Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕ ಬೆಂಬತ್ತಿ…
Share:
Poems November 9, 2021 ಕೆ.ಆರ್ ಮಂಗಳಾ

ಬೆಳಕ ಬೆಂಬತ್ತಿ…

ಸಾಲು ಸಾಲು ಹಣತೆಗಳ ಹಚ್ಚಿ
ನೋಡುತ್ತಲೇ ಇದೆ
ಆಸೆಯಿಂದ ಈ ಮನ
ಬೆಳಕ ಗೋರಲು… ಒಳಗ ಬೆಳಗಲು…

ಕತ್ತಲೆಯ ಭಯವೋ, ಬೆಳಕಿನ ಮೋಹವೋ..

ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ
ಅನಾದಿ ಕಾಲದ ಅಜ್ಞಾನದ ಕಮಟು
ಆ ದೂಳು, ಆ ಗದ್ದಲ
ಸಾವಿರ ಸಾವಿರ ಇರುಳು
ಬಸಿದು ಕುಳಿತಂತೆ ನನ್ನೊಳಗೆ
ದಟ್ಟಗತ್ತಲು, ಕಾರ್ಗತ್ತಲು, ಕಡುಗತ್ತಲು
ಭವದ ಈ ಗವಗತ್ತಲನಟ್ಟಲು
ಸಾವಿರ ಸೂರ್ಯರೂ ಸಾಲಲಿಕ್ಕಿಲ್ಲ!

ಅಷ್ಟಿಷ್ಟು ಬತ್ತಿಗೆ, ಇಷ್ಟಿಷ್ಟು ಎಣ್ಣೆ
ಉರಿಯು ದಾಟುತಲಿರುವ
ಮರ್ಮವ ಕಾಣಬಲ್ಲೆಯಾ?

ಕಾಯ- ಜೀವದ ಬೆಸುಗೆಯಲಿ
ಅನೂಹ್ಯ ಪ್ರಕೃತಿಯೊಳಿರುವ
ಜೀವಚೈತನ್ಯವ ನೋಡಬಲ್ಲೆಯಾ?

-ಗುರು ಹಚ್ಚಿದ ಕಿಡಿಯಲ್ಲಿ
ಕಪ್ಪಾದ ಕಣ್ಣಾಲೆಯೊಳಗೊಂದು ಮಿಂಚು!
ಕಂದೀಲು ಹಿಡಿದು
ಬೆಳಕ ಹುಡುಕಲು ಹೊರಟ
ಮನ ನಾಚಿತ್ತು… ನಾಚಿತ್ತು…

Previous post ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
Next post ನಾನು ಯಾರು?
ನಾನು ಯಾರು?

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
Copyright © 2025 Bayalu