Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸನ್ಯಾಸ ದೀಕ್ಷೆ
Share:
Poems June 12, 2025 ಜಬೀವುಲ್ಲಾ ಎಂ.ಅಸದ್

ಸನ್ಯಾಸ ದೀಕ್ಷೆ

ತುಂಬಿದ ಅಹಂ- ಸ್ವಾರ್ಥದ ಚೀಲವನು
ಬಯಲಿಗೊಯ್ದು ಸುರಿದು
ಸ್ವತಃ ಖಾಲಿಯಾಗಿ
ಸಂಭ್ರಮಿಸುವುದು – ಸನ್ಯಾಸ

ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ
ಬೇರು ಬಿಟ್ಟು ಬಿಸಿಲು ಗಾಳಿಗೆ ತೂಗಿ
ನೆರಳು, ಫಲ ನೀಡಿ
ಜೀವ ಸಂಕುಲಕೆ ನೆರವಾಗುವುದು – ಸನ್ಯಾಸ

ಇರುವುದನ್ನೆಲ್ಲ ಕಳೆದುಕೊಂಡು
ಪಡೆದದ್ದೆಲ್ಲವ ಹಂಚಿ ಬರಡಾಗಿ
ಬರಿಗೈಗಳ ಕಂಡು
ತಾನೇ ಧನ್ಯಗೊಳ್ಳುವುದು – ಸನ್ಯಾಸ

ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು,
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು – ಸನ್ಯಾಸ

ಸೂರ್ಯನೊಂದಿಗೆ ಎದ್ದು
ಚಂದಿರನೊಟ್ಟಿಗೆ ಆಕಳಿಸಿ
ಕಾಲದೊಂದಿಗೆ ಕೂಡಿ
ಲೋಕದ ಹೊಲಸು ಗುಡಿಸುವುದು – ಸನ್ಯಾಸ

ಹಕ್ಕಿಯ ರೆಕ್ಕೆ ಸವರಿ, ಚಿಗುರುವ ಎಲೆಗೆ ನಮಿಸಿ
ಅರಳುವ ಹೂವಿಗೆ ಮುತ್ತಿಟ್ಟು
ಮಗುವಂತೆ ಮಕ್ಕಳೊಟ್ಟಿಗೆ
ಆಡಿ ದಣಿಯುವುದು – ಸನ್ಯಾಸ!

ಬಿದಿರ ಮೆಳೆಯ ನಡುವೆ ಕೂತು
ಜಗದ ಸಂತೆಯ ಮರೆತು
ಕೊಳಲ ದೇಹಕೆ ಉಸಿರ ಸುರಿದು
ಪ್ರಕೃತಿಗೆ ಕೃತಜ್ಞನಾಗುವುದು – ಸನ್ಯಾಸ!

Previous post ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
Next post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...

Comments 2

  1. Pro. Mallesh K.S, Mysuru
    Jun 12, 2025 Reply

    ಸನ್ಯಾಸ ಕವನದ ಹೂರಣ ಚೆನ್ನಾಗಿದೆ. ಆದರೆ ಗದ್ಯ ಪದ್ಯದ ಮಿಶ್ರಣದಂತಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಜಬೀವುಲ್ಲಾ ಎಂ ಅಸದರವರ ಸನ್ಯಾಸ ದೀಕ್ಷೆ ಕವನ 👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
Copyright © 2026 Bayalu