Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿ ಬಿಡಿ…
Share:
Poems December 6, 2020 ಕೆ.ಆರ್ ಮಂಗಳಾ

ದಾರಿ ಬಿಡಿ…

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ನೆನಪುಗಳೇ ಜಗ್ಗದಿರಿ ಹಿಂದಕ್ಕೆ
ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ
ಕಳೆದ ಕಾಲಗಳಿಗೆಳೆದು
ಸಮಯ ಹಾಳುಮಾಡದಿರಿ
ಕನಸುಗಳೇ, ಬಣ್ಣಬಣ್ಣದ ಚಿತ್ರಗಳ ಬಿಡಿಸಿ
ಮಾಯಾಲೋಕಕೆ ಹೊತ್ತೊಯ್ಯದಿರಿ
ಏಳದಂತೆ ಮತ್ತೆ ನಿದ್ದೆಗೆ ದೂಡದಿರಿ
ಹಿಡಿದ ಹಾದಿಯ ಮರೆಸದಿರಿ

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ಅಡಿಗಡಿಗೆ ಎಡತಾಕುವ ಕಿರಿಕಿರಿಗಳೇ
ಈ ದಾರಿಯಲಿ ಚೂಪುಗಲ್ಲಾಗದಿರಿ
ಅತ್ತಿಲಿತ್ತ ಜಗ್ಗಿ ಹೈರಾಣ ಮಾಡುತ್ತಾ
ನಡೆಯ ವೇಗ ತಗ್ಗಿಸದಿರಿ
ಅಳುಕಿನ ಮಾತುಗಳೇ,
ತಲೆಯಲೆಲ್ಲೋ ಕುಳಿತು
ನಿನ್ನಿಂದಾಗದು ಈ ಪಯಣವೆಂದು
ಧೈರ್ಯಗುಂದಿಸುತಾ
ಎದೆಯ ಕುಡಿಗೆ ನೀರೆರಚದಿರಿ
ಹೆಜ್ಜೆಗಳ ಹುರುಪ ಕಸಿಯದಿರಿ

ಮನದ ಸಂದಣಿಯಲ್ಲಿ ಜಾಗ ಮಾಡಿಕೊಳ್ಳುತ್ತಾ
ನಡೆಯಲೇ ಬೇಕಿದೆ ನನ್ನ ತವರಿಗೆ
ಕೈಮುಗಿದು ಕೇಳುವೆನು
ಮನಸಿನಾಟಗಳೇ ದಾರಿಬಿಡಿ
ಸಮಯವಿಲ್ಲ ಎನ್ನ ಬಳಿ ದಾರಿಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ…

Previous post ಸುಮ್ಮನೆ ಇರು
ಸುಮ್ಮನೆ ಇರು
Next post ದಾಸೋಹ ತತ್ವ
ದಾಸೋಹ ತತ್ವ

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ನೆಲದ ನಿಧಾನ
ನೆಲದ ನಿಧಾನ
April 29, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
ಸನಾತನ ಧರ್ಮ
ಸನಾತನ ಧರ್ಮ
October 10, 2023
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
Copyright © 2026 Bayalu