Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೊಂದು ನೀರ್ಗುಳ್ಳೆ
Share:
Poems September 6, 2023 ಕೆ.ಆರ್ ಮಂಗಳಾ

ನಾನೊಂದು ನೀರ್ಗುಳ್ಳೆ

ಕಾಲದ ಊದುಗೊಳವೆಯಲಿ
ನಿರಂತರವಾಗಿ ಉಕ್ಕುತಿವೆ
ಅನಂತಾನಂತ ನೀರ್ಗುಳ್ಳೆ
ಎಲ್ಲಕೂ ಒಂದೇ ಹುಟ್ಟು
ಒಂದೇ ಬಗೆಯ ಸಂಯೋಜನೆ

ನಾ ಬೇರೆ ನೀ ಬೇರೆ
ಅಂವ ಬೇರೆ ಇಂವ ಬೇರೆ
ನಾ ಮೇಲು ನೀ ಕೆಳಗೆ
ಅಕಿ ಹೆಚ್ಚು ಇಕಿ ಕಡಿಮೆ
ಗುಳ್ಳೆಯ ತೆಳು ಗೆರೆಯ ಆಚೀಚೆ
ಜಗದುದ್ದಗಲಕ್ಕೂ ತಾರತಮ್ಯ

ನೋಡುನೋಡುತ್ತಲೇ
ಇಲ್ಲೇ ಇದ್ದದ್ದು, ಅತ್ತ ಸರಿದದ್ದು
ಈಗ ಚಿಮ್ಮಿದ್ದು, ಮೇಲೆ ಹಾರಿದ್ದು
ಇಲ್ಲವಾಗುವ ನೀರ್ಗುಳ್ಳೆಗಳಲ್ಲಿ
ಯಾವುದಕೆ ಪೈಪೋಟಿ?
ಹಿರಿದಾದರೇನು, ಕಿರಿದಾದರೇನು
ಬಣ್ಣ ಯಾವುದಾದರೇನು
ಅಮರತ್ವವುಂಟೆ ಗುಳ್ಳೆಗೆ?

ಮುಟ್ಟಿದರೆ ಫಟ್ಟೆನುವ ಗುಳ್ಳೆ
ತನ್ನಲ್ಲಿ ತಾನೇ ಊದೆಬ್ಬಿಸುವ
ಮೋಹ, ಮದ, ಮತ್ಸರ
ದ್ವೇಷ, ದುರ್ಗುಣಗಳ
ಒಂದಲ್ಲಾ ಎರಡಲ್ಲಾ
ನೂರಾರು ಬುರುಜುಗಳು
ಗುಳ್ಳೆಯೊಳಗಣ ಗುಳ್ಳೆಗಳ
ಈ ಮೆಳ್ಳಗಣ್ಣಿನ ನೋಟಕೆ
ಕಂಡೀತೇ ಲೋಕ ಸತ್ಯ?

ನಿನ್ನೊಳು ನೀನಿರು ಎನುವ
ಗುರು ಸೂತ್ರವ ಹಿಡಿದು
ಈ ಪರಕಾಯ ಪೊರೆಗಳ
ಹಂಗು ಕಳಚಲೇ ಬೇಕು…
ಕೊರಗಲಿಕೆ, ಬೇಯಲಿಕೆ
ಸಮಯವೆಲ್ಲಿದೆ ಎನುವ
ನಶ್ವರತೆಯ ಸತ್ಯವನು
ಕಣ್ಬಿಟ್ಟು ನೋಡಲೇ ಬೇಕು.

ಇಬ್ಬನಿಯ ಹನಿ ಎನ್ನಿ
ಮಿನುಗಿ ಮರೆಯಾಗೋ ಮಿಂಚೆನ್ನಿ,
ಭ್ರಮೆಯೆನ್ನಿ, ಕನಸೆನ್ನಿ,
ಮೋಡದ ನೆರಳೆನ್ನಿ,
ಅಲೆಯೆನ್ನಿ, ಇಂಚರವೆನ್ನಿ,
ಬೀಸಿ ಹೋಗುವ ಗಾಳಿಯೆನ್ನಿ,
ಹಬೆ ಎನ್ನಿ, ಬಾಷ್ಪವೆನ್ನಿ…
ಏನಾದರೂ ಅನ್ನಿ ಈ ಗುಳ್ಳೆಗೆ

ಅನಂತ ಕಾಲದಲಿ, ಅನಂತ ವಸ್ತುವಿನಲಿ
ಅನಂತ ಜಾಗದಲಿ
ಅನಂತಾನಂತ ಗುಳ್ಳೆಗಳಲಿ
ಕ್ಷಣ ಮಾತ್ರವೇ ಇರುವ,
ಯಾವಾಗ ಬೇಕಾದರೂ ಸಿಡಿವ
ನೀರ ನಿರ್ಮಿತಿ ಮಾತ್ರವೇ
ನಾನೆನುವ ನಿಜವು ಮರೆಯದಿರಲಿ.

Previous post ಹಾಯ್ಕು
ಹಾಯ್ಕು
Next post ವಚನ – ಚಿಂತನ
ವಚನ – ಚಿಂತನ

Related Posts

ಸಂತೆಯ ಸಂತ
Share:
Poems

ಸಂತೆಯ ಸಂತ

September 7, 2020 ಜ್ಯೋತಿಲಿಂಗಪ್ಪ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ ಕಣ್ಣಿಗೆ ಕರುಳು ಇರಬಾರದು ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ ಈ ಮೂರು ಮೊಳದ...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
Copyright © 2025 Bayalu