  2. Rajeev Salva
    Apr 10, 2023 Reply

    ಕಣ್ಣು ನೋಡುವುದು, ನಾನು ನೋಡುವುದು ಬೇರೆಯಾಗಿವೆ ಎಂಬ ಗ್ರಹಿಕೆಯಲ್ಲಿಯೇ ಬದುಕಿನ ಅಸಮತೋಲನೆ ಇದೆ.

  3. Padmalaya
    May 9, 2023 Reply

    ಸಂದೇಹ ಸುಳ್ಳ???

Leave a Reply to Rajeev Salva Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಭೃತ್ಯಾಚಾರ
ಭೃತ್ಯಾಚಾರ
June 5, 2021
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
October 5, 2021
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
Copyright © 2026 Bayalu