Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನುವಿನ ಉಪಟಳ
Share:
Poems December 13, 2024 ಕೆ.ಆರ್ ಮಂಗಳಾ

ನಾನುವಿನ ಉಪಟಳ

ಕಣ್ಣಪಾಪೆಯಲಿ ನಾನವಿತು
ಕುಳಿತಿರಲು
ಕಾಣುವ ನೋಟಗಳಿಗೆ
ಲೆಕ್ಕ ಹಾಕುವರಾರು?

ತಲೆಯೊಳಗೆ ನಾನೆಂಬುದು
ತತ್ತಿ ಇಟ್ಟಿರುವಾಗ
ಬರುವ ಯೋಚನೆಗಳನು
ಎಣಿಸಿದವರಾರು?

ಮನದ ಮೂಲೆಮೂಲೆಯಲು
ನಾನೇ ಮಲಗಿರುವಾಗ
ಜಗದ ಸೊಬಗಿಗೆ
ಜಾಗವೆಲ್ಲಿಹುದು?

ಮೌನದ ಬಲೆಯೊಳಗೂ
ಸ್ವಗತಗಳೇ ತುಂಬಿರಲು
ಖಾಲಿಯಾಗುವ ಗಳಿಗೆ
ಬರುವುದುಂಟೇನು?

ನಾಲಿಗೆಯ ತುಂಬೆಲ್ಲ
ರುಚಿಗಳೇ ಮೆತ್ತಿರಲು
ಸಹಜತೆಯ ಸವಿಯದಕೆ
ತಿಳಿದಿತೇನು?

ನೋಟ- ಕೂಟಗಳು
ಜೊತೆಯಾಗಿ ಎಳೆಯಲು
ಬಾಳ ಬಂಡಿಯು ತನ್ನ
ಗುರಿ ಸೇರುವುದೇನು?

ಕಾಗದದ ದೋಣಿಯನೇ
ನಾನೆಂದುಕೊಂಡಾಗ
ಭವದಲೆಯ ಹೊಡೆತವನು
ತಡೆಯಲಾದೀತೆ?
ತಾ ಬರಿಯ ಗಾಳಿಪಟ
ಸೂತ್ರ ಇನ್ನಾರೋ
ಎಂದುಕೊಂಡಂತೆ ಹಾರು ಹಕ್ಕಿ
ಅಹಮಿಕೆಯ ಅರಮನೆಯೇ
ನನ್ನದೆನುವಾಗ
ಇರುವಿಕೆಯ ಆಗಸಕೆ
ಹಾರಲಾದೀತೇ?

ತನ್ನದಲ್ಲದ ತನುವಿನಲಿ
ಕೋಟೆಯೊಳು ಕೋಟೆ ಕಟ್ಟಿ
ಕಾಮಿಸುತಾ ಕಲ್ಪಿಸುತಾ
ಒಡೆತನ ಸಾಧಿಸಿಹ
ಮನದ ಮುಖ ಕಳಚದೆ
ಅಹಮಿಕೆ ಕರಗದು
ಅಂತರಂಗ ಕಾಣದು
ನಾನು ಮರೆಯಾಗದು…

Previous post ನೀರು… ಬರಿ ನೀರೇ?
ನೀರು… ಬರಿ ನೀರೇ?
Next post ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 1

  1. Padmalaya
    Dec 13, 2024 Reply

    ಬಿಡಾಕಾಗದಿದ್ದರೆ ಪೂಜೆ ಮಾಡಬಹುದು…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಶರಣ- ಎಂದರೆ…
ಶರಣ- ಎಂದರೆ…
March 6, 2020
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
Copyright © 2025 Bayalu