Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೊಳಗಣ ಮರೀಚಿಕೆ
Share:
Poems February 5, 2020 ಪದ್ಮಾಲಯ ನಾಗರಾಜ್

ನನ್ನೊಳಗಣ ಮರೀಚಿಕೆ

ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…

ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…

ಈ ಊರು
ಪ್ರತಿಮಾ ವಿಧಾನದ ಭಾವಸುಧೆ…

ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…

ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…

ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…

ಈ ಊರು
ವಾಸ್ತವ ಅರಿಯದಾ ದರ್ಶನ…

ಈ ಊರು
ಗತ ಚರಿತೆಗಳ ಅನುಶಾಸನ…

ಈ ಊರು
ಅಗಣಿತ ಕಲೆಗಳ ಅಂಗಳ…

ಈ ಊರು
ನೀತಿಪಾಠಗಳ ತವರೂರು..

ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…

ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…

ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…

ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…

ಈ ಊರು
ಪರಂಪರಾ ರಚನೆಗಳ ಊಳಿಗ…

ಈ ಊರು
ಕೈಗೆಟುಕದಾ ಕನಸು…

ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…

ಈ ಊರು
ಸದಾ ಬೆಂಬಿಡದ ಮರೀಚಿಕೆ

ಈ ಊರು
ಕಡುಖಾಲಿಯಾದ ಮಹಮೌನ…

ಈ ಊರು
ಎಂದೂ ಖಾಲಿಯಾಗದಾ ನಶ್ವರ…

ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…

ಈ ಊರು
ಏನೂ ಇಲ್ಲದ ನಿರಂತರ…

ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.

Previous post ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
Next post ಶರಣ- ಎಂದರೆ…
ಶರಣ- ಎಂದರೆ…

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 2

  1. ಶ್ರೀಶೈಲ, ಗದಗ
    Feb 6, 2020 Reply

    ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?

  2. Lingaraj Patil
    Feb 9, 2020 Reply

    ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
    ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಶರಣನಾಗುವುದು…
ಶರಣನಾಗುವುದು…
February 10, 2023
ಈ  ದಾರಿ…
ಈ ದಾರಿ…
May 10, 2023
Copyright © 2025 Bayalu