Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೊಳಗಣ ಮರೀಚಿಕೆ
Share:
Poems February 5, 2020 ಪದ್ಮಾಲಯ ನಾಗರಾಜ್

ನನ್ನೊಳಗಣ ಮರೀಚಿಕೆ

ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…

ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…

ಈ ಊರು
ಪ್ರತಿಮಾ ವಿಧಾನದ ಭಾವಸುಧೆ…

ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…

ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…

ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…

ಈ ಊರು
ವಾಸ್ತವ ಅರಿಯದಾ ದರ್ಶನ…

ಈ ಊರು
ಗತ ಚರಿತೆಗಳ ಅನುಶಾಸನ…

ಈ ಊರು
ಅಗಣಿತ ಕಲೆಗಳ ಅಂಗಳ…

ಈ ಊರು
ನೀತಿಪಾಠಗಳ ತವರೂರು..

ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…

ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…

ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…

ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…

ಈ ಊರು
ಪರಂಪರಾ ರಚನೆಗಳ ಊಳಿಗ…

ಈ ಊರು
ಕೈಗೆಟುಕದಾ ಕನಸು…

ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…

ಈ ಊರು
ಸದಾ ಬೆಂಬಿಡದ ಮರೀಚಿಕೆ

ಈ ಊರು
ಕಡುಖಾಲಿಯಾದ ಮಹಮೌನ…

ಈ ಊರು
ಎಂದೂ ಖಾಲಿಯಾಗದಾ ನಶ್ವರ…

ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…

ಈ ಊರು
ಏನೂ ಇಲ್ಲದ ನಿರಂತರ…

ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.

Previous post ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
Next post ಶರಣ- ಎಂದರೆ…
ಶರಣ- ಎಂದರೆ…

Related Posts

ನನ್ನ-ನಿನ್ನ ನಡುವೆ
Share:
Poems

ನನ್ನ-ನಿನ್ನ ನಡುವೆ

June 5, 2021 ಕೆ.ಆರ್ ಮಂಗಳಾ
ನನ್ನ-ನಿನ್ನ ನಡುವೆ ಗೋಡೆ ಎಬ್ಬಿಸಿದವರಾರು ಪರದೆ ಬಿಟ್ಟವರಾರು? ಕತ್ತಲು ತುಂಬಿದವರಾರು? ಮಂಜು ಕವಿಸಿದವರಾರು? ನಿನ್ನಿಂದ ನನ್ನ ದೂರ ಮಾಡಿದವರಾರು? ನನ್ನ-ನಿನ್ನ ನಡುವೆ ಕಂದ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Comments 2

  1. ಶ್ರೀಶೈಲ, ಗದಗ
    Feb 6, 2020 Reply

    ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?

  2. Lingaraj Patil
    Feb 9, 2020 Reply

    ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
    ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಕಣ್ಣ ದೀಪ
ಕಣ್ಣ ದೀಪ
September 7, 2021
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಹಣತೆ ಸಾಕು
ಹಣತೆ ಸಾಕು
September 14, 2024
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
Copyright © 2025 Bayalu