Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣು ಮೆಟ್ಟಿದ ದಾರಿ
Share:
Poems October 5, 2021 ಜ್ಯೋತಿಲಿಂಗಪ್ಪ

ಮಣ್ಣು ಮೆಟ್ಟಿದ ದಾರಿ

ಈ
ಸಿಟ್ಟು ದ್ವೇಷ
ಪ್ರೇಮ ಕಾಮ ಮದ…
ಎಲ್ಲಾ ನಾನು ಹೊತ್ತು
ಹೋಗುವನೇ…

ಈ
ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ

ಇದೆಲ್ಲಾ ಮಣ್ಣಾಗುವುದು
ಇದ್ದೇ ಇದೆ
ನಾನು ಮಣ್ಣಾಗುವ ಮೊದಲು
ಮಣ್ಣಾಗವು

ಬಿಡಪ್ಪಾ
ನನ್ನ ಹೆಜ್ಜೆಯ ದಾರಿ
ನಿನ್ನ ಹೆಜ್ಜೆಯ ದಾರಿ
ಬೇರೇನೂ…

ಮಣ್ಣು ಮೆತ್ತಿದ ದಾರಿ ನನ್ನದು
ಮಣ್ಣು ಮೆಟ್ಟಿದ ದಾರಿ ನಿನ್ನದು

ನಾನು
ಯೋಚಿಸುದುದೇ ನನ್ನ
ಪ್ರಜ್ಞೆಯೇ
ಅಲ್ಲಾ
ನನ್ನ ಪ್ರಜ್ಞೆ ನನ್ನ ಯೋಚನೆಯ
ಎಚ್ಚರದಲಿರಿಸಿದೆ

ಕಣ್ಣಿನ ತಂಪು
ಕಿವಿಯ ಇಂಪು
ಎಲ್ಲಾ ಸುಕ್ಕು

ಮಾಗಿದೆ ಕಾಯ
ಇಲ್ಲೇ ಎಲ್ಲೋ ಇದೆ
ಮರೆವು

ಅರಳಿದ ಹೂವೇ
ನೀನಿರು ನಾನೋಗುವೆ.

Previous post ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
Next post ಎರಡು ಎಲ್ಲಿ?
ಎರಡು ಎಲ್ಲಿ?

Related Posts

ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Comments 1

  1. Padmalaya
    Oct 6, 2021 Reply

    ಬಹಳ ಚೆನ್ನಾಗಿ ಹೃದಯ ಹದವಾಗುಯತ್ತಿರುವ ಪರಿಯೊಂದನ್ನ ಈ ಕವನ ನನಗೆ ಸೂಚಿಸುತ್ತಿದೆ. ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ನ್ಯಾಯೋಚಿತವಾಗಿದೆ….

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
Copyright © 2025 Bayalu